Newsನ್ಯೂಸ್ಶಿವಮೊಗ್ಗ

ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು  ನೈಜ್ಯ ಕಾರ್ಮಿಕನ ಮನೆಗೆ ಮುಟ್ಟಿಸುವ ಕಾರ್ಯ

ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು  ನೈಜ್ಯ ಕಾರ್ಮಿಕನ ಮನೆಗೆ ಮುಟ್ಟಿಸುವ ಕಾರ್ಯ

(SHIVAMOGA): ಜನಶಕ್ತಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಕಾರ್ಮಿಕರ ಸಂಘ (ರಿ) ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕ್ ಸಾಗರ ತಾಲೂಕು ಗೌತಮಪುರ ಪಂಚಾಯ್ತಿ ಮಟ್ಟದ ಸಮಿತಿಯನ್ನು ರಚನೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಹಿರಿಯ ಕಾರ್ಮಿಕರಾದ ಗೋಪಾಲ್ ಆಚಾರಿ ಗೌತಮಪುರ ಇವರಿಗೆ ಸನ್ಮಾನಿಸುವುದರ ಮೂಲಕ ಈ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ರಮೇಶ್ ಮಡಿವಾಳ್ ಬಂದಗದ್ದೆ ಜನಶಕ್ತಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷರು ನೆರವೇರಿಸಿ ಕೊಟ್ಟರು. ಮತ್ತು ಮಾತನಾಡುತ್ತಾ ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು  ನೈಜ್ಯ ಕಾರ್ಮಿಕನ ಮನೆಯವರೆಗೆ ಮುಟ್ಟಿಸುವ ಸಲುವಾಗಿ ಪಂಚಾಯಿತಿ ಮಟ್ಟದಲ್ಲಿ ಸಂಘಟನೆಯನ್ನು ಮಾಡುತ್ತಿದ್ದೇವೆ ಹಾಗೆ  ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು.

ಗೌರವಾಧ್ಯಕ್ಷರಾದ ಆನಂದ್ ಮೇಸ್ತ್ರಿ ಮಾಸೂರು ಇವರು  ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಮಿಕರಿಗೆ ಕೆಲವು ಸಲಹೆಗಳನ್ನು ನೀಡಿದರು  ಜಿಲ್ಲಾ ಪ್ರಮುಖರು ಹಾಗೂ  ಕಲ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣಪತಿ ವಡ್ನಾಲ್  ಮಾತನಾಡಿ ಇದು ನೈಜ್ಯ ಕಾರ್ಮಿಕರ ಸಂಘಟನೆ ಇಲ್ಲಿ ಫೇಕ್ ಕಾಡು ದಾರರಿಗೆ ಯಾವುದೇ ಅವಕಾಶ ಇರುವುದಿಲ್ಲ ನೀವು ಸಹಿತ ನೈಜ ಕಾರ್ಮಿಕರಿಗೋಸ್ಕರ ಕೆಲಸ ಮಾಡಿ ಎಂದು ಹೇಳಿದರು ಗ್ರಾಮ ಪಂಚಾಯತಿ ಸದಸ್ಯರು ಬೂದಿಯಪ್ಪ ಮಾತನಾಡಿ ಇಲ್ಲಿಯವರೆಗೆ ತಾಲೂಕಿನ ಯಾವುದೇ ಸಂಘಟನೆಗಳು ಪಂಚಾಯಿತಿ ಮಟ್ಟದಲ್ಲಿ ಕಾರ್ಮಿಕರನ್ನು ಒಗ್ಗೂಡಿಸಲು ಬರಲಿಲ್ಲ ಜನಶಕ್ತಿ ಕಾರ್ಮಿಕರ ಸಂಘ  ನಮ್ಮೂರಿಗೆ ಕಾರ್ಮಿಕರನ್ನು ಒಗ್ಗೂಡಿಸಲು ಅವರಿಗೆ ಸೌಲಭ್ಯಗಳನ್ನು ಕೊಡಿಸಲು ನಮ್ಮ ಗ್ರಾಮ ಪಂಚಾಯಿತಿಯ ಮಟ್ಟಕ್ಕೆ ಬಂದಿದಾರೆ ಅವರಿಗೆ ಅಭಿನಂದನೆ ತಿಳಿಸಿದರು ಈ ಕಾರ್ಯಕ್ರಮದ ಸ್ವಾಗತವನ್ನು ಸಂದೀಪ್ ಹೊಸ್ಕೋಪ್ಪ ಇವರು ನಡೆಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ಅಶೋಕ್ ಪಡಗೋಡು ಪ್ರಧಾನ ಕಾರ್ಯದರ್ಶಿ ಮಂಜು ಪದಗೋಡು ಉಪಾಧ್ಯಕ್ಷರು ರವಿಕುಮಾರ್ ಬೆಳೆಯೂರು ಪ್ರಮುಖ ಆನಂದ್ ಆನಂದಪುರ ಕಾರ್ಯದರ್ಶಿ  ಗ್ರಾಮ ಪಂಚಾಯಿತಿ ಸದಸ್ಯರು ರೇಣುಕಮ್ಮ ಊರಿನ ಅಧ್ಯಕ್ಷರು ಭೀಮಪ್ಪ ಊರಿನ ಮುಖಂಡರು ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಾರ್ಮಿಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code