ಚಿಕ್ಕಮಗಳೂರುನ್ಯೂಸ್

ಹಿಂದುತ್ವ, ರಾಷ್ಟ್ರೀಯತೆಯ ವಿಚಾರಧಾರೆಯಲ್ಲಿ ಮುಂಚೂಣಿಯಲ್ಲಿರುವ ಸಿ. ಟಿ ರವಿ

ಹಿಂದುತ್ವ, ರಾಷ್ಟ್ರೀಯತೆಯ ವಿಚಾರಧಾರೆಯಲ್ಲಿ ಮುಂಚೂಣಿಯಲ್ಲಿರುವ ಸಿ. ಟಿ ರವಿ

(CHIKKAMAGALURU): ಹಿಂದುತ್ವ, ರಾಷ್ಟ್ರೀಯತೆಯ ವಿಚಾರಧಾರೆಯಲ್ಲಿ ಮುಂಚೂಣಿಯಲ್ಲಿರುವ ಸಿ. ಟಿ ರವಿ ಅವರಂತಹ ನಾಯಕರ ಧ್ವನಿಯನ್ನು ಅಡಗಿಸುವ ಕೆಲಸವನ್ನು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ 1975 ರಲ್ಲಿ ದೇಶದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರ ಕಾಂಗ್ರೆಸ್ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪಿಗೆ ತರಿಸುತ್ತದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ  ಅಧಿವೇಶನದ ಕೊನೆಯ ದಿನ ಸದನದ ಒಳಗೆ ನುಗ್ಗಿ ಕಾಂಗ್ರೆಸ್  ಪಕ್ಷದ ಹಲವರು ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಶ್ರೀ ಸಿ.ಟಿ.ರವಿ ಅವರ ಮೇಲೆ ಗುಂಡಾ ವರ್ತನೆಯನ್ನು ತೋರಿದ್ದಾರೆ. ಇದು ರಾಜ್ಯ ಸರ್ಕಾರದ ಅಗ್ರಹ ಇಲಾಖೆಯ ಕಡೆಯಿಂದ ನಡೆದ ದೊಡ್ಡ ಭದ್ರತಾ ಲೋಪ. ಸುವರ್ಣಸೌಧದ ಒಳಗೆ ಒಬ್ಬ ಜನಪ್ರತಿನಿಧಿಗೆ ರಕ್ಷಣೆ ಕೊಡಲಾಗದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹೊರಗಡೆ ಇರುವ ಜನಸಾಮಾನ್ಯರ ಗತಿ ಏನು?  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಮಾರ್ಷಲ್ ಗಳ ಸಮ್ಮುಖದಲ್ಲೇ ಗೂಂಡಾಗಳಿಂದ ಹಲ್ಲೆಗೆ ಯತ್ನ ನಡೆದಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ.

ಆರ್ಟಿಕಲ್ 361ನೇ ವಿಧಿಯ ಪ್ರಕಾರ ಸದನ ನಡೆಯುತ್ತಿರುವ ಸಂದರ್ಭದಲ್ಲಿ ಸಭಾಧ್ಯಕ್ಷರ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯನ್ನು (ಸದಸ್ಯರು ಅಥವಾ ಹೊರಗಿನವರು) ಬಂಧಿಸಲು ಆಗುವುದಿಲ್ಲ ಮತ್ತು ಯಾವುದೇ ಕಾನೂನು ಪ್ರಕ್ರಿಯೆಯನ್ನು ಸದನದ ಆವರಣದಲ್ಲಿ ಸಲ್ಲಿಸಲಾಗುವುದಿಲ್ಲ ಎಂದಿದೆ. ಆದರೂ ಅವರನ್ನು ಬಂಧಿಸಿರುವ ಈ ಒಟ್ಟು ಪ್ರಕ್ರಿಯೆ ಕಾನೂನು ಬಾಹಿರವಾಗಿದೆ.

ಅಷ್ಟೇ ಅಲ್ಲ ಸಿ.ಟಿ.ರವಿ ಅವರು ಕೊಟ್ಟ ಕಂಪ್ಲೇಂಟನ್ನು ಸಹಿತ ಸ್ವೀಕರಿಸಲಾಗಿಲ್ಲ, ಇನ್ನೊಂದೆಡೆ ವಕೀಲರ ಭೇಟಿಗೆ ಅವಕಾಶವನ್ನು ಕೊಡಲಿಲ್ಲ, ವಿರೋಧಪಕ್ಷದ ನಾಯಕರು ಪೊಲೀಸ್ ಠಾಣೆಗೆ ಹೋದಾಗ ಅವರನ್ನು ಸಹಿತ ಒಳಗಡೆ ಬಿಟ್ಟುಕೊಳ್ಳಲಿಲ್ಲ ಇದು ರಾಜ್ಯ ಸರ್ಕಾರದ ದುರಾಡಳಿತದ ಪರಮಾವಧಿಯಾಗಿದೆ.

ಪಾಕಿಸ್ತಾನಕ್ಕೆ ಜಿಂದಾಬಾದ್ ಎಂಬ ಆಡಿಯೋ ಸಾಕ್ಷಿ ಇದ್ದರೂ, ಅಂತಹ ದೇಶದ್ರೋಹಿಯನ್ನು ರಕ್ಷಿಸಲು ಮುಂದಾಗಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಇಂದು ಆಡಿಯೋ ಸಾಕ್ಷಿ ಇಲ್ಲದಿದ್ದರೂ ಸಿ.ಟಿ.ರವಿಯವರನ್ನು ಬಂಧಿಸಿರುವುದು ಷಡ್ಯಂತ್ರವೇ ಸರಿ ಜನಸಾಮಾನ್ಯರಿಗೂ ಗೊತ್ತಾಗುತ್ತದೆ.

ಮಾನ್ಯ ಸಿ.ಟಿ ರವಿ ಅವರು ಹಿರಿಯ ಶಾಸಕರಾಗಿ ಸುದೀರ್ಘ ಅನುಭವ ಹೊಂದಿದ ಸುಸಂಸ್ಕೃತ ಭಾಷೆ ಬಳಸುವ ಉತ್ತಮ ವಾಕ್ಪಟು. ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ಸಹ ಅವರ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಗೊತ್ತಿರುವ ಅವರ ಅಭಿಮಾನಿಗಳು ಅದೆಷ್ಟೋ ಸಂಖ್ಯೆಯಲ್ಲಿದ್ದಾರೆ. ಸಭ್ಯತೆಯ ಎಲ್ಲೆಮೀರಿ ಪದ ಸಂಸ್ಕೃತಿ ಇಲ್ಲದವರಂತೆ ಎಂದು ಸಹ ಮಾತನಾಡಿದವರಲ್ಲ. ಮಾತೆಯನ್ನು ಪೂಜಿಸುವ ಸಂಸ್ಕಾರದ ನೆಲೆಗಟ್ಟಿನ ಸಂಘಟನೆಯಿಂದ ಬೆಳೆದು ಬಂದಿರುವ ಅವರು ತಾಯಿನೆಲ, ತಾಯಿನಾಡು ಮತ್ತು ದೇಶದ ತಾಯಂದಿರಿಗೆ, ಸಹೋದರಿಯರಿಗೆ ಯಾವ ರೀತಿಯಲ್ಲಿ ಗೌರವವನ್ನು ಕೊಡಬೇಕೆಂಬ ಸಂಸ್ಕಾರವನ್ನು ಅರಿತವರು.

ಅವರನ್ನು ಬಂಧಿಸಿದ ನಂತರವೂ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ ಅಧಿಕಾರಿಗಳು ಸರ್ಕಾರದ ಕೈಗೊಂಬೆಗಳಾಗಿರುವುದು ಸ್ಪಷ್ಟವಾಗಿ ತೋರುತ್ತಿದೆ. ಒಬ್ಬ ಮಾಜಿ ಸಚಿವರು, ಹಾಲಿ ಶಾಸಕರಾಗಿರುವ ಸಿಟಿ ರವಿ ಅವರು ತಮ್ಮ ಜೀವಕ್ಕೆ ಅಪಾಯವಿದೆ, ಕಾಂಗ್ರೆಸ್ ಸರ್ಕಾರ ಕೊಲೆ‌ ಮಾಡಲು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ನಡೆದಿರುವ ಘಟನೆಯ ವೇಳೆ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತ ಪದಬಳಕೆಯ ಸಂಬಂಧ ಈಗಾಗಲೇ ಸೂಕ್ತ ಸ್ಪಷ್ಟನೆ ನೀಡಿ ಆರೋಪ ನಿರಾಕರಿಸಿದ್ದಾರೆ. ಆದರೂ ಕಾಂಗ್ರೆಸ್ ನವರು ಅವರ ಮೇಲೆ ಆಪಾದನೆಯನ್ನು ಹೊರಿಸಿ ಬಂಧಿಸಿರುವುದನ್ನು ನೋಡಿದರೆ ಕಾಂಗ್ರೆಸ್ಸಿಗರ ಪೂರ್ವಾಗ್ರಹ ಪೀಡಿತ ಧೋರಣೆ ಇಲ್ಲಿ ಎದ್ದು ಕಾಣುತ್ತದೆ. ಸಿಟಿ ರವಿ ಅವರು ಸದಾ ಹಿಂದುತ್ವದ ಬಗ್ಗೆ, ಸನಾತನ ಧರ್ಮದ ಬಗ್ಗೆ ಹಾಗೂ ಬಹು ಸಂಖ್ಯಾತ ಹಿಂದೂಗಳ ಪರವಾಗಿ ಸದಾ ಧ್ವನಿ ಎತ್ತುತ್ತಾ ಬಂದವರು ಇದನ್ನು ಕಾಂಗ್ರೆಸ್ ನವರು ಎಂದು ಸಹಿಸುತ್ತಿರಲಿಲ್ಲ ಆ ಒಂದು ಸೇಡನ್ನು ತೀರಿಸಿಕೊಳ್ಳಲು ಏನೋ ಎನ್ನುವಂತೆ ಅವರ ಧ್ವನಿಯನ್ನು ಸುಳ್ಳು ಆರೋಪ ಮತ್ತು ಗೂಂಡಾಗಿರಿ ಮೂಲಕ ಹತ್ತಿಕ್ಕಲು ಹೊರಟಿದೆ.

ಇನ್ನು ಕೇಂದ್ರದಲ್ಲಿ ಮಾನ್ಯ ಗೃಹ ಸಚಿವರಾದ ಅಮಿತ್ ಶಾ ರವರು ಕಾಂಗ್ರೆಸಿಗರು ಅಂದು ಅಂಬೇಡ್ಕರ್ ಅವರನ್ನು ಅವಮಾನಿಸಿ ಇಂದು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಪಟಿಸುತ್ತಿರುವ ಕಾಂಗ್ರೆಸ್ಸಿಗರ ಗೋಮುಖ ವ್ಯಾಘ್ರತನವನ್ನು ಬಯಲಿಗೆ ಎಳೆದಿದ್ದಾರೆ. ಆ ನಿಟ್ಟಿನಲ್ಲಿ ಅವರು ಆಡಿದ ಮಾತುಗಳನ್ನು ತಿರುಚುವ ಮೂಲಕ ಅಪಪ್ರಚಾರ ನಡೆಸಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ಸಿಗರು ಇಂದು ದೇಶದ ಜನರ ಮುಂದೆ ನಗೆ ಪಾಟಲಿಗೆ ಗುರಿಯಾಗುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ಅವರನ್ನು ರಾಜಕೀಯವಾಗಿ ಸಾಮಾಜಿಕವಾಗಿ ತುಳಿದ ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿಯನ್ನು ಅನುಭವಿಸುತ್ತಾ ಬಂದಿದೆ.

ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಸಂಸತ್ತಿಗೆ ಬರಮಾಡಿಕೊಳ್ಳಬೇಕಿತ್ತು ಆದರೆ ಕಾಂಗ್ರೆಸ್ ನವರು ಅವರ ವಿರುದ್ಧವೇ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸಿ ಸ್ವತಹ ಅಂದು ಪ್ರಧಾನ ಮಂತ್ರಿ ಆಗಿದ್ದ ಜವಹರಲಾಲ್ ನೆಹರುರವರು ಮೂರು ನಾಲ್ಕು ಬಾರಿ ಆ ಕ್ಷೇತ್ರಕ್ಕೆ ತೆರಳಿ ಪ್ರಚಾರ ಮಾಡಿ ಅವರನ್ನು ಸೋಲಿಸಿರುವುದು ಇದೆ ಕಾಂಗ್ರೆಸ್ ನವರು. ಅಂಬೇಡ್ಕರ್ ಅವರ ನಿಧನದ ನಂತರ ಅವರ ಪಾರ್ಥಿವ ಶರೀರ ಮಣ್ಣು ಮಾಡಲು ದೆಹಲಿಯಲ್ಲಿ ಕನಿಷ್ಠ ಅಡಿಯ ಜಾಗವನ್ನು ನೀಡದೆ ಮುಂಬೈಗೆ ಅವರ ದೇಹ ಸಾಗಿಸುವ ವ್ಯವಸ್ಥೆಯನ್ನೂ ಮಾಡದೆ ಅವರನ್ನು ತಾತ್ಸಾರವಾಗಿ ನೋಡಿಕೊಂಡವರು ಕಾಂಗ್ರೆಸ್ ನವರು.

ಆದರೆ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್ ಅವರ ಇತಿಹಾಸ ಮುಂದಿನ ಭವಿಷ್ಯದೊಂದಿಗೆ ತಿಳಿಯುವಂತೆ ಸಂವಿಧಾನ ದಿನವನ್ನು ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಭಾರತೀಯ ಜನತಾ ಪಾರ್ಟಿ.

ಪ್ರಜಾ ತಾಂತ್ರಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಕಾಂಗ್ರೆಸ್ ಎಷ್ಟು ಕೆಳಮಟ್ಟಕ್ಕೆ ಇಳಿಯಲಾಗುತ್ತದೆಯೋ ಅಷ್ಟು ಇಳಿದು ರಾಜಕೀಯವನ್ನು ಮಾಡುತ್ತಿದೆ. ಇದನ್ನೆಲ್ಲ ಗಮನಿಸುತ್ತಿರುವ ದೇಶದ ಮತ್ತು ರಾಜ್ಯದ ಜನತೆ ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂಬುದು ನಮ್ಮ ನಂಬಿಕೆ. ಅಂದು ಕಾಂಗ್ರೆಸ್ ಪುಡಾರಿಗಳು ಪಾಪಿಸ್ತಾನಕ್ಕೆ ಜೈಕಾರ ಕೂಗಿದಾಗ ಅವರನ್ನು ಬಂಧಿಸಲು ತಾಕತ್ತಿಲ್ಲದ  ಸರ್ಕಾರ, ಮುಖ್ಯಮಂತ್ರಿಗಳು ಇಂದು ಓರ್ವ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ಶಾಸಕರನ್ನು ಬಂಧಿಸಿ ಹಿಂಸಿಸುತ್ತಿದೆ. ಇಂತಹ ಸರ್ಕಾರ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೆ ಅಪಾಯಕಾರಿ. ವಿರೋಧ ಪಕ್ಷದ ಹಕ್ಕನ್ನು ಕಸಿಯುವ ಈ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ.

– ಮಾಲ್ತೇಶ್ ಗೌಡ ಸಿಗಸೆ
ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರು.

Leave a Reply

Your email address will not be published. Required fields are marked *

Scan the code