ಚಿಕ್ಕಮಗಳೂರುನ್ಯೂಸ್

ರಕ್ತದಾನ ಶಿಬಿರಕ್ಕೂ ಸುಜನ ಟ್ರಸ್ಟಿಗೂ ಸಂಬಂಧವಿಲ್ಲ.

ರಕ್ತದಾನ ಶಿಬಿರಕ್ಕೂ ಸುಜನ ಟ್ರಸ್ಟಿಗೂ ಸಂಬಂಧವಿಲ್ಲ.


(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿ ಭಾನುವಾರ ಖಾಸಗಿ ವ್ಯಕ್ತಿಯೊಬ್ಬರು ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೂ, ಸೃಜನ ಟ್ರಸ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ಟ್ರಸ್ಟಿನ ಅಧ್ಯಕ್ಷ ಎಂ.ಆರ್.ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೋಂದಾವಣೆ ಆಗಿರುವ ಸಾಮಾಜಿಕ ಬದ್ಧತೆ ಇರುವ ಕೌಟುಂಬಿಕ ಟ್ರಸ್ಟ್ ನಮ್ಮದಾಗಿದ್ದು, ಸಮುದಾಯಕ್ಕೆ  ಕೈ ಜೋಡಿಸುವ ರೋಟರಿ, ಲಯನ್ಸ್ನಂತಹ ಮತ್ತೊಂದು ಸಂಸ್ಥೆಗಳೊಂದಿಗೆ ನಾವು ಕೈ ಜೋಡಿಸುತ್ತೇವೆ ಹೊರತು ವ್ಯಕ್ತಿಯ ಜೊತೆಗಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಗಿರೀಶ್ ಎಂಬುವರು ಸೃಜನ ಟ್ರಸ್ಟ್  ಸಹಕಾರದೊಂದಿಗೆ ರಕ್ತದಾನ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸುವ ಮುನ್ನ ನಮ್ಮಿಂದ ಯಾವುದೇ ಪೂರ್ವಾನುಮತಿ ಪಡೆದಿಲ್ಲ. ನಮ್ಮ ಟ್ರಸ್ಟ್  ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸುವ ಮೂಲಕ ಅವರು ಟ್ರಸ್ಟ್ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಯಾವುದೋ ಹಿತಾಸಕ್ತಿಗಾಗಿ ನಮ್ಮ ಟ್ರಸ್ಟಿನ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ಗಿರೀಶ್  ಅವರ ವಿರುದ್ಧ ನ್ಯಾಯಾಲಯ ಹಾಗೂ ಪೋಲೀಸ್ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Scan the code