ಅರಣ್ಯ ಸಿಬ್ಬಂದಿಗಳ ನಿದ್ದೆಗೆಡಿಸಿದ ಬಿಟ್ಟಮ್ಮ ಅಂಡ್ ಗ್ಯಾಂಗ್
(CHIKKAMAGALURU): ಬಿಟ್ಟಮ್ಮ ಅಂಡ್ ಗ್ಯಾಂಗ್ ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ಬಿಟ್ಟಮ್ಮ ಅಂಡ್ ಗ್ಯಾಂಗ್ ಇದೀಗ ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲೂಕು ಪ್ರವೇಶಿಸಿ ಕೆ.ಆರ್ ಪೇಟೆ ಕಡೆಗೆ ಹೆಜ್ಜೆ ಇಟ್ಟಿದೆ.
ಬಿಟ್ಟಮ್ಮ ಅಂಡ್ ಗ್ಯಾಂಗ್ ನಲ್ಲಿ ಹೆಚ್ಚು ಮರಿ ಆನೆಗಳು ಇದ್ದು ಅದರ ಜೊತೆ ಮದುವೆರೀದ ಭೀಮಸಹ ಇದ್ದಾನೆ ಅದರಿಂದ ಚಿಕ್ಕಮಗಳೂರು ಜಿಲ್ಲಾಡಳಿತವು ಮುನ್ನೆಚ್ಚರಿಕೆಯಿಂದ ಸುತ್ತಲಿನ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ ಹಾಗೂ 70ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಆನೆಯ ಸಂಚಾರವನ್ನು ಗಮನಿಸುತ್ತಿದ್ದಾರೆ.
ನಗರದ ಕಡೆಗೆ ದಾಂಗುಡಿ ಇಟ್ಟಿರುವ 28 ಆನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಮುಗ್ತಿಹಳ್ಳಿ, ಕದ್ರಿಮಿದ್ರಿ, ಶ್ರೀನಿವಾಸ ನಗರ, ಆದಿಶಕ್ತಿನಗರ, ಕೆಸವಿನ ಮನೆ, ಮತ್ತಾವರ, ನಲ್ಲೂರು, ರಾಂಪುರ, ಗವನಹಳ್ಳಿ, ತೇಗೂರು, ದಂಬದಹಳ್ಳಿ ಮತ್ತು ದುಮ್ಮಿಗೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144ಪ್ರಕಾರ ನಿಷೇದಾಜ್ಞೆ ಹೊರಡಿಸಿ ಉಪ ವಿಭಾಗಾಧಿಕಾರಿ ದಲ್ಜೀತ್ ಕುಮಾರ್ ತಿಳಿಸಿದ್ದಾರೆ. ಗ್ಯಾಂಗ್ ನಲ್ಲಿ ಹೆಚ್ಚು ಮರಿ ಆನೆಗಳು ಇರುವುದರಿಂದ ಆನೆಗಳು ಎಚ್ಚರಿಕೆಯಿಂದ ಇರುತ್ತವೆ. ಆದಕಾರಣಕ್ಕೆ ಯಾವುದೇ ಅವಗಡ ಸಂಭವಿಸಿದಂತೆ ಆನೆ ಸಂಚಾರಿಸುವ ಗ್ರಾಮಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.