ನ್ಯೂಸ್ಶಿವಮೊಗ್ಗ

ಸಾಗರದಲ್ಲಿ ನಡೆದ ಬ್ರಹತ್ ಸಾಗರ ಸಂಭ್ರಮ, ಇಂದು ಹಬ್ಬದ ವಾತಾವರಣ ಸೃಷ್ಟಿಸಿದ ಸಾಗರ.

ಸಾಗರದಲ್ಲಿ ನಡೆದ ಬ್ರಹತ್ ಸಾಗರ ಸಂಭ್ರಮ, ಇಂದು ಹಬ್ಬದ ವಾತಾವರಣ ಸೃಷ್ಟಿಸಿದ ಸಾಗರ.


(SHIVAMOGA): ಸಾಗರದಲ್ಲಿ ನಡೆದ  ಈಡಿಗ, ಬಿಲ್ಲವ, ನಾಮಧಾರಿ, ದೀವರು, ಹಾಗೂ 26 ಪಂಗಡಗಳ ಮಹಾ ಶಕ್ತಿ ಸಾಗರ ಸಂಭ್ರಮ ಸಾಗರದಲ್ಲಿ ಅದ್ದೂರಿಯಾಗಿ ನಡೆಯಿತು.
ಇದೆ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮುದಾಗಳ ಪರವಾಗಿ ಸನ್ಮಾನಿಸಲಾಯಿತು.

ಪ್ತಸ್ತಾವಿಕವಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ ಈ ನಾಡು ನೋಡಿದ ಅಪರೂಪದ ಹಾಗೂ ಸರಳ ಸಜ್ಜನಿಕೆಯ ಎಲ್ಲಾ ಜಾತಿ ಧರ್ಮ ಬಡವ ಶ್ರೀಮಂತ ಬೇದ ಭಾವ ಇಲ್ಲದೆ ರಾಜಕಾರಣ‌ಮಾಡಿದ ನಾಯಕ ನಮ್ಮ ಯಡಿಯೂರಪ್ಪ ಅವರು ಎಂದರು ಯಡಿಯೂರಪ್ಪ ಅವರು ಯಾವುದೇ ಜಾತಿಗೆ ಅಥವ ಒಂದು ಪಂಗಡಕ್ಕೆ ಸೆರಿದ ನಾಯಕರಲ್ಲ ಅವರು ದೀನ ದಲಿತರ ಬಡವರ ನಾಯಕರು, ಅದಕ್ಕೆ ಅವರಿಗೆ ಮಣ್ಣಿನ ಮಗ ಅನ್ನೊದು, ಯಡಿಯೂರಪ್ಪ ಅವರು ಮಾತ್ರ ಬೆಳಯದೆ ಅವರ ಪಡೆಯನ್ನು ಸಹ ಬೆಳೆಸಿದ್ದಾರೆ. ಅವರೊಂದಿಗೆ ಎಲ್ಲರನ್ನು ಸಮಾನವಾಗಿ ಕರೆದೊಯ್ದ ನಾಯಕ ಎಂದರು.


BSY ಅವರು ನಾಡಿಗೆ ನೀಡಿದ ಕೊಡುಗೆ ಅಪಾರ ಅವರು ನೀಡಿದ ಭಾಗ್ಯಲಕ್ಷ್ಮೀ ಯೋಜನೆ ಅದನ್ನು ಮರೆಯೋಕೆ ಸಾದ್ಯವಿಲ್ಲ ,  ನೂರಾರು ಮಠ ಮಂದಿರಕ್ಕೆ ಯಾರಾದರು ಕೊಡುಗೆ ಕೊಟ್ಟಿದ್ದರೆ ಅದು ನಮ್ಮ ನಾಯಕ BSY, ನಮ್ಮ ನಾಯಕರು ಭಕ್ತವತ್ಸಲಂ ಕಮಿಟಿ‌ ಮಾಡಿ ನಮ್ಮ ಜನಾಂಗದವರ ಹೇಳಿಕಗೆಗೆ ನಿಗಮ ಮಾಡಿದ್ದರು. ಅದನ್ನು ಇಗಿನ ಸರ್ಕಾರ ನಿಲ್ಲಿಸಿರುವುದು ಖಂಡನೀಯ ಅದನ್ನ ಮತ್ತೆ ಚಾಲ್ತಿ ಮಾಡಬೇಕಾಗಿದೆ. ಅವರ 83 ವಯಸ್ಸಿನಲ್ಲಿ 22 ವರ್ಷದ ಯುವಕನಂತೆ ಮಾಡುವ ಕೆಲಸ ನಮಗೆಲ್ಲಾ ನಾಚಿಕೆ ಅಗುವಂತೆ ಅಗಿದೆ ಎಂದು ಶಾಸಕ ಸುನಿಲ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿದರು.

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಅವದೂತ ವಿನಯ್ ಗುರೂಜಿ, ಪ್ರಣವಾನಂದ ಸ್ವಾಮೀಜಿ, ಹಾಗೂ ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ.ವ್ಯೆ.ರಾಘವೇಂದ್ರ, ಅತಿಥಿಗಳಾಗಿ ಶಾಸಕರು ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ, ಮಾಲಿಕಯ್ಯ ಗುತ್ತೆದಾರ್‌, ಉಮಾನಾಥ  ಕೋಟ್ಯಾನ್,  ಅರಗ  ಜ್ಞಾನೇಂದ್ರ, ಚೆನ್ನಬಸಪ್ಪ, ಮಾಜಿ ಶಾಸಕರಾದ ಸ್ವಾಮಿ ರಾವ್, ಸುನೀಲ್ ನಾಯ್ಕ, ರುಪಾಲಿ ನಾಯ್ಕ, ಅಶೊಕ್ ನಾಯ್ಕ ಹೊಸೊಡಿ, ಹಾಗೂ ರತ್ನಾಕರ ಹೊನಗೊಡು, ಡಾ.ರಾಜನಂದಿನಿ‌ ಕಾಗೋಡು, ರಾಜು ತಲ್ಲೂರು, ಗುರುಮೂರ್ತಿ, ಅನಂದ ಜನ್ನೆಹಕ್ಲು, ಡಾ.ಜ್ಞಾನೇಶ್ವರ, ಲಲಿತಾ ನಾರಾಯಣ, ಇನ್ನು ಹಲವಾರು ಮುಖಂಡರುಗಳು ಭಾಗವಹಿಸಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code