ಬೈಕ್ ಸವಾರ ಲಾರಿಯ ಚಕ್ರದ ಅಡಿ ಬಿದ್ದು ಸ್ಥಳದಲ್ಲೇ ಸಾವು: ಹಿಂಬದಿ ಕುಳಿತಿದ್ದ ಮಹಿಳೆ ಕಾಲು ತುಂಡು
(CHIKKAMAGALURU): ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಬಸ್ ಡಿಪೋ ಸಮೀಪ ಗ್ಯಾಸ್ ಲಾರಿ ಹರಿದು ದೇಹ ಚಿದ್ರ ಚಿದ್ರವಾಗಿ ಸ್ಥಳದಲ್ಲೇ ಬೈಕ್ ನಲ್ಲಿದ್ದ ಸವಾರ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ್ದ ಬೈಕ್ ಸವಾರ ಜಯಪುರದ ಕಲ್ಕೆರೆ ಗ್ರಾಮದ ವಿಶ್ವೆಂದ್ರರಾವ್ (42) ಹಾಗೂ ಅದೇ ಗ್ರಾಮದ ಮಹಿಳೆ ಲಕ್ಷ್ಮಿ (38) ಬಿದರಹಳ್ಳಿ ಡಿಪೋ ಸಮೀಪ ಸಾಗುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಬೀಡಾಡಿ ದನಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಎದುರಿನಿಂದ ಬಂದ ಗ್ಯಾಸ್ ಲಾರಿ ಬೈಕ್ ಸವಾರನ ಮೇಲೆ ಹರಿದು ಸ್ಥಳದಲ್ಲೇ ಸಾವು ಎಂದು ತಿಳಿದುಬಂದಿದೆ.
ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಲಕ್ಷ್ಮಿ ಎಂಬವರಿಗೆ ಕಾಲು ಕಟ್ಟಾಗಿ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.