ನ್ಯೂಸ್ರಾಜ್ಯ

ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತನ್ನಿ

ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತನ್ನಿ

(CHIKKAMAGALURU): ವಿದ್ಯಾಭ್ಯಾಸದ ವಯಸ್ಸಲ್ಲಿ ಶಾಲೆಯನ್ನು ತೊರೆದು ಮನೆ, ಬೀದಿ, ಕಾಫಿ ತೋಟದ ಕೆಲಸಕ್ಕೆ, ಮಕ್ಕಳು ತೆರಳುತ್ತಿದ್ದಾರೆ. ಪ್ರೌಢ ಶಾಲೆಗೆ ಬರುವ ಮಕ್ಕಳೆ ಹೆಚ್ಚು ಶಾಲೆ ಬಿಟ್ಟು ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತನ್ನಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವೆಸ್ಟೆರ್ನ್ ಘಾಟ್ ನ್ಯೂಸ್ ವತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಿ. ಕಣಬೂರು ಗ್ರಾಮದ ಬಾಳೆಹೊನ್ನೂರು ಒಂದೇ ಪ್ರೌಢ ಶಾಲೆಯಲ್ಲಿ ಸುಮರು 10 ರಿಂದ 15 ಮಕ್ಕಳು ಶಾಲೆ ತೊರೆದು ಮನೆ, ಬೀದಿ, ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡು ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಾಲೆಗೆ ಹೋಗುವಂತೆ ತಂದೆ, ತಾಯಂದಿರು ಮಕ್ಕಳಿಗೆ ಬುದ್ದಿ ಮಾತು ಹೇಳಿದರೆ ತಮ್ಮ ಪೋಷಕರಿಗೆ (BLACKMAIL) ಬೆದರಿಕೆ ಹಾಕುವ ಮೂಲಕ ಪೋಷಕರ ಬಾಯನ್ನೇ ಮುಚ್ಚಿಸುವ ಕೆಲಸ ಮಕ್ಕಳು ಮಾಡುತ್ತಿದ್ದಾರೆ. ಹೆಚ್ಚು ದಲಿತ ಮಕ್ಕಳೇ ಶಾಲೆಯನ್ನು ತೊರೆಯುತ್ತಿದ್ದಾರೆ. ಒಂದು ಗ್ರಾಮದಲ್ಲಿ 10 ರಿಂದ 15 ಮಕ್ಕಳೆಂದರೆ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯದಲ್ಲಿ ಎಷ್ಟು ಮಕ್ಕಳು ಶಾಲೆ ಬಿಟ್ಟಿದ್ದಾರೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ಶಾಲೆಯ ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕರು ಮಕ್ಕಳ ಮನೆಗೆ ತೆರಳಿ ಮಕ್ಕಳನ್ನು ಮನವೊಲಿಸಿ ಶಾಲೆಗೆ ಕರೆತಂದರೆ ಎರಡೆ ದಿನಕ್ಕೆ ಮತ್ತೆ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ.

ಹೆಚ್ಚು ಮಕ್ಕಳು 8 – 9ನೇ ತರಗತಿಗೆ ಪ್ರವೇಶ ಮಾಡುತ್ತಿದ್ದಂತೆ ಶಾಲೆ ತೊರೆದಿದಾರೆ ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯಲು, ಆ ಹಕ್ಕುಗಳ ಬಗ್ಗೆ ತಿಳಿದು ಕೊಳ್ಳಲು ಅವರಿಗೆ ವಿದ್ಯಾಭ್ಯಾಸದ ಅಗತ್ಯ ವಿದೆ. ಹೊರ ಪ್ರಪಂಚದ ಅರಿವಿಗಾಗಿ, ಮಕ್ಕಳ ಹಕ್ಕುಗಳನ್ನು ಪಡೆದು ಕೊಳ್ಳಲು ಹಾಗೂ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲಾದರೂ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತನ್ನಿ.

ವೆಸ್ಟರ್ನ್ ಘಾಟ್ ನ್ಯೂಸ್

Leave a Reply

Your email address will not be published. Required fields are marked *

Scan the code