ಜಿಲ್ಲೆನ್ಯೂಸ್

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೂದಿಕೋಟೆಯ ಬಿಜೆಪಿ ಮುಖಂಡರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೂದಿಕೋಟೆಯ ಬಿಜೆಪಿ ಮುಖಂಡರು.

(KOLARA): ಬಂಗಾರಪೇಟೆ :ಬೂದಿಕೋಟೆಯ ಹಾಲು ಉತ್ಪಾದಕರ ಸಹಕಾರ ಸಂಘದ ಬಿಜೆಪಿ ಗುಂಪಿನಲ್ಲಿ ನಿರ್ದೆಶಕರಾಗಿ ಗೆದ್ದಂತಹ ಚಂದ್ರಶೇಖರ್ ಮತ್ತು ಮುನಿವೆಂಕಟಸ್ವಾಮಿ ಬಿಜೆಪಿ ತೊರೆದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಎಸ್ಎನ್ ಸಿಟಿ ನಲ್ಲಿ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಚಂದ್ರಶೇಖರ್ ಮಾತನಾಡಿ,ಬೂದಿಕೋಟೆಯಲ್ಲಿ ಸುಮಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ, ಕಳೆದ ಐದು ವರ್ಷದ ಹಿಂದೆ ನಡೆದಂತ ಡೈರಿ ಚುನಾವಣೆಯ ಅಧ್ಯಕ್ಷರ ಸ್ಥಾನಕ್ಕೆ ನಾನು ಹಾಗೂ ಮಾರ್ಕಂಡಯ್ಯೇಗೌಡ ಆಕಾಂಕ್ಷೆ ಗಳಾಗಿದ್ದೇವು ಕೆಲ ಮುಖಂಡರ ಸಮ್ಮುಖದಲ್ಲಿ ಮಾತನಾಡಿ ಅಧ್ಯಕ್ಷರ ಅವಧಿಯನ್ನು ಹಂಚಿಕೆ ಮಾಡಿಕೊಂಡು ಬಂದಿದ್ದೆವು ಆದರೆ ಅವರ ಅವಧಿ ಮುಗಿದ ನಂತರ ನನಗೆ ಅಧ್ಯಕ್ಷ ಸ್ಥಾನ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಬ್ಬ ತಾಲೂಕು ಮಟ್ಟದ ನಾಯಕನಾಗಿ ಅವರ ಕೊಟ್ಟ ಮಾತನ್ನು ಧಿಕ್ಕರಿಸಿ,ಮಾತು ತಪ್ಪಿದರೂ ಮತ್ತೆ ನನಗೆ ನಾನಾ ರೀತಿಯಲ್ಲಿ ಕಿರುಕುಳ ನೀಡಿದ್ದಾರೆ.ಈ ಚುನಾವಣೆಯಲ್ಲಿ ಸಹ ನೀನೇ ಅಧ್ಯಕ್ಷ ನಾಗು ಎಂದು ನಂಬಿಸಿ ಮೋಸ ಮಾಡಿದ್ದಾರೆ.ಈಗ ನಡೆಯುವ ಅಧ್ಯಕ್ಷರ ಚುನಾವಣೆಯಲ್ಲಿ ಮತ್ತೆ ಅವರಿಗೆ ಅಧ್ಯಕ್ಷರ ಸ್ಥಾನ ಬೇಕೆಂಬ ಮಾಹಿತಿ ಲಭ್ಯವಾದ ಹಿನ್ನೆಲೆ ಬೇಸತ್ತು ಹೊರಗೆ ಬಂದಿದ್ದೇನೆ ಎಂದರು.

ಮತ್ತೆ ನಿರ್ದೇಶಕರ ಚುನಾವಣೆಯಲ್ಲೂ ಸಹ ನನ್ನನ್ನು ಸೋಲಿಸಲು ಬಹಳ ಪ್ರಯತ್ನ ಪಟ್ಟರು. ನಾನು ಗೆದ್ದರೆ ಮತ್ತೆ ಎಲ್ಲಿ ಅಧ್ಯಕ್ಷರ ಸ್ಥಾನ ಕೇಳುತ್ತೇನೆ ಎಂದು ಸೋಲಿಸಲು ಅನೇಕ ಪ್ರಯತ್ನಗಳನ್ನು ಮಾಡಿದರು. ಆದರೆ ಅವರ ಪ್ರಯತ್ನ ವಿಫಲವಾಯಿತು. ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸಹ ನನಗೆ ಮೋಸ ಮಾಡಿದ್ದಾರೆ.

ಒಳಸಂಚು ರೂಪಿಸುವ ಇಂತಹ ಬೂದಿಕೋಟೆಯ ಬಿಜೆಪಿ ಮುಖಂಡರ ಜೊತೆ ಕೆಲಸ ಮಾಡಲು ಬೇಜಾರಾಗಿ ಆ ಪಕ್ಷವನ್ನು ತೊರೆದು ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಸೇರ್ಪಡೆಯಾಗಿದ್ದೇನೆ,ನಾನು ಯಾವುದೇ ಅಧಿಕಾರಕ್ಕಾಗಿ ಈ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿಲ್ಲ ಅವರ ಉತ್ತಮ ಸೇವೆ ಹಾಗೂ ನಡುವಳಿಕೆಗಳನ್ನು ನೋಡಿ ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಉತ್ತಮ‌ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದುರು.

ಕಾಂಗ್ರೆಸ್ ಮುಖಂಡ ಮಹದೇವಪ್ಪ ಮಾತನಾಡಿ,ಬೂದಿಕೋಟೆ ಹಲವಾರು ವರ್ಷಗಳಿಂದ ಕಾಂಗ್ರೆಸ್ ಭದ್ರಕೊಟೆಯಾಗಿದ್ದು ಈ ಬೂದಿಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷದ ನಿರ್ದೇಶಕರು ಆಯ್ಕೆಯಾಗುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೂದಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ ಆರ್ ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಮುಖಂಡರಾದ ಮಹದೇವಪ್ಪ, ಬೂದಿಕೋಟೆಯ ಸಮಾಜ ಸೇವಕ ಹಾಗೂ ಮುಖಂಡರಾದ ಬಾಬು, ವಿ.ಎಸ್.ಎಸ್.ಎನ್ ಮಾಜಿ ಅಧ್ಯಕ್ಷ ವಿಜಿ ಕುಮಾರ್, ಲಾಯರ್ ಆನಂದ್, ಮಣಿ, ನರೇಶ್, ಡಾ.ಮುನಿಸ್ವಾಮಿ, ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code