ಕ್ರೈಂ ನ್ಯೂಸ್ಚಿಕ್ಕಮಗಳೂರು

ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ?

ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ?

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರೊಬ್ಬರ ಕೆಲಸ ಮಾಡಿಸಿಕೊಡುವುದಾಗಿ 20,000 ಲಂಚ ಪಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.


ಏನಿದು ಘಟನೆ:
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಆಗಿ ಕೆಲಸ ಮಾಡುತ್ತಿದ್ದ ಎನ್. ಚೇತನ್ ಅವರನ್ನು ಸರ್ಕಾರ ಬೆಂಗಳೂರಿನ ದೇವನಹಳ್ಳಿ ಬಿಇಒ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಇದೇ ಹುದ್ದೆಗೆ ಮತ್ತೊಬ್ಬ ಮಹಿಳಾ ನೌಕರರನ್ನು ವರ್ಗಾವಣೆ ಮಾಡಲಾಗಿತ್ತು. ಈ ಆದೇಶ ಜುಲೈ 22ರ ರಾತ್ರಿ ಬಂದಿದ್ದು, ಜುಲೈ 23 ರಂದು ಮೊದಲು ಕೆಲಸಕ್ಕೆ ಹಾಜರಾಗುವವರಿಗೆ ಅವಕಾಶವಿತ್ತು. ಆದರೆ ಶೃಂಗೇರಿ ಬಿಇಒ ಕಚೇರಿಯಿಂದ ಬಿಡುಗಡೆ ಆಗಬೇಕಾದಾಗ ಇಲ್ಲಿನ ಸಿ.ಆರ್.ಪಿ ಬಿಇಒ ಬಳಿ ಮಾತನಾಡಿರುವುದಾಗಿ 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಚೇತನ್ ಒಮ್ಮೆ 10,000 ನಂತರ 2000 ಹಾಗೂ 8000 ಜಮಾ ಮಾಡಿದ್ದಾರೆ. ಆದರೆ, ಬಿಡುಗಡೆ ಪತ್ರ ಪಡೆದು ಬೆಂಗಳೂರಿಗೆ ಹೋಗಿ ಕರ್ತವ್ಯದ ರಿಪೋರ್ಟ್ ಪಡೆಯಲು ಳಂಬವಾಗಿರುವುದರಿಂದ ಮತ್ತೊಬ್ಬರಿಗೆ ಆ ಕೆಲಸ ದೊರಕಿದೆ. ಈ ಬಗ್ಗೆ ನಿರಾಶರಾದ ಚೇತನ್ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

Scan the code