ಬೈಕ್ ಶೋರೂಮ್ಗಳಿಗು ತೆರಳಿ ಮತಯಾಚಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ.
(SHIVAMOGA) ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇದ್ದು ಸಾಗರದಲ್ಲಿ ಮತಬೇಟೆ ಆರಂಭಿಸಿದ ಬಿಜೆಪಿ ಅಭ್ಯರ್ಥಿ ಬಿ.ವ್ಯೆ.ರಾಘವೇಂದ್ರ.
ಸಾಗರದ ಪ್ರಮುಖ ಉದ್ಯಮ ಕ್ಷೇತ್ರಕ್ಕೆ ಇಂದು ಶಿವಮೊಗ್ಗ ಕ್ಷೇತ್ರದ ಬಿ.ಜೆ.ಪಿ.ಅಭ್ಯರ್ಥಿ ಬಿ.ವ್ಯೆ.ರಾಘವೇಂದ್ರರವರು ಸಾಗರ ಕೆಲವು ಉದ್ಯಮ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಇದೆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸಾಗರದ ಚೇತನ್ ಟಿ.ವಿ.ಎಸ್ ಗು ಬೇಟಿಕೊಟ್ಟ ಅವರು ಅಲ್ಲಿಯ ಉದ್ಯೋಗಿಗಳ ಬಳಿ ಮತಯಾಚಿಸಿದರು.
ಇದೆ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್ ಲಿಂಗಣ್ಣ, ಚೇತನ್ ಟಿ.ವಿ.ಎಸ್. ಮಾಲೀಕರಾದ ಕೆ.ಹೆಚ್ ಜ್ಞಾನೇಶ್ವರಪ್ಪ, ಶಂಭು, ವೆಂಕಟೇಶ್, ಜಗದೀಶ್, ಬಾಬಣ್ಣ, ಶಕೀಲ್, ಪ್ರವೀಣ್, ಚೇತು, ಅಮಿತ್, ಜೀವನ್, ಮಹೇಶ್, ಗುರು ಕಾಗೋಡು ಹಾಗೂ ಟಿವಿಎಸ್ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ