ಕೆಟ್ಟು ನಿಂತ 16 ಚಕ್ರದ ಲಾರಿ: ಚಾರ್ಮಾಡಿ ಘಾಟ್ ನಲ್ಲಿ ಟ್ರಾಫಿಕ್ ಜಾಮ್.
(CHIKKAMAGALURU): ಚಾರ್ಮಾಡಿ ಘಾಟ್ ನಲ್ಲಿ 16 ಚಕ್ರದ ಲಾರಿ ಒಂದು ಹತ್ತನೇ ತಿರುವಿನಲ್ಲಿ ಕೆಟ್ಟು ನಿಂತು ಟ್ರಾಫಿಕ್ ಜಾಮ್ ಉಂಟು ಮಾಡಿದೆ.
ಹುಬ್ಬಳ್ಳಿಯಿಂದ ಹುಬ್ಬಳ್ಳಿಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಒಂದು ಸುಮಾರು ಸಮಯ ಎಂಟು ಮೂವತ್ತಕ್ಕೆ ಹತ್ತನೇ ತಿರುವಿನಲ್ಲಿ ಲಾರಿ ಹಾಳಾಗಿ ನಿಂತಿದೆ. ದೊಡ್ಡದಾದ ಲಾರಿ ಆಗಿದ್ದು ತಿರುವಿನಲ್ಲಿ ಹಾಳಾಗಿದೆ ಆದಕಾರಣ ಲಾರಿ ಇಂದಕ್ಕೂ ಮುಂದಕ್ಕೂ ಹೋಗದೆ ಮಧ್ಯದಲ್ಲಿ ಸಿಕ್ಕಿ ಒದ್ದಾಡುವಂತಾಗಿದೆ ಇದರಿಂದ ವಾಹನ ಸವಾರರು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಚಾರ್ಮಾಡಿ ಘಾಟ್ ನಲ್ಲಿ ಹತ್ತಕ್ಕಿಂತ ಹೆಚ್ಚು ಚಕ್ರವುಳ್ಳ ವಾಹನಗಳ ಸಂಚಾರಕ್ಕೆ ನಿಷೇಧ ಇದ್ದು, ದೊಡ್ಡದಾದ ಲಾರಿ ಸವಾರ ಲಾರಿಯನ್ನು ಘಾಟ್ ನಲ್ಲಿ ತಂದು ತಿರುವಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಚಿಕ್ಕಮಗಳೂರು ಮಾರ್ಗದಿಂದ ಚಾರ್ಮಾಡಿ ಘಾಟ್ ಉಜಿರೆ ಮಂಗಳೂರಿಗೆ ತಿರುಳು ಹೆಚ್ಚು ವಾಹನಗಳು ದಿನನಿತ್ಯ ಈ ಮಾರ್ಗ ಸಂಚರಿಸುತ್ತದೆ. ಲಾರಿ ತಿರುವಿನಲ್ಲಿ ಹಾಳಾಗಿ ನಿಂತಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.