ಜಿಲ್ಲೆನ್ಯೂಸ್

ಕಣ್ಣಿದ್ದು ಕುರುಡಾ ತಾಲ್ಲೂಕಾಡಳಿತ, ಲೋಕಾಯುಕ್ತಕ್ಕೆ ದೂರು, ನ್ಯಾಯಕ್ಕಾಗಿ ಹೋರಾಟ.

ಕಣ್ಣಿದ್ದು ಕುರುಡಾ ತಾಲ್ಲೂಕಾಡಳಿತ, ಲೋಕಾಯುಕ್ತಕ್ಕೆ ದೂರು, ನ್ಯಾಯಕ್ಕಾಗಿ ಹೋರಾಟ.


(KOLARA): 8೦ರ ದಶಕದಲ್ಲಿ ಸರ್ಕಾರ ನೀರಘಂಟಿ ತೋಟಿ ಚಾಕರಿದಾರರು ಮತುತ ಬಡತನ ರೇಖೆಗಿಂತ ತೀರ ಕಡುಬಡವರಾಗಿದ್ದ, ಪರಿಶಿಷ್ಟ ಜಾತಿ ಸಮುದಾಯ ರೈತರಿಗೆ ಇನಾಂತಿ ಜಮೀನನ್ನು ನೀಡಿದರು. ಆದರೆ ಕೆಲವರು ಭೂ ಮಾಫಿಯಾದವರೊಡನೆ ಶಾಮೀಲಾಗಿ ತಹಸೀಲ್ದಾರ್ ರಶ್ಮಿ ಅವರು ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಮತ್ತೊಬ್ಬರಿಗೆ ಕಣ್ಣಿದ್ದು ಕುರುಡಂತೆ ಮಂಜೂರು ಮಾಡಿರುತ್ತಾರೆ ಎಂದು ರಿಪಬ್ಲಿಕನ್ ಸೇನಾ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ಆರೋಪಿಸಿದರು.

ಬಂಗಾರಪೇಟೆ: ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಕೆಆರ್‌ಎಸ್ ಪಕ್ಷದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಬೃಹತ್ ತಮಟೆ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಹಸೀಲ್ದಾರ್ ರಶ್ಮಿ ಅವರು ಬೂದಿಕೋಟೆ ಹೋಬಳಿಯ ಮಾರಾಂಡಹಳ್ಳಿ ಗ್ರಾಮದ ನಿವಾಸಿಯಾದ ಕೋಟೆಪ್ಪನವರಿಗೆ ನಿಮಯಭಾಹಿರವಾಗಿ ಭೂ ಮಂಜೂರಾತಿ ವ್ಯವಹಾರ ನಡೆಸಿರುತ್ತಾರೆ. ಇದರ ಹಿಂದೆ ಭಾರಿ ಹಣದ ಅವ್ಯವಹಾರ ಅಕ್ರಮವಾಗಿ ನಡೆದಿರುವ ಸಂಶಯವಿದೆ ಎಂದು ಆಪಾಧಿಸಿದರು.

ಘಟನೆಯ ವಿವರ: 80ವರ್ಷಗಳ ಹಿಂದೆ ಸರ್ಕಾರ ಹುಕ್ಕುಂದ ಸೀನಪ್ಪ, ಗಂಗಪ್ಪ, ಯಲ್ಲಪ್ಪ, ಮುನಿರಾಜು, ಯಲ್ಲಪ್ಪ, ಗಂಗಮ್ಮ, ಆಂಜಿನಪ್ಪ, ಕೊಂಡನಹಳ್ಳಿ ವೆಂಕಟೇಶ್, ಕಾರಮಾನಹಳ್ಳಿ ಚಿನ್ನಯ್ಯ, ರವರಿಗೆ ಸರ್ವೆನಂ.28, 29, 35, 61, 148, 150, 179, 199, 204, 220, 225, 233, ಈ ನಂಬರ್‌ಗಳಲ್ಲಿ 48ಎಕರೆಗೂ ಹೆಚ್ಚು ಜಮೀನನ್ನು ಮಂಜೂರು ಮಾಡಿರುತ್ತಾರೆ. ಸದರಿ ಜಮೀನುಗಳಿಗೆ ಸಂಬoಧಪಟ್ಟoತೆ ಮೇಲ್ಕಂಡ ವ್ಯಕ್ತಿಗಳ ಬಳಿಯಲ್ಲಿ ಪಹಣಿ, ಮುಟೇಷನ್, ನಕಾಶೆ, ವಂಶವೃಕ್ಷ ಮಂಜೂರಾತಿ ಪತ್ರ ಇರುತ್ತದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಸಹ ತಹಸೀಲ್ದಾರ್ ರಶ್ಮಿ ಅವರು ಕೋಟೆಪ್ಪನವರಿಗೆ ಭೂ ಮಂಜೂರಾತಿ ಮಾಡಿರುವುದು ಕರ್ತವ್ಯ ಲೋಪವಾಗಿದ್ದು, ರೈತಾಪಿವರ್ಗಕ್ಕೆ ಮಾಡಿರುವ ಅನ್ಯಾಯವಾಗಿದೆ.

ಕುತಂತ್ರಕ್ಕೆ ಒಲಿದ ಜಮೀನು: ಬೂದಿಕೋಟೆ ಗ್ರಾಮದ ಅಂಬೇಡ್ಕರ್ ಕಾಲೋನಿಯ ಕೋಟೆಪ್ಪನವರು ಮೂಲತಃ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಗಾರನಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರುತ್ತಾರೆ. ಇವರಿಗೆ ಮಾರಾಂಡಹಳ್ಳಿ ಗ್ರಾಮದ ಸರ್ವೆನಂ.46ರಲ್ಲಿ 4ಎಕರೆ 19ಗುಂಟೆ ಜಮೀನನ್ನು ಸರ್ಕಾರ ಮಂಜೂರು ಮಾಡಿರುತ್ತಾರೆ. ಅದನ್ನು ಮಾರಾಟ ಮಾಡಿ ಹಣದ ದಾಹ ತೀರಿಸಿಕೊಂಡಿರುತ್ತಾರೆ. ಈಗ ಬಡರೈತರ ಜಮೀನಿಗೆ ಕನ್ನ ಹಾಕಿ ತಹಸೀಲ್ದಾರ್ ರಶ್ಮಿರವರನ್ನು ಒಳಗೊಂಡoತೆ ಕಂದಾಯ ಇಲಾಖೆ ಅಧಿಕಾರಿಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ನಕಲಿ ದಾಖಲೆಗಳನ್ನು ಸೃಷ್ಠಿಸಿ, ಭೂ ಮಂಜೂರಾತಿ ಮಾಡಿದ್ದಾರೆಂದು ಆರೋಪ ಮಾಡಿದರು.

ಲೋಕಾಯುಕ್ತಕ್ಕೆ ದೂರು, ನ್ಯಾಯಕ್ಕಾಗಿ ಹೋರಾಟ: ಸದರಿ ಪ್ರಕರಣಕ್ಕೆ ಸಂಬoಧಪಟ್ಟoತೆ ತಹಸೀಲ್ದಾರ್‌ರವರು ಕೋಟೆಪ್ಪನವರಿಗೆ ನಿಯಮಬಾಹಿರವಾಗಿ ಮಂಜೂರು ಮಾಡಿದ ಭೂಮಿಯನ್ನು ರದ್ದುಪಡಿಸಬೇಕು. ಇಲ್ಲದೇ ಹೋದಲ್ಲಿ ಲೋಕಾಯುಕ್ತ ತನಿಖೆಗೆ ದೂರು ದಾಖಲಿಸಿ ನ್ಯಾಯಾಂಗ ಹೋರಾಟಕ್ಕೆ ಸಿದ್ದ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಂಟು ಜಿ.ರಾಮಚಂದ್ರ, ಜಿಲ್ಲಾ ಗೌರವಾಧ್ಯಕ್ಷ ಎ.ರಮೇಶ್, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ವಿ.ಅಮರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಶ್ರೀನಾಥ್, ವಕೀಲರಾದ ಹುಕ್ಕುಂದ ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಪಿ.ಚಂದ್ರಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತಿಪ್ಪಯ್ಯ, ಮಾಚಾ ವೇಣುಗೋಪಾಲರೆಡ್ಡಿ, ದಿವ್ಯ, ಹಂಸವೇಣಿ, ಗಂಗಾಧರ ಹಾಗೂ ಇನ್ನಿತರರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code