ಇಸ್ರೇಲ್ ದೇಶದಲ್ಲಿ ನಿಮ್ಮವರು ಇದ್ದರೆ ಅವರ ಬಗ್ಗೆ ಮಾಹಿತಿಯನ್ನು ನೀಡಿ ಎಂದ ಜಿಲ್ಲಾಡಳಿತ.
(CHIKKAMAGALURU): ಇಸ್ರೇಲ್ ಹಾಗೂ ಪ್ಯಾಲಸ್ಟೈನ್ ದೇಶಗಳ ನಡುವೆ ಯುದ್ಧ ಆರಂಭವಾಗಿದ್ದು, ಅಪಾರ ಪ್ರಮಾಣದಲ್ಲಿ ಪ್ರಾಣಹಾನಿಯಾಗುತ್ತಿದ್ದು, ಸಾವು ನೋವುಗಳ ನಡುವೆ ಜನರು ಸಿಲುಕಿದ್ದಾರೆ. ಫೆಲೆಸ್ತೀನ್ ಭಯೋತ್ಪಾದಕ ಗುಂಪು ವಾಯು, ಭೂಮಿ ಮತ್ತು ನೀರಿನ ಮೂಲಕ ಹಾಗು ಸಾವಿರಾರು ರಾಕೆಟ್ಗಳನ್ನು ಹಾರಿಸುವ ಮೂಲಕ ದೇಶದ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ನಂತರ ಇಸ್ರೇಲ್ ಪಡೆಗಳು ಮತ್ತು ಹಮಾಸ್ ಉಗ್ರಗಾಮಿಗಳು ಶನಿವಾರದಿಂದ ಮಾರಣಾಂತಿಕ ಹೋರಾಟದಲ್ಲಿ ತೊಡಗಿದ್ದಾರೆ. ಅಭೂತಪೂರ್ವ ವಾರಾಂತ್ಯದ ದಾಳಿಯ ನಂತರ, ಇಸ್ರೇಲ್ ಯುದ್ಧವನ್ನು ಘೋಷಿಸಿತು ಮತ್ತು ಹಮಾಸ್ ಆಡಳಿತದ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿಗಳ ಸುರಿಮಳೆಗೈದಿತು. ಈ ಹೋರಾಟದ ನಡುವೆ ಭಾರತದ ನಾಗರಿಕರು ಕೂಡ ಸಿಲುಕಿದ್ದಾರೆ. ಇವರನ್ನು ಪಾರು ಮಾಡುವ ಸಲುವಾಗಿ ಭಾರತ ದೇಶ ಮುಂದಾಗಿದೆ ಇವರನ್ನು ಹಿಂದಕ್ಕೆ ಕರೆತರಲು ಮುಂದಾಗಿರುವ ಭಾರತ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ನೀಡಿದೆ. ಇದಕ್ಕೆ ಸಂಭಂದಿಸಿದಂತೆ ಚಿಕ್ಕಮಗಳೂರು ಜಿಲ್ಲೆ ಇಸ್ರೇಲ್ ನಲ್ಲಿ ಸಿಲುಕಿರುವ ಚಿಕ್ಕಮಗಳೂರಿನ ನಾಗರೀಕರಿಗಾಗಿ ಈ ಕೆಳಕಂಡಂತೆ ಒಂದು ಪ್ರಕಟಣೆ ಹೊರಡಿಸಿದೆ. ನಿಮಗೆ ತಿಳಿದಂತೆ ಚಿಕ್ಕಮಗಳೂರಿನ ಯಾರಾದರೂ ಇಸ್ರೇಲ್ ಹಾಗೂ ಪ್ಯಾಲಸ್ಟೈನ್ ದೇಶಗಳಲ್ಲಿ ಸಿಲುಕಿದ್ದರೆ ತಕ್ಷಣವಾಗಿ ಮಾಹಿತಿ ತಿಳಿಸಬೇಕಾಗಿದೆ ಎಂದು ಜಿಲ್ಲಾ ಆಡಳಿತಾಧಿಕಾರಿ ಈ ರೀತಿಯಲ್ಲಿ ಪ್ರಕಟಣೆ ಮಾಡಲಾಗಿದೆ.
ಇಸ್ರೇಲ್ ಹಾಗೂ ಪ್ಯಾಲಸ್ಟೈನ್ ದೇಶಗಳ ನಡುವೆ ಹೋರಾಟ ನಡೆಯುತ್ತಿದ್ದು. ಅಪಾರ ಪ್ರಮಾಣದ ಪ್ರಾಣಹಾನಿಯಾಗುತ್ತಿದ್ದೆ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆಯ ಯಾರಾದರೂ ಇಸ್ರೇಲ್ ದೇಶದಲ್ಲಿ ಸಿಲುಕಿದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ವಿವರ ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿ – 1077, 08262-238950
ವಾಟ್ಯಾಪ್ ಸಂಖ್ಯೆ- 7411446678, ಈ ಸಂಖ್ಯೆಗೆ ನಿಮ್ಮವರ ಬಗ್ಗೆ ಮಾಹಿತಿಯನ್ನು ನೀಡಿ.