ನ್ಯೂಸ್ರಾಜ್ಯ


ನಮೋ ಬ್ರಿಗೇಡ್‌ನಿಂದ ನಗರದಲ್ಲಿ ಬೈಕ್ ರ‍್ಯಾಲಿ, ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿ ಮಾಡಲು ಸಂಕಲ್ಪ ಮಾಡಿ: ಸೂಲಿಬೆಲೆ ಮನವಿ

ನಮೋ ಬ್ರಿಗೇಡ್‌ನಿಂದ ನಗರದಲ್ಲಿ ಬೈಕ್ ರ‍್ಯಾಲಿ, ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿ ಮಾಡಲು ಸಂಕಲ್ಪ ಮಾಡಿ: ಸೂಲಿಬೆಲೆ ಮನವಿ


(BIDAR): ಬಸವಕಲ್ಯಾಣ: ಚಿಂತಕ ಚಕ್ರವರ್ತಿ ಸೂಲಿ ಬೆಲೆ ನೇತೃತ್ವದ ನಮೋ ಬ್ರಿಗೇಡ್‌ನಿಂದ ನಗರದಲ್ಲಿ ಬೈಕ್ ರ‍್ಯಾಲಿ ಜರುಗಿತು.ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎನ್ನುವ ಆಶಯದೊಂದಿಗೆ ಚಕ್ರವರ್ತಿ ಸೂಲಿ ಬೆಲೆ ಅವರ ನೇತೃತ್ವದಲ್ಲಿ ನಮೋ ಬ್ರೀಗೆಡ್ 2.0 ಸಂಘಟನೆಯಿಂದ ರಾಜ್ಯದಾದ್ಯಂತ ಹಮ್ಮಿಕೊಂಡ ಬೈಕ್ ರ‍್ಯಾಲಿಯು ನಗರಕ್ಕೆ ಆಗಮಿಸಿ, ನಗರದ ಪ್ರಮುಖರ ಬೀದಿಗಳಲ್ಲಿ ಸಂಚರಿಸಿತು. ನಗರದ ನಾರಾಯಣಪೂರ ಕ್ರಾಸ್ ಮೂಲಕ ನಗರಕ್ಕೆ ಪ್ರವೇಶಿಸಿದ ಬೈಕ್ ರ‍್ಯಾಲಿಯು ನಗರದ ಹೊರವಲಯದ ಬಸವ ಮಹಾಮನೆ ಆವರಣದಿಂದ ಮುಖ್ಯರಸ್ತೆ ಮಾರ್ಗವಾಗಿ ತ್ರಿಪುರಾಂತ, ಹರಳಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಗಾಂಧಿ ವೃತ್ತದ ಮಾರ್ಗವಾಗಿ ನಗರದ ಐತಿಹಾಸಿಕ ಬಸವೇಶ್ವರ ಮಂದಿರಕ್ಕೆ ತಲುಪಿತ್ತು. ಬಸವೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ಐತಿಹಾಸಿಕ ಪರುಷಕಟ್ಟೆಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
ಬೈಕ್ ರ‍್ಯಾಲಿಯುದ್ದಕ್ಕೂ ಭಾರತಾಂಬೆ ಹೆಸರಲ್ಲಿ ಜಯಘೋಷ ಹಾಕುತ್ತ, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅಧಿತ್ಯನಾಥ ಅವರ ಹೆಸರಿನಲ್ಲಿ ಘೋಷಣೆ ಹಾಕಲಾಯಿತು.
ಬಸವ ಮಹಾಮನೆ ಪರಿಸರದಲ್ಲಿ ಬಜರಂಗದಳ ತಾಲೂಕು ಅಧ್ಯಕ್ಷ ರವಿ ನಾವದಗಿಕರ್ ನೇತೃತ್ವದಲ್ಲಿ ಸೂಲಿಬೆಲೆ ಅವರಿಗೆ ಸನ್ಮಾನಿಸಿ ಬೈಕ್ ರ‍್ಯಾಲಿಗೆ ಸ್ವಾಗತಿಸಲಾಯಿತು. ಶಾಸಕ ಶರಣು ಸಲಗರ್, ನಮೋ ಬ್ರಿಗೇಡ್ ತಾಲೂಕು ಸಂಚಾಲಕ ಅನ್ಮೂಲ ಪಸರಗೆ, ಪ್ರಮುಖರಾದ ರಾಜಕುಮಾರ ಸಿರ್ಗಾಪೂರ, ಶಿವಾನಂದ ಗೋರ್ಟೆ, ಯುವರಾಜ ಪಾಟೀಲ್, ಮಹಾದೇವ ಖಂಡಾಳೆ, ವೆಂಕಟೇಶ ರಾಜೋಳೆ, ರಾಮೇಶ್ವರ ಅಡಕಿಲೆ, ವಿನೋದ ಬಡಗೇಕರ್, ಸಚೀನ ಸೂರ್ಯವಂಶಿ, ಸಚಿನ ಗರುಡಕರ್, ಶ್ರೀಧರ ಮುತ್ತೆ, ಸಂದೀಪ ಜೋಜನ್, ನಿತಿನ್ ಸೂರ್ಯವಂಶಿ, ನಾಗರಾಜ ಭಂಡಾರಿ ಸೇರಿದಂತೆ ಪ್ರಮುಖರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.


ತೋಗಲೂರ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ. 2024ರಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಎಲ್ಲರು ಸಂಕಲ್ಪ ಮಾಡಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದರು.
ತೋಗಲೂರ ಗ್ರಾಮದಲ್ಲಿ ನಮೋ ಬ್ರಿಗೇಡ್‌ನಿಂದ ಆಯೋಜಿಸಿದ ಜನ ಗಣ ಮನ ಬೆಸೆಯೋಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು, ಮಹಿಳೆಯರು, ಯುವಕರು ಸೇರಿದಂತೆ ದೇಶದ ಎಲ್ಲಾ ವರ್ಗದ ಜನರ ಪ್ರಗತಿಗಾಗಿ ಹಗಲಿರಳು ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾದ ವ್ಯಕ್ತಿ ಮತ್ತೊಬ್ಬರಿಲ್ಲ, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾರೆ ಇದ್ದರು ಸಹ ಮೋದಿ ಹೆಸರಿನಲ್ಲಿ ಮತ ನೀಡಬೇಕು ಎಂದು ಕರೆ ನೀಡಿದರು.

ವರದಿ: ಉದಯ ಮುಳೆ

Leave a Reply

Your email address will not be published. Required fields are marked *

Scan the code