ಮನರಂಜನೆ

Entertainmentನ್ಯೂಸ್ಮನರಂಜನೆ

ಭಾರತದ ರಾಷ್ಟ್ರಪಿತ ಗಾಂಧಿ. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಬಹಳ ಪ್ರಮುಖವಾದದ್ದು.

(ARTICAL): ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಬಹಳ ಪ್ರಮುಖವಾದದ್ದು. ಇವರನ್ನು ರಾಷ್ಟ್ರಪಿತ, ಮಹಾತ್ಮ ಮುಂತಾದ ಹೆಸರಿಂದ ಕರೆಯಲಾಗುತ್ತದೆ. ಇವರು ಮೂಲತಃ ಗುಜರಾತಿನ ಪೊರ ಬಂದರನಲ್ಲಿ 1869

Read more
Entertainmentಮನರಂಜನೆ

‘ಇಲ್ಲಿ ಸಿಗೋ ತಿಂಡಿನ ಮಿಸ್ ಮಾಡೋಕೆ ಇಷ್ಟ ಇರಲಿಲ್ಲ ಹಾಗಾಗಿ ಬಂದೆ’

(ARTICAL): ‘ಪಥಸಂಚಲನ’ ಅನ್ನೋದು ಅಲ್ಲಿಗೆ ಅಭ್ಯಾಸಕ್ಕೆಂದು ಹೋಗುವ ಮಕ್ಕಳಿಗೆ ಮಾತ್ರ ಅರ್ಥ ಆಗತ್ತೆ. ಅದೊಂದು ಶಿಸ್ತನ್ನು ಕಲಿಯುವ ಜಾಗ. ಅದಕ್ಕೆ ತಯಾರಿ, ತರಗತಿಯಿಂದ ಹೊರಬಂದು ಅಭ್ಯಾಸ ಮಾಡುವ

Read more
Entertainmentಮನರಂಜನೆ

‘ನಾವು ಗೆದ್ದಿದ್ದರೆ ಈ ರೀತಿ ಟ್ರೋಫಿ ನಮ್ಮ ಕೈಯಲ್ಲೂ ಇರುತ್ತಿತ್ತು’

(ARTICAL):ಮಕ್ಕಳು ಶಾಲೆಲಿ ಇದ್ದಾಗ ಅವರು ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳುವುದು, ತರಗತಿ ತಪ್ಪಿಸಿಕೊಳ್ಳುವುದನ್ನು ಕಂಡಾಗ, ಶಿಕ್ಷಕರು ಬರದೇ ಇದ್ದಾಗ ಮೈದಾನದಲ್ಲಿ ಆಟವಾಡಲು ಬಿಡಿ ಎಂದು ಕೇಳುವಾಗ, ಆಟವಾಡಲೆಂದು ಮೈದಾನದಲ್ಲಿ ಕಾಲ ಕಳೆಯುವುದನ್ನು ಕಂಡಾಗ, ಆಟದ ಮೈದಾನದವನ್ನು ತಾವೇ ಸಿದ್ದಮಾಡುವುದನ್ನು ಕಂಡಾಗ ಒಮ್ಮೆ ನನ್ನನ್ನೇ ನಾನು ಕಂಡಂತೆ ಆಯಿತು. ಚಿಕ್ಕಮಗಳೂರಿನ ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ದೈಹಿಕ ಶಿಕ್ಷಕಿ ವೇದಾವತಿ ಟೀಚರ್ ಎಲ್ಲಾ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ನಮ್ಮ ಶಾಲೆಯ ಚಿಕ್ಕಚೊಕ್ಕ ಕ್ರೀಡಾಂಗಣದಲ್ಲಿ ಒಂದಿಷ್ಟು ಆಟೋಟಗಳನ್ನು ಅಭ್ಯಾಸ ಮಾಡುತ್ತಿದ್ದೆವು. ವಾಲಿಬಾಲ್, ಕಬ್ಬಡ್ಡಿ, ಕೊಕ್ಕೋ, ಓಟಕ್ಕೆ ಅನುಕೂಲವಾಗುವಂತಿತ್ತು. ಆದರೂ ಇದರ ಮಧ್ಯೆ ನಮ್ಮಲ್ಲಿ ಏನಾದರೂ ಕಿತಾಪತಿ ಮಾಡಿದಾಗ ಓಡಿಸಿಕೊಂಡು ಬರುವ ಗೆಳೆಯರಿಂದ ತಪ್ಪಿಸಿಕೊಳ್ಳಲು ಓಡುವುದರ ಮೂಲಕ ಓಟದ ಅಭ್ಯಾಸ, ಅದೇ ಓಟ ಹೆಚ್ಚಾದಾಗ ಶಾಲೆಯ ತಂತಿಬೇಲಿಯನ್ನು ಹಾರುವ ಮೂಲಕ ಹೈಜಂಪ್ ಕೂಡ ಅಭ್ಯಾಸವಾಗಿತ್ತು. ತಂತಿಬೇಲಿ ಹಾರುವಾಗ ತರಚಿದ ಗಾಯವಾಗಿದ್ದು, ಬಟ್ಟೆ ಹರಿದುಕೊಂಡದ್ದು ಉಂಟು. ಮನೆಗೆ ಸಮೀಪದಲ್ಲಿ ಕಬ್ಬಿನಗದ್ದೆ ಇದ್ದದ್ದರಿಂದ ಶನಿವಾರ ಮಧ್ಯಾಹ್ನ ಗದ್ದೆಗೆ ಹೋಗಿ ಕಬ್ಬನ್ನು ತರುತ್ತಿದ್ದದ್ದು, ಗದ್ದೆಯ ಮಾಲೀಕ ಓಡಿಸಿಕೊಂಡು ಬಂದಾಗ ಸಿಗದಂತೆ ಓಡಿದ್ದು, ಬಿದ್ದು ಗಾಯ ಮಾಡಿಕೊಂಡದ್ದು ಇದ್ದೇಇತ್ತು. ಹೀಗೆ ಓಡುವ ಅಭ್ಯಾಸ ಹೆಚ್ಚಾಗಿದ್ದರಿಂದ ಕೊಕ್ಕೋ ಆಟಕ್ಕೆ ನಮ್ಮ ಟೀಚರ್ ಸೇರಿಸಿಕೊಂಡರು. ನಮ್ಮ ತಂಡದ ಎಲ್ಲಾ ಸದಸ್ಯರಿಗೆ ಓಡಿಓಡಿ ಅಭ್ಯಾಸ ಇದ್ದಿದ್ದರಿಂದ ಬಹುತೇಕ ಕೊಕ್ಕೋ ಆಟದಲ್ಲಿ ಇದ್ದೆವು. ಅದೆಷ್ಟೋ ಬಾರಿ ಹಿಡಿಯಲು ಹೊರಟಾಗ ಅದೇನು ಗೂಳಿ ಓಡಿದ ಹಾಗೇ ಓಡ್ತಿಯಾ? ಅಂತ ಅಂದಿದ್ದಾರೆ. ಆಟಕ್ಕಾಗಿ ನಾವೆಲ್ಲ ಒಂದಾಗುತ್ತಿದ್ದೆವು. ಮಲೆನಾಡಿನ ಮಳೆಯಿಂದಾಗಿ ನಮ್ಮ ಶಾಲಾ ಮೈದಾನದಲ್ಲಿ ನೀರು ತುಂಬಿರುತ್ತಿತ್ತು. ಅದನ್ನು ತೆಗೆದು ಸರಿ ಮಾಡುವಷ್ಟರಲ್ಲಿ ಸಾಕುಸಾಕಾಗಿರುತ್ತಿತ್ತು. ಅಂತೂ ಕ್ರೀಡಾಕೂಟ ನಡೆದು ಸ್ವಲ್ಪ ಅಂಕಗಳ ಅಂತರದಲ್ಲಿ ಸೋತೆವು. ನಮ್ಮ ವೇದಾವತಿ ಟೀಚರ್ ಸೋತರೂ ಮುಂದಿನಬಾರಿಗೆ ಇನ್ನೂ ಹೆಚ್ಚಿನ ಅಭ್ಯಾಸ ಮಾಡಿ ಬರೋಣ ಎಂದು ಹುರಿದುಂಬಿಸಿದರು. ನಮ್ಮ ಶಾಲೆಯ ಇತರ ವಿದ್ಯಾರ್ಥಿಗಳಿಗೆ ಬಂದ ಬಹುಮಾನವನ್ನೇ ನಮ್ಮದು ಎನ್ನುವ ರೀತಿಯಲ್ಲಿ ಸಂಭ್ರಮಿಸಿದ್ದೇವೆ. ನಂತರ ಪ್ರೌಢಶಾಲೆಯಲ್ಲೂ ಅನೇಕ ಕ್ರೀಡೆಗಳಿದ್ದರೂ ನನ್ನ ಒಲವು ಕೊಕ್ಕೋ ಮೇಲೆಯೇ ಇತ್ತು. ಅಲ್ಲಿ ದೈಹಿಕಶಿಕ್ಷಕ ಷಡಕ್ಷರಿಸರ್ ಆಟಗಳ ಒಳಹೊರಗುಗಳನ್ನು ಹೇಳಿಕೊಟ್ಟು, ಚೆನ್ನಾಗಿ ಅಭ್ಯಾಸ ಮಾಡಿಸಿದರು. ಅಷ್ಟೇ ಪೆಟ್ಟು ಕೂಡ ಕೊಡುತ್ತಿದ್ದರು. ಅವರ ಪೆಟ್ಟಿನಿಂದ ಏನು ಕಲಿತಿದ್ದೇವೋ ಮರೆತಿದ್ದೇವೆ. ಆದರೆ ಆ ಪೆಟ್ಟುಗಳು ಇನ್ನೂ ನೆನಪಿವೆ, ಎಲ್ಲವೂ ಮಧುರ ನೆನಪುಗಳಾಗಿ…                  ಶಿಕ್ಷಕನಾಗಿ ಈ ಶಾಲೆಗೆ ಬಂದಾಗಿನಿಂದ ವಾಲಿಬಾಲ್, ಥ್ರೋಬಾಲ್ ಪ್ರಮುಖವಾಗಿದ್ದ ಕ್ರೀಡೆಗಳಾಗಿದ್ದವು. ಒಂದಿಷ್ಟು ವರ್ಷಗಳ ನಂತರ ಕೊಕ್ಕೋ ಅಂಕಣ ಸಿದ್ಧವಾಗ ತೊಡಗಿತು. ಎರಡು ಪೋಲ್ ಬಂದು ನಿಂತಾಗ,  ಅದೊಂತರ ಸಂಭ್ರಮ ನನಗೆ. ದೈಹಿಕಶಿಕ್ಷಕ ಬಸವರಾಜ್ ಸರ್ ದೆಸೆಯಿಂದ ಆಸಕ್ತಿ ಇದ್ದ ಮಕ್ಕಳು ನಿಧಾನವಾಗಿ ಕೊಕ್ಕೋ ಅಂಕಣಕ್ಕೆ ಬರತೊಡಗಿದರು. ಒಮ್ಮೆ ಮಕ್ಕಳ ದಿನಾಚರಣೆಯ ಸಮಯದಲ್ಲಿ  ಮಕ್ಕಳೊಂದಿಗೆ ಬೆರೆತು ಆಟವಾಡುತ್ತಿದ್ದಾಗ ಪುಷ್ಪಮೇಡಂ ಮಕ್ಕಳೊಂದಿಗೆ ಕೊಕ್ಕೋ ಆಟದಲ್ಲಿ ಭಾಗವಹಿಸಿದ್ದರು. ಆಗಲೇ ತಿಳಿದದ್ದು ಅವರು ಕೂಡ ಕೊಕ್ಕೋ ಆಟದಲ್ಲಿ ಬಹುಮಾನವನ್ನು ಪಡೆದಿದ್ದರೆಂದು. ಅದಾದ ನಂತರ ನಾನು ಮತ್ತು ಚನ್ನೇಶ್ ಸರ್ ಕೂಡ ಮಕ್ಕಳೊಂದಿಗೆ ಬೆರೆತು ಆಡಿದೆವು. ಆ ಸಮಯದಲ್ಲಂತೂ ನನ್ನ ಬಾಲ್ಯದ ದಿನಗಳು, ಕೊಕ್ಕೋ ಆಟ, ಏಳು-ಬೀಳು, ಮೈದಾನ ಸಿದ್ದಗೊಳಿಸುತ್ತಿದ್ದದ್ದು ಎಲ್ಲವೂ ಒಮ್ಮೆ ಕಣ್ಣಮುಂದೆ ಬಂದು ಹೋಯಿತು. ಮಕ್ಕಳು ಪಿ.ಇ ತರಗತಿಗೆ ಬಂದಾಗ, ಸಂಜೆ ಕೋಚಿಂಗ್ ತರಗತಿಯ ಸಮಯದಲ್ಲಿ, ಶಾಲೆ ಮುಗಿದಾಗ ಕ್ರೀಡಾಕೂಟಕ್ಕೆ ಸಿದ್ಧರಾಗುತ್ತಿದ್ದ ಮಕ್ಕಳ ಜೊತೆಗೆ ಒಂದಿಷ್ಟು ದಿನಗಳ ಕಾಲ ಆಗಾಗ ಕೊಕ್ಕೋ ಆಡುತ್ತಿದ್ದೆ. ಅದಾಗಿ ಕೆಲವೇ ವರ್ಷಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಕ್ಕೋ ತಂಡ ತಯಾರಾಗತೊಡಗಿತು. ಕಳೆದ ಎರಡುಮೂರು ವರ್ಷಗಳಲ್ಲಿ ಒಳ್ಳೆಯ ಕೊಕ್ಕೋ ಆಡುವ ಮಕ್ಕಳ ಸಂಖ್ಯೆಯೂ ಹೆಚ್ಚಾಯಿತು. ಮೊದಲ ಬಾರಿಗೆ ಬಾಲಕ-ಬಾಲಕಿಯರ ತಂಡ ಭಾಗವಹಿಸಿತು. ಪ್ರಶಸ್ತಿ ಪಡೆಯದೆ ಹೋದರೂ ಮಕ್ಕಳು ಬೇರೆ ತಂಡಗಳೊಂದಿಗೆ ಒಳ್ಳೆಯ ಪೈಪೋಟಿ ನೀಡಿದ್ದರು. ಕಳೆದ ವರ್ಷವೂ ಒಂದೊಳ್ಳೆಯ ತಂಡ ತಯಾರಾಗಿತ್ತು. ಯಾವುದಾದರೊಂದು ಬಹುಮಾನ ಬಂದೇ ಬರುತ್ತದೆ ಎನ್ನುವಂತೆ ತಯಾರಾಗಿದ್ದರು. ಪ್ರಶಸ್ತಿಗೆ ಒಂದೇ ಮೆಟ್ಟಿಲು ಎನ್ನುವಂತೆ ಸೆಮಿಫೈನಲ್ ನಲ್ಲಿ ಸೋತರು. ಆದರೆ ಸೋಲಿಗಿಂತ ಹೆಚ್ಚಾಗಿ ಕಾಡಿದ್ದು ಗೆದ್ದ ತಂಡದವರು ನಮ್ಮ ಮಕ್ಕಳ ತಂಡದ ಎದುರು ‘ತೊಡೆತಟ್ಟಿ’ ಗೆಲುವನ್ನು ಸಂಭ್ರಮಿಸಿದ್ದರು. ಇದು ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪೈಪೋಟಿ ಕೊಡಲು, ಸರಿಯಾದ ಉತ್ತರ ಕೊಡಲೇಬೇಕು ಎನ್ನುವಂತೆ ತಯಾರಾಗಲು ಅನುವು ಮಾಡಿಕೊಟ್ಟಿತು  ಇತ್ತೀಚೆಗೆ ಸಂಜೆ ಹೆಚ್ಚಿನ ಸಮಯದಲ್ಲಿ ಅಭ್ಯಾಸ ಮಾಡುವಾಗ ಮಕ್ಕಳೊಂದಿಗೆ ಆಡುವಾಗ ರಾಹುಲ್ ‘ಮೊದಲು ಈಸರ್ ನ ಔಟ್ ಮಾಡಬೇಕು’ ಎನ್ನುತ್ತಿದ್ದನು. ಅದನ್ನು ಕೇಳಿಸಿಕೊಂಡು ನಕ್ಕು ಆಟ ವಾಡಿದ್ದೆ. ದೈಹಿಕಶಿಕ್ಷಕ ಪ್ರಶಾಂತ್ ಅವರು ಇತರ ಕ್ರೀಡೆಗಳಲ್ಲಿರ ವ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದುದರಿಂದ ನಾನೇ ಅನೇಕ ಸಲ ಕೊಕ್ಕೋ ತಂಡಗಳನ್ನು ರಚಿಸಿ ಆಡಿಸಿದ್ದೇನೆ. ಆಗಂತೂ ಸರ್ ಅದು ಔಟ್, ಇದು ಔಟ್ ಇಲ್ಲ, ಅದು ಹಾಗಲ್ಲ, ಇದು ಈಗಲ್ಲ, ಅದು ಇದು ಎಂದು ಹೇಳುತ್ತಿದ್ದರು. ಆಗ ಅಂತರಾಷ್ಟ್ರೀಯ ಪಂದ್ಯಗಳಲ್ಲೇ ಕ್ಯಾಮರಾಗಳು ಇದ್ದರೂ ಒಮ್ಮೊಮ್ಮೆ ತೀರ್ಪುಗಳು ಏನೇನೋ ಆಗಿರುತ್ತವೆ. ಅಂತದ್ದರಲ್ಲಿ ಇವರು ಹೇಳುವುದನ್ನು ಕೇಳಿ ನಕ್ಕಿದ್ದೇನೆ. ಸಮಾಧಾನ ಮಾಡಿಕೊಂಡಿದ್ದೇನೆ. ಒಮ್ಮೆ ಆಟ ಅರ್ಧ ನಡೆಯುವಾಗ ಮಳೆ ಬಂದು ಆಟವನ್ನು ನಿಲ್ಲಿಸಲು ಮುಂದಾದಾಗ ‘ಸರ್ ಅಂತ ಜೋರು ಮಳೆ ಏನು ಅಲ್ಲ, ಆಟ ಆಡಿ ಮುಗಿಸೋಣ’ ಎಂದು ಮಕ್ಕಳೇ ಕೇಳಿಕೊಂಡರು. ಆರೋಗ್ಯದ ದೃಷ್ಟಿಯಿಂದ ಒಪ್ಪದೇ ಅನಿವಾರ್ಯವಾಗಿ ಆಟವನ್ನು ನಿಲ್ಲಿಸಬೇಕಾಯಿತು. ಮಕ್ಕಳಂತೂ ಬೇಸರದಿಂದ ಆಟವನ್ನು ನಿಲ್ಲಿಸಿದರು. ಬೆಳಗ್ಗೆಯಿಂದ ಇಲ್ಲದ ಮಳೆ ಈಗಲೇ ಬರಬೇಕಿತ್ತೇ? ಎಂದು ಬೈದುಕೊಂಡಿದ್ದಾರೆ.  ಮರುದಿನ ಬೆಳಗ್ಗೆಯಿಂದಲೂ ಮಳೆ ಬಿಡದೇ ಸುರಿಯುತ್ತಿದ್ದುದರಿಂದ ಸಂಜೆ ಅಭ್ಯಾಸದ ಸಮಯಕ್ಕೆ ಅದಾಗಲೇ ಕೊಕ್ಕೋ ಅಂಕಣ ನೀರಿನಿಂದ ತುಂಬಿತ್ತು. ಮಳೆ ಬಂದು ಕಟ್ಟಡದಿಂದ ಸುರಿದ ನೀರು ಕೊಕ್ಕೋ ಅಂಕಣಕ್ಕೆ ಬರುತ್ತಿದ್ದದ್ದನ್ನು ಕಂಡು ಒಂದಿಷ್ಟು ಮಕ್ಕಳು ಪಕ್ಕದ ಎತ್ತರದ ಜಾಗದಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಬಂದು ಕೊಕ್ಕೋ ಅಂಕಣದಲ್ಲಿ ಎಲ್ಲೆಲ್ಲಿ ಒದ್ದೆಯಾಗಿತ್ತೋ ಅಲ್ಲಲ್ಲಿ ಹಾಕಿದ್ದಾರೆ, ಆ ಜಾಗವನ್ನು ಗಟ್ಟಿಗೊಳಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಅಂದು ಆಟವನ್ನೇ ಆಡದೇ ದೈಹಿಕಶಿಕ್ಷಕರೊಂದಿಗೆ ಸೇರಿ ಅಂಕಣದ ಸುತ್ತಲೂ ನೀರು ಬರದಂತೆ ಗುಂಡಿ ತೆಗೆದು ಮಣ್ಣನ್ನು ತಂದು ಕಟ್ಟೆ ಕಟ್ಟಿದ್ದಾರೆ. ಮರುದಿನದಿಂದ ಮಳೆ ಬಂದರೂ ಅಷ್ಟೊಂದು ಸಮಸ್ಯೆ ಆಗದಂತೆ ಮಾಡಿಕೊಂಡಿದ್ದ ವ್ಯವಸ್ಥೆಯಿಂದಾಗ ಆಟವನ್ನು ಆಡಿದ್ದಾರೆ. ಶಾಲೆ ಮುಗಿದ ನಂತರ ಹೆಚ್ಚಿನ ಸಮಯ ಅಭ್ಯಾಸಕ್ಕೆ ಬರುತ್ತಿದ್ದುದರಿಂದ ಇವರನ್ನು ಕರೆದುಕೊಂಡು ಹೋಗಲು ಪೋಷಕರು ತಡವಾಗಿಯೇ ಬರುತ್ತಿದ್ದರು, ಕೆಲವರು ಬೇಗನೇ ಬಂದು, ‘ಅದೇನು ಆಡ್ತಾರೋ ನೋಡೋಣ ಅಂತ ಬೇಗ ಬಂದೆ’ ಎಂದಿದ್ದಾರೆ.

Read more
Entertainmentಮನರಂಜನೆ

‘10 ವರ್ಷದ ಮೊದಲು ಮತ್ತು ನಂತರ ಹೇಗಿದ್ದೇವೆ ಎನ್ನಲು ಒಂದು ಫೋಟೋ’

(ARTICAL): ‘ನೆನಪು’ ಅನ್ನುವುದೊಂದು ಗೊತ್ತಿಲ್ಲದ ಹಾಗೇ ತುಟಿಯಂಚಲ್ಲಿ ಒಂದು ನಗೆಯನ್ನು ತರುತ್ತದೆ. ಕೆಲವೊಮ್ಮೆ ಕಣ್ಣು ಸಹ ಸಣ್ಣದಾಗಿ ನೀರಾಗುತ್ತದೆ. ಆ ಸುಮಧುರ ಸಮಯವನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡಿ,

Read more
Entertainmentಮನರಂಜನೆ

‘ಶಿಕ್ಷಕರ’ ಕೆಲಸ ಸುಲಭವಾದ ಕೆಲಸ ಅಲ್ಲವೇ ಅಲ್ಲ…

(ARTICLE): ಬಹಳಷ್ಟು ಜನ ಹೇಳುತ್ತಾರೆ. ‘ನಿಮ್ಮ ಕೆಲಸ ಸುಲಭ ಬಿಡಿ. ಪುಸ್ತಕದಲ್ಲಿ ಇರೋದನ್ನ ಮಕ್ಕಳಿಗೆ ಹೇಳಿ, ಜೋರು ಮಾಡಿದರೆ ಎರಡು ಪೆಟ್ಟು ಕೊಟ್ಟು, ಇದನ್ನು ಬರೀ ಅಂತ

Read more
Entertainmentಮನರಂಜನೆ

‘ಎಲ್ಲೂ ನಮ್ಮಪ್ಪನಿಗೆ ಭಾರ ಆಗಲಿಲ್ಲ ಅನ್ನೋದೆ ಸಮಾಧಾನದ ಸಂಗತಿ ನನಗೆ’

(ARTICAL): ‘ನಮ್ಮ ಪೋಷಕರು ಇರೋದು ನಾನು ಕೇಳಿದ್ದನ್ನ ಕೊಡಿಸೋದಕ್ಕೆ’ ಅನ್ನೋ ಮಕ್ಕಳ ಮನಸ್ಥಿತಿಯ ನಡುವೆ ಕೆಲವೊಂದು ವಿದ್ಯಾರ್ಥಿಗಳು ‘ನಮ್ಮ ಪೋಷಕರಿಗೆ ಹೊರೆಯಾಗದಂತೆ ಇರ್ತಿನಿ’ ಅಂತ ಹೇಳಿ ಅಕ್ಷರಶಃ

Read more
Entertainmentಮನರಂಜನೆ

‘ಒಂದು ಒಳ್ಳೆಯ ಕಥೆ ಹೇಳಿ ಸಣ್ಣಮಟ್ಟಿಗೆ ಇಲ್ಲಿ ಫೇಮಸ್ ಆಗಿದೀನಿ ಸರ್’

(ARTICAL):ತರಲೆ, ಹುಡುಗಾಟದ ವಿದ್ಯಾರ್ಥಿಗಳು ಇಲ್ಲದ ತರಗತಿಗಳು, ಶಾಲೆಗಳು ಇಲ್ಲವೇ ಇಲ್ಲ ಎಂದೆನಿಸುತ್ತದೆ. ಒಮ್ಮೊಮ್ಮೆ ಅಂತಹ ವಿದ್ಯಾರ್ಥಿಗಳನ್ನು ಸಹಿಸಲಸಾಧ್ಯ ಎನಿಸುವುದು ಉಂಟು. ಪದೇಪದೇ ಶಿಕ್ಷಿಸಿರುವುದು ಉಂಟು. ಒಂದೊಮ್ಮೆ ಅಂತಹ ಮಕ್ಕಳು ಸುಮ್ಮನಿದ್ಧರು ಆ ತರಗತಿಯಲ್ಲಿ ಯಾರಾದರೂ ಏನಾದರೂ ಕಿತಾಪತಿ ಮಾಡಿದಲ್ಲಿ ಇಂತಹ ವಿದ್ಯಾರ್ಥಿಗಳು ಅದರ ಭಾಗವೇ ಆಗಿರುತ್ತಾರೆ ಎನಿಸಿ ಒಂದೆರಡು ಬಾರಿ ಪೆಟ್ಟು ಕೂಡ ತಿಂದಿರುತ್ತಾರೆ. ಅಂತವರಿಗೆ ಪದೇಪದೇ ಹೇಳುವ ಬುದ್ಧಿಮಾತುಗಳು ಆ ಕ್ಷಣಕ್ಕೆ ತಲೆಗೆ ಹೋಗದೇ ಹೋದರೂ ಒಂದಲ್ಲಾ ಒಂದು ದಿನ ‘ನೀವು ಅವತ್ತು ಹೇಳಿದ್ದ ಮಾತು ಇವತ್ತು ಅರ್ಥ ಆಯ್ತು. ಉಪಯೋಗಕ್ಕೆ ಬಂತು’ ಎನ್ನುವ ಪ್ರಸಂಗಗಳು ಆಗಾಗ ಘಟಿಸುತ್ತಲೇ ಇರುತ್ತವೆ. ಆ ರೀತಿಯ ಒಂದು ಪ್ರಸಂಗವನ್ನು ನಿಮ್ಮ ಮುಂದಿಡುತ್ತಿದ್ದೇನೆ.                  ಮೇಲೆ ಹೇಳಿದಂತ ಒಂದಿಷ್ಟು ತರಲೆಯ ಗುಣ ಹೊಂದಿದ್ದ ಧವನ್ ಎನ್ನುವ ವಿದ್ಯಾರ್ಥಿ ಯಾವಾಗಲೂ ಮಾತುಮಾತುಮಾತು… ಎಂದೇ ಇರುತ್ತಿದ್ದನು. ಇವನ ಜೊತೆಗಿದ್ದ ಕಿರಣ ಬೇರೆ ಇದರ ಭಾಗವೂ ಆಗಿದ್ದ. ಕಿರಣ ಕಿತಾಪತಿಗಳನ್ನು ಮಾಡಿದರು. ಅಕ್ಕಪಕ್ಕದವರಿಗೂ ಗೊತ್ತಾಗುತ್ತಲೇ ಇರಲಿಲ್ಲ. ಒಂದು ರೀತಿಯಲ್ಲಿ ‘ಸೈಲೆಂಟ್ ಕಿಲ್ಲರ್’ ಇದ್ದ ಹಾಗಿದ್ದ. ಧವನ್ ಸ್ವಲ್ಪ ಜೋರು ಧ್ವನಿ ಹಾಗಾಗಿ ಬಹಳಷ್ಟು ಬಾರಿ ಆತನೇ ಸಿಕ್ಕಿಹಾಕಿಕೊಳ್ಳುತ್ತಿದ್ದ. ಆಗ ಕಿರಣನ ಕಡೆಗೊಮ್ಮೆ ಈತ ನೋಡುತ್ತಿದ್ದ ಅವನೂ ತನಗೇನೂ ಗೊತ್ತೇ ಇಲ್ಲ ಎನ್ನುವಂತೆ ಅಮಾಯಕನಂತೆ ಕೂತಿರುತ್ತಿದ್ದ. ಅದು ತಾನು ಮಾಡಿದ್ದಲ್ಲ ಎಂದು ಅದೆಷ್ಟೇ ಸಮಜಾಯಿಷಿಗಳನ್ನು ನೀಡಿದರು. ತಪ್ಪೆಲ್ಲ ಇವನದೇ ಎನ್ನುವಂತೆ ಇರುತ್ತಿತ್ತು. ಅದೆಷ್ಟೋ ಬಾರಿ ಪೆಟ್ಟು ತಿಂದಿದ್ದಾನೆ, ತರಗತಿಯಿಂದ ಆಚೆ ನಿಂತಿದ್ದಾನೆ, ಎದುರುತ್ತರ ಕೊಟ್ಟು ಹೆಚ್ಚೆಚ್ಚು ಕಾಪಿರೈಟಿಂಗ್, ಹೋಂವರ್ಕ್ ಪಡೆದಿದ್ದಾನೆ, ಲೆಕ್ಕವಿಲ್ಲದಷ್ಟು ಬಸ್ಕಿ ಹೊಡೆದಿದ್ದಾನೆ. ಆದರೂ ಆಗಾಗ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾನೆ. ಧವನ್ ನ ಅಕ್ಕ ಶ್ರೀಲಕ್ಷ್ಮಿ ಕೂಡ ನಮ್ಮ ಶಾಲೆಯಲ್ಲಿಯೇ ಓದಿದ್ದರಿಂದ ಒಮ್ಮೆ ಶಾಲೆಗೆ ಬಂದಾಗ ‘ನೀವು ಎಷ್ಟು ಬೇಕಾದರೂ ಪೆಟ್ಟುಕೊಡಿ ಸರ್. ನಾವು ಯಾರೂ ಏನೂ ಹೇಳಲ್ಲ’ ಎಂದು ಅವನ ಎದುರಿಗೇ ಹೇಳಿದ್ದಳು. ಅದನ್ನು ಹೇಳುವಾಗ ‘ನಮ್ಮಅಕ್ಕ ಇರೋದನ್ನು, ಇಲ್ಲದೇ ಇರೋದನ್ನೆಲ್ಲ ಹೇಳಿ ಸಿಕ್ಕಿಹಾಕಿಸುತ್ತಿದ್ದಾಳೆ’ ಎಂದು ಇವನು ಅವಳನ್ನು ಗುರಾಯಿಸಲು ಶುರು ಮಾಡಿದ್ದ. ಜೊತೆಗೆ ‘ಮನೆಯಲ್ಲಿ ಇವನು ಏನಾದರೂ ಕಿರಿಕಿರಿ ಮಾಡಿದರೆ ನಿಮಗೆ ಫೋನ್ ಮಾಡ್ತಿನಿ ಸರ್’ ಎಂದಾಗಂತೂ ಎಲ್ಲ ಕಡೆಗಳಿಂದಲೂ ಬಂಧಿಯಾದಂತೆ ಇವನಿಗೆ ಅನ್ನಿಸಿದ್ದಂತೂ ಸುಳ್ಳಲ್ಲ. ಮನೆಯಲ್ಲಿ ಅಮ್ಮ, ಅಕ್ಕ ಇಬ್ಬರನ್ನು ಹೆದರಿಸಿಕೊಂಡಿದ್ದ, ಅಪ್ಪನಿಗೆ ಮಾತ್ರ ಬಹಳ ಹೆದರುತ್ತಿದ್ದ. ಹಾಗಾಗಿ ‘ಇವನ ಬಗ್ಗೆ ಏನೇ ಕಂಪ್ಲೇಂಟ್ ಇದ್ದರೂ ಅಪ್ಪನಿಗೆ ಒಂದು ತಿಳಿಸಿ ಸಾಕು ಸರ್’ ಎಂದಿದ್ದಳು. ಪಾಪ ಇವೆಲ್ಲವನ್ನೂ ಕೈಕಟ್ಟಿ ಕೇಳಿಸಿಕೊಂಡಿದ್ದ ಧವನ್ ಏನೂ ಮಾಡಲಾಗದೇ, ಏನೊಂದೂ ತೋಚದೇ ಮೌನಕ್ಕೆ ಶರಣಾಗಿದ್ದ.   ಇವರ  ಗುಂಪಿನ ಬಹುತೇಕ ವಿದ್ಯಾರ್ಥಿಗಳು ಎಲ್.ಬಿ.ಎಸ್ ನಗರದಿಂದ, ಕೃಷಿನಗರದಿಂದ ಸೈಕಲ್ ನಲ್ಲಿಯೇ  ಬರುತ್ತಿದ್ದರು. ದಾರಿ ಮಧ್ಯೆ ನಿಂತು ಅದುಇದು ಎಂದು ಮಾತನಾಡುತ್ತಲೇ ಇರುತ್ತಿದ್ದರು. ಯಾರಾದರೂ ಶಿಕ್ಷಕರು ಆ ಮಾರ್ಗದಲ್ಲಿ ಬರುವುದನ್ನು ಕಂಡರೆ ಸೈಕಲ್ ಗಳು ಬೈಕ್ ಗಿಂತಲೂ ವೇಗವಾಗಿ ಓಡುತ್ತಿದ್ದವು. ಎಲ್.ಬಿ.ಎಸ್ ನಗರದ ಆರ್ಚ್ ಬಳಿ ಇರುವ ಅಂಗಡಿ ಬಂದಾಗ ಸೈಕಲ್ ಗಳು ನಿಂತು ಚಾಕೊಲೇಟ್, ಜ್ಯೂಸ್, ಚಿಪ್ಸ್ ಎಂದು ನಿಲ್ಲುತ್ತಿದ್ದರು. ಅದೇನು ರಾಜಕಾರ್ಯವೆಂಬಂತೆ ಹರಟುತ್ತಿದ್ದ ನಿಲ್ಲುತ್ತಿದ್ದರು. ಎಷ್ಟೋ ಬಾರಿ ಇವರ ಪೋಷಕರುಗಳು ‘ಶಾಲೆ ಇನ್ನೂ ಬಿಟ್ಟಿಲ್ಲವಾ? ಮಕ್ಕಳು ಇನ್ನೂ ಬಂದಿಲ್ಲ ಹಾಗಾಗಿ ವಿಚಾರಿಸಿದೆ’ ಎನ್ನುತ್ತಿದ್ದರು. ‘ಶಾಲೆ ಬಿಟ್ಟು ಬಹಳ ಹೊತ್ತಾಗಿದೆ. ಎಲ್ಲಾ ಫ್ರೆಂಡ್ಸ್ ಒಟ್ಟಿಗೆ ಸೇರಿಕೊಂಡಿದಾರೇನೋ ಹಾಗಾಗಿ ತಡ ಆಗಿರಬೇಕು’ ಎಂದಿದ್ದು ಇದೆ.      ಈ ತರಲೆ ವಿದ್ಯಾರ್ಥಿಗಳ ಗುಂಪು ವಾಲಿಬಾಲ್, ಥ್ರೋಬಾಲ್ ಆಟದಲ್ಲಿ, ಶಾಲೆಯ ಬ್ಯಾಂಡ್ ತಂಡದಲ್ಲೂ ಸೇರಿದ್ದರು. ಅದೆಷ್ಟೋ ಬಾರಿ ಇದರ ಅಭ್ಯಾಸಕ್ಕೆಂದು ರಾಷ್ಟ್ರೀಯ ಹಬ್ಬಗಳು ಹತ್ತಿರ ಬಂದಾಗ  ಕೊನೆಯ ತರಗತಿಗಳನ್ನು ಬಿಟ್ಟುಬಂದು ಅಭ್ಯಾಸ ಮಾಡುವಾಗ ತಪ್ಪದೇ ತರಗತಿಯಿಂದ ಬಂದು ಅಭ್ಯಾಸ ಮಾಡಿದ್ದಾರೆ. ಅಲ್ಲೂ ಸಣ್ಣಪುಟ್ಟ ತಲೆಹರಟೆಗಳನ್ನು ಮಾಡಿ ಬೈಸಿಕೊಂಡಿದ್ದಾರೆ ಕೂಡ. ಇನ್ನೂ ಚುಂಚಾದ್ರಿ ಕಪ್, ವಲಯ ಮಟ್ಟದ ಕ್ರೀಡಾಕೂಟಗಳು, ತಾಲೂಕು ಮಟ್ಟದ ಕ್ರೀಡಾಕೂಟಗಳು ಎನ್ನುವಾಗಲೂ ಶಾಲೆ ಬಿಟ್ಟ ನಂತರವೂ ಶಾಲಾ ಮೈದಾನದಲ್ಲಿ ಹೆಚ್ಚಿನ ಸಮಯ ಅಭ್ಯಾಸ ಮಾಡಿದ್ದಾರೆ.                  ಯಾವುದೇ ತರಗತಿಗೆ ಹೋದಾಗಲೂ ಪಾಠ ಮಾಡುವಾಗ ಸಂದರ್ಭಕ್ಕೆ ತಕ್ಕ ಹಾಗೇ ಎಲ್ಲೋ ಓದಿದ್ದ, ಅಥವಾ ಕೇಳಿದ್ದ ಒಂದಷ್ಟು ನೀತಿಕಥೆಗಳನ್ನು, ನಿಜದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದೆ. ಎಷ್ಟೋ ಬಾರಿ ಪಾಠದ ಮಧ್ಯೆ ಕಥೆಯನ್ನು ಹೇಳ ಹೊರಟಾಗ, ‘ಈ ಕಥೆ ಹೇಳಿದ್ರಿ, ಬೇರೆ ಕಥೆ ಹೇಳಿ ಸರ್’ ಎನ್ನುತ್ತಿದ್ದರು. ಮಾಡಿದ ಪಾಠಗಳು ನೆನಪಿಲ್ಲದೇ ಹೋದರೂ ಹೇಳಿದ ಕಥೆಗಳನ್ನಂತೂ ಚನ್ನಾಗಿ ನೆನಪಿಟ್ಟುಕೊಂಡಿರುತ್ತಿದ್ದರು. ಎಂಬುದು ತಿಳಿಯುತ್ತಿತ್ತು.                 ಇವರೆಲ್ಲರೂ ೧೦ನೇ ತರಗತಿಗೆ ಬಂದಾಗ ಒಂದಿಷ್ಟು ಆತ್ಮೀಯರೇ ಆಗಿದ್ದರು. ಮನೆಯಲ್ಲಿ ಅಕ್ಕನೊಂದಿಗೆ ಆಡಿದ ಜಗಳವನ್ನು ತಿಳಿಸಿ ‘ನನ್ನದೇನೂ ತಪ್ಪಿಲ್ಲ ಅಲ್ಲವೇ ಸರ್? ಇದಕ್ಕೆ ಉತ್ತರ ಹೇಳಿ ಸರ್’ ಎನ್ನುತ್ತಿದ್ದರು. ಹೋಗಲಿ ಬಿಡಿ, ಆಟೋಟಗಳ ನಡುವೆಯೂ ಓದಿನ ಬಗ್ಗೆ ಹೆಚ್ಚಿನ ಗಮನ ಇರಲಿ ಎಂದು ಆಗಾಗ ಹೇಳುತ್ತಲೇ ಇದ್ದೆವು. ಆದರೂ ಸಣ್ಣ ಪ್ರಮಾಣದಲ್ಲಾದರೂ ಇವರುಗಳ ತಲೆಹರಟೆ ಇದ್ದೇ ಇರುತ್ತಿತ್ತು. ಶಾಲೆಯ ಕೊನೆಯ ದಿನಗಳು ಹತ್ತಿರ ಆಗುತ್ತಿದ್ದಂತೆ ಇವರಿಗೆ ಓದಿನ ಕಡೆಗೆ ಗಮನ ಬರಲು ಶುರುವಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತದರ್ಜೆಯಲ್ಲದೇ ಹೋದರೂ ಉತ್ತಮ ಅಂಕಗಳನ್ನಂತೂ ಪಡೆದುಕೊಂಡಿದ್ದರು. ಹಲವರು ಅದಾಗಲೇ ಬೇರೆಬೇರೆ ಕಾಲೇಜ್ ಗೆ ಸೇರಿದ್ದರು. ಧವನ್ ಮತ್ತು ವಾಲಿಬಾಲ್ ತಂಡದ ನಾಯಕನಾಗಿದ್ದ ನಕುಲ್ ಇಬ್ಬರೂ ಕಾರ್ಕಳದ ಜ್ಞಾನಸುಧಾ ಕಾಲೇಜ್ ಗೆ ಸೇರಿದ್ದರು. ಇಬ್ಬರೂ ಹಾಸ್ಟೆಲ್ ನ ಒಂದೇ ರೂಂ ನಲ್ಲಿಯೇ ಇದ್ದರು.                 ಮೊದಮೊದಲು ಆ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಿದ್ದಾರೆ. ಅಲ್ಲಿಯ ಊಟ, ಪರಿಸರ ಎಲ್ಲವೂ ವಿಭಿನ್ನವೇ ಆಗಿತ್ತು. ಇಬ್ಬರೂ ಒಟ್ಟಿಗೆ ಆಡಿ ಬೆಳೆದವರಾಗಿದ್ದರಿಂದ ಆ ಕೊರತೆಗಳು ಹೆಚ್ಚಾಗಿ ಇವರಿಗೆ ಕಾಡಲಿಲ್ಲ. ಕೆಲವು ವಿದ್ಯಾರ್ಥಿಗಳು ವಾತಾವರಣಕ್ಕೆ ಹೊಂದಿಕೊಳ್ಳದೇ ಕಾಲೇಜ್ ಬಿಟ್ಟು ಬಂದಿದ್ದಾರೆ. ಇವರಿಬ್ಬರೂ ಏನಾದರೂ ಸರಿ ಎಂದು ಅದೇ ಕಾಲೇಜ್ ನಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ. ಹಾಸ್ಟೆಲ್ ನಲ್ಲಿ ಬೆಳಗ್ಗೆ ಬೇಗ ಎದ್ದು ಫ್ರೆಶ್ ಆದ ನಂತರ ಎಲ್ಲರನ್ನೂ ಹಾಲ್ ನಲ್ಲಿ ಸೇರಿಸುತ್ತಿದ್ದಂತೆ ಅಲ್ಲಿ ಪ್ರತೀ ರೂಮ್ ನಿಂದ ಒಬ್ಬ ವಿದ್ಯಾರ್ಥಿ ‘ಚಿಂತನ’ ಹೆಸರಿನಲ್ಲಿ ಒಂದೊಂದು ದಿನ ನೀತಿಕಥೆಗಳು, ಮೌಲ್ಯಯುತ ಕಥೆಗಳು. ಸಾಧಕರ ಪರಿಚಯ… ಹೀಗೆ ಏನಾದರೊಂದು ಮಾಡಬೇಕಿತ್ತಂತೆ. ಇವರ ರೂಮ್ ನ ಸರದಿ ಬಂದಾಗ  ನಕುಲ್ ನಾನು ತರಗತಿಯಲ್ಲಿ ಹೇಳಿದ್ದ, ‘ಒಂದು ಕೈ ಇಲ್ಲದೇ ಕರಾಟೆಯಲ್ಲಿ ಚಾಂಪಿಯನ್’ ಆದ ಜಪಾನ್ ನ ಕಥೆಯನ್ನು ಹೇಳಿದ್ದನಂತೆ. ಎಲ್ಲರೂ ಮೆಚ್ಚಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿದ್ದರಂತೆ.                 ಹಲವು ದಿನಗಳ ನಂತರ ಈ ಸರದಿ ಮುಂದುವರೆದು ಧವನ್ ಗೆ ಬರುವುದೆಂದು ತಿಳಿದಾಗ ಒಮ್ಮೆ ಕಾಲೇಜ್ ನಿಂದ ಫೋನ್ ಮಾಡಿದ್ದ, ‘ಏನಪ್ಪಾ ಹಾಸ್ಟೆಲ್ ಲಿ ಇರೋನಿಗೆ ನಾನು ನೆನಪಾಗಿದೀನಿ. ಅಂದರೆ ಏನೋ ಸಮಾಚಾರ ಇರಬೇಕು? ಏನದು?’ ಎಂದಾಗ ‘ನೀವು ನೆನಪು ಆಗ್ತಾನೇ ಇರ್ತಿರಾ ಸರ್ ಆದರೆ ಈಗ ನಿಮ್ಮನ್ನು ಬಿಟ್ಟರೆ ಬೇರೆ ಯಾರೂ ನೆನಪಾಗಲಿಲ್ಲ ಸರ್ ಅದಕ್ಕೆ ನಿಮಗೆ ಕಾಲ್ ಮಾಡಿದೆ. ಸರ್ ನೀವು ಯಾವುದಾದರೂ ಒಂದು ಒಳ್ಳೆಯ ಕಥೆಯನ್ನು ಹೇಳ್ತಿರಾ!?’ ಎಂದನು. ಈಗ ಯಾಕೋ ನಿನಗೆ ಎಂದಾಗ ‘ಇಲ್ಲಿ ಪ್ರತೀದಿನ ಸರದಿಯಂತೆ ಒಬ್ಬೊಬ್ಬರು ಏನಾದರೂ ಸ್ಫೂರ್ತಿಯಾಗುವಂತೆ ಕಥೆಗಳನ್ನೋ, ಸಾಧಕರ ಸಾಧನೆಗಳನ್ನೋ ಹೇಳಬೇಕಿದೆ. ನೀವು ತರಗತಿಯಲ್ಲಿದ್ದಾಗ ಹೇಳಿದ್ದರಲ್ಲಿ ಯಾವುದಾದರೂ ಉತ್ತಮವಾಗಿರುವುದನ್ನು ಹೇಳಿ’ ಎಂದ. ‘ಫೋನ್ ನಲ್ಲಿ ಎಷ್ಟು ಅಂತ ಹೇಳಲಿ ನಿನಗೆ?’ ಎಂದಾಗ ‘ಸರ್ ಅಕ್ಕನಿಗೆ ನಿಮಗೆ ಕಾಲ್ ಮಾಡೋಕೆ ಹೇಳ್ತಿನಿ, ಆ ನಂಬರ್ ಗೆ ನೀವು ಒಂದಿಷ್ಟು ಕಥೆಗಳನ್ನು ಕಳಿಸಿ, ಅಕ್ಕ ಇಲ್ಲಿಗೆ ಬರ್ತಾಳೆ. ಅದರಲ್ಲಿ ಉತ್ತಮ ಎನಿಸಿದ್ದನ್ನು ಆಯ್ಕೆ ಮಾಡಿಕೊಂಡು ಹೇಳ್ತಿನಿ… ಪ್ಲೀಸ್ ಸರ್ ಇಲ್ಲ ಎನ್ನಬೇಡಿ ಎಂದು ಗೋಗರೆದನು. ಆಗಲಿ ಕಳಿಸ್ತಿನಿ ಎಂದೆ. ನನ್ನ ಬಳಿಯಿದ್ದ ಆಗಾಗ ತರಗತಿಯಲ್ಲಿ ಹೇಳಲು ಎಂದು ಇಟ್ಟುಕೊಂಡಿದ್ದ ಒಂದಷ್ಟು ಕಥೆಗಳನ್ನು ಕಳಿಸಿದೆ. ಒಂದಿಷ್ಟು ದಿನಗಳ ನಂತರ ಮತ್ತೊಮ್ಮೆ ಕಾಲ್ ಮಾಡಿ, ‘ಸರ್ ಇನ್ನೂ ಹೆಚ್ಚಿನ ಕಥೆಗಳಿದ್ದರೆ ಕಳಿಸಿ ಸರ್’ ಎಂದನು ‘ಇಷ್ಟು ಕಳಿಸಿರೋದು ಸಾಕಾಗಲ್ವೇನೋ?’ ಎಂದರೆ, ‘ಹಾಗಲ್ಲ ಸರ್ ನೀವು ತರಗತಿಯಲ್ಲಿ ಹೇಳಿದ್ದ ಕಥೆಗಳನ್ನೂ ಸೇರಿಸಿ ಕಳಿಸಿ, ಅವುಗಳಲ್ಲಿ ಕೆಲವು ನೆನಪಿದಾವೆ. ಆದರೆ ಸಂಪೂರ್ಣವಾಗಿ ಓದಿಕೊಂಡು ನಂತರ ಅದರಲ್ಲಿ ಆಯ್ಕೆ ಮಾಡಿಕೊಳ್ಳೋಣ ಅಂತ ಇದೀನಿ ಹಾಗಾಗಿ…’ ಎಂದನು. ‘ಇಲ್ಲಿ ನಮ್ಮ ಹೆಸರಿನ ಜೊತೆಗೆ ನಾವು ಯಾವ ಶಾಲೆಯಿಂದ ಬಂದಿದ್ದೀವಿ ಅಂತಾನೂ ಹೇಳ್ತಾರೆ ಹಾಗಾಗಿ ಇಲ್ಲೂ ಸಾಂದೀಪನಿ ಶಾಲೆ ವಿದ್ಯಾರ್ಥಿ ಒಳ್ಳೆಯದನ್ನು ಹೇಳಿದ ಅನ್ನೋ ಹಾಗೇ ಆಗಬೇಕು ಅದಕ್ಕೆ…’ ಎಂದು ರಾಗವಾಗಿ ಹೇಳಿದನು. ‘ಈಗ ನೀನು ಒಳ್ಳೆಯವನು ಅನ್ನಿಸಿಕೊಳ್ಳೋಕೆ ನಾನು ನಿನಗೆ ಕಥೆ ಹೇಳಬೇಕಿದೆ? ಎಷ್ಟು ಇದಿಯಲೇ ನೀನು’ ಎಂದರೆ ‘ಸರ್ ನಿಮ್ಮ ವಿದ್ಯಾರ್ಥಿ ನಾನು, ನೀವೇ ಹೀಗಂದರೆ ನನಗೆ ಯಾರು ಸರ್ ಹೇಳ್ತಾರೆ ಸರ್. ಪ್ಲೀಸ್ ಪ್ಲೀಸ್ ಸರ್…’ ಎಂದನು. ಸರಿ ಆಗಲಿ ಕಳಿಸ್ತಿನಿ ಎಂದು ಹುಡುಕಾಡಿ, ಚೆಂದದ ಒಂದಿಷ್ಟು ಕಥೆಗಳನ್ನು ಆಯ್ಕೆ ಮಾಡಿ ಕಳಿಸಿದೆ.                  ಒಂದು ವಾರದ ನಂತರ ಒಂದು ಫೋಟೋ ಬಂದು ಧವನ್ ಮಾತನಾಡುತ್ತಿರುವುದು. ಅದರ ಕೆಳಗೆ, ಇಂದಿನ ಚಿಂತನ: ಧವನ್ ಕೆ.ಎಸ್, ಪ್ರೌಢಶಿಕ್ಷಣ ಸಾಂದೀಪನಿ ಶಾಲೆ, ಶಿವಮೊಗ್ಗ ಚಿಂತನೆಯ ವಿಷಯ: ಒಂದು ನಿಮಿಷದ ಬೆಲೆ ಎಂದಿತ್ತು. ಇದನ್ನು ನನಗೆ ಕಳಿಸಲು ಹೇಳಿದ್ದನಂತೆ. ನಂತರ ಕಾಲ್ ಮಾಡಿ ತುಂಬಾ ಚೆನಾಗಿತ್ತು ಅಂತ ಹೇಳಿದ್ರು, ಜೋರು ಚಪ್ಪಾಳೆ ಹೊಡೆದರು. ಒಟ್ಟಿನಲ್ಲಿ ಒಂದು ಒಳ್ಳೆಯ ಕಥೆ

Read more
Entertainmentಮನರಂಜನೆಶಿವಮೊಗ್ಗ

‘ಸರ್ ನಾಳೆಯಿಂದ ಶಾಲೆಗೆ ಬರಲ್ಲ, ನಮ್ಮ ತರಗತಿಯಲ್ಲಿಯೇ ಒಟ್ಟಿಗೆ ಊಟ ಮಾಡೋಣ’

(ARTICAL): ಶಾಲಾ ಜೀವನ ಮುಗಿಯುವಾಗ ಅನೇಕ ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು ಎಂಬುದು ಎಲ್ಲರಿಗೂ ಅನಿಸುತ್ತದೆ. ಹಾಗಾಗಿ ಶಾಲೆಯ ಅಂತಿಮ ದಿನಗಳಲ್ಲಿ ಎಲ್ಲ ಸಂಗತಿಗಳನ್ನು ತೆಗೆದುಕೊಳ್ಳುವ ರೀತಿಗಳಲ್ಲಿ ಬದಲಾಗಿರುತ್ತದೆ.  ಕೆಲವೊಮ್ಮೊ

Read more
Entertainmentಮನರಂಜನೆಶಿವಮೊಗ್ಗ

‘ಈ ನೃತ್ಯಕ್ಕೆ ಆ ಮಗುವಿಗೆ ವಸ್ತ್ರವನ್ನು ತೊಡಿಸಿ, ಮೇಕಪ್ ಕೂಡ ಅವಳೇ ಮಾಡಿದ್ದಾಳೆ’
 

(ARTICAL):ಮನಸ್ಫೂರ್ತಿ ಮಕ್ಕಳ ಬೇಸಿಗೆ ಶಿಬಿರ ಇದನ್ನು ಮಾನಸಧಾರಾ ಟ್ರಸ್ಟ್ ಮತ್ತು ನಮ್ಮ ಹಳ್ಳಿ ಥಿಯೇಟರ್ ನ ಸಹಯೋಗದಲ್ಲಿ ಹಲವು ವರ್ಷಗಳಿಂದ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳಿಗೆ ಶಿಬಿರದಲ್ಲಿ ಬೇಕಾದ ಸಾಮಗ್ರಿಗಳನ್ನು, ಮಧ್ಯಾಹ್ನದ ಊಟವನ್ನು  ನೀಡಿ, ಜೊತೆಗೆ ಹಾಡು, ನೃತ್ಯ, ನಾಟಕ, ಮೂಕಾಭಿನಯ, ರೂಪಕಗಳನ್ನು ಕಲಿಸಿಕೊಟ್ಟು ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಿ ಎಲ್ಲಾ ಪೋಷಕರ ಎದುರು ಮಕ್ಕಳು ಕಾರ್ಯಕ್ರಮ ನೀಡಿ, ಎಲ್ಲರಿಂದಲೂ ಮೆಚ್ಚುಗೆಯ ಮಾತುಗಳನ್ನು ಮಕ್ಕಳಿಗೆ ತಿಳಿಸಿದಾಗ ಏನೋ ಸಾರ್ಥಕತೆ ನಮ್ಮಲ್ಲಿ.                  ಮೊದಲಬಾರಿಗೆ ಈ ಶಿಬಿರವನ್ನು ಆಯೋಜಿಸಿದ್ದಾಗ ನಮ್ಮ ನಿರೀಕ್ಷೆಗಿಂತ ಹೆಚ್ಚಾಗಿ ಮಕ್ಕಳು ಬಂದಿದ್ದರು. ನಮ್ಮಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಕ್ಕಳನ್ನು ತೆಗೆದುಕೊಂಡೆವು. ದಿನವೂ ಅವರಿಗೆ ವಿಶೇಷ ತರಗತಿಗಳು. ಮಧ್ಯಾಹ್ನದ ನಂತರ ತರಬೇತಿ ಇರುತ್ತಿತ್ತು. ಕ್ರಾಫ್ಟ್, ಮಣ್ಣಿನಗೊಂಬೆಗಳನ್ನು ಮಾಡುವುದು, ಚಿತ್ರಕಲೆ, ಕಸದಿಂದ ರಸ ಎಂಬಂತೆ ತೆಂಗಿನಚಿಪ್ಪಿನ ಮೇಲೆ ಬಣ್ಣದ ರಚನೆ, ಮುಖವಾಡ, ಸೀಡ್ ಬಾಲ್, ಬೊಂಬೆಆಟ ಇವುಗಳ ಜೊತೆಗೆ ಆಪ್ತಸಮಾಲೋಚಕರು, ವೈದ್ಯರಿಂದ ಆಹಾರ-ಆರೋಗ್ಯ, ವರ್ತನೆಗಳು, ನಡವಳಿಕೆಗಳು, ಮೌಲ್ಯಗಳ ಒಂದಿಷ್ಟು ಮಾಹಿತಿ, ಸಿಗುತ್ತಿತ್ತು. ಮಕ್ಕಳ ಬಳಿ ಏನನ್ನೂ ಪಡೆಯದೇ ಇರುವ ಕಾರಣ ಅನೇಕ ಸಂಪನ್ಮೂಲ ವ್ಯಕ್ತಿಗಳು ಅವರಿಗೆ ನೀಡುವ ಗೌರವಧನವನ್ನೂ ಹಿಂದಿರುಗಿಸಿ, ‘ಇದನ್ನು ಈ ಶಿಬಿರಕ್ಕೆ ಬಳಸಿಕೊಳ್ಳಿ’ ಎಂದು ಹೇಳುತ್ತಿದ್ದರು.                               ಅಂತಿಮವಾಗಿ ಕಾರ್ಯಕ್ರಮ ನಡೆಸಲು ಸ್ಥಳ ನಿಗಧಿ ಮಾಡಿದ್ದಾಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆಗಿಂತಲೂ ಭರತನಾಟ್ಯದ ಮೂಲಕ ಆರಂಭಿಸಿದರೆ ಹೇಗೆ? ಎಂದು ಮಂಜುನಾಥಸ್ವಾಮಿ ಹೇಳಿದಾಗ ಆ ಶಿಬಿರದಲ್ಲಿದ್ದ ರಕ್ಷಿತ.ಸಿ.ಡಿ ಭರತನಾಟ್ಯ ತರಗತಿಗೆ ಹೋಗುತ್ತಿರುವ ಸಂಗತಿ ತಿಳಿದು ಅವಳ ಬಳಿ ಕೇಳಿದಾಗ, ‘ಆಗಬಹುದು ಅಣ್ಣ, ಚೆನಾಗಿ ಮಾಡ್ತಿನಿ. ನಿಮ್ಮಗಳಿಗೆ ಖುಷಿ ಆಗುವ ಹಾಗೆ ಮಾಡಿ ತೋರಿಸುವೆ’ ಎಂದು ಉತ್ಸಾಹದಿಂದಲೇ ಒಪ್ಪಿಕೊಂಡಳು. ದಿನವೂ ಅಭ್ಯಾಸ ಮಾಡುತ್ತಿದ್ದಳು. ಎಲ್ಲರಿಗೂ ಒಂದು ರೀತಿಯಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಹೇಗೆ ಬರುತ್ತದೋ? ಏನೋ? ಎಂಬ ಸಣ್ಣ ಅಂಜಿಕೆಯಿತ್ತು. ಆದರೆ ಅವೆಲ್ಲವನ್ನೂ ಮೀರಿದ  ಕಾರ್ಯಕ್ರಮ ಶಿಬಿರದ ಮಕ್ಕಳಿಂದ ನಡೆಯಿತು. ರಕ್ಷಿತಳ ಭರತನಾಟ್ಯ ಹೊರತುಪಡಿಸಿ ಉಳಿದೆಲ್ಲವುಗಳು ಗುಂಪುಚಟುವಟಿಕೆಗಳಾಗಿದ್ದವು. ಎಲ್ಲರನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಂತು ಸುಳ್ಳಲ್ಲ. ಅಲ್ಲಿಗೇ ಮೊದಲ ಬಾರಿಗೆ ಬೇಸಿಗೆ ಶಿಬಿರ ಮುಕ್ತಾಯವಾಗಿತ್ತು. ಯಶಸ್ವಿಯೂ ಆಗಿತ್ತು. ಮಕ್ಕಳಂತೂ, ‘ಈ ಶಿಬಿರವನ್ನು ಇನ್ನೂ ಒಂದುವಾರಕ್ಕೆ ಮುಂದುವರೆಸಿ’ ಎಂಬ ಬೇಡಿಕೆಗಳನ್ನಿಟ್ಟರು. ನಮಗೂ ಅದೇ ಆಸೆ ಇತ್ತು. ಆದರೆ ಆಗಬೇಕಲ್ಲವೇ? ಮುಂದಿನ ವರ್ಷ ಮತ್ತೆ ಸಿಗೋಣ ಆ ಸಮಯಕ್ಕೆ ಬಿಡುವು ಮಾಡಿಕೊಳ್ಳಿರಿ. ಎಂದು ಹೇಳಿ ಎಲ್ಲಾ ಮಕ್ಕಳನ್ನು ಕಳಿಸಿಕೊಟ್ಟಿದ್ದಾಯಿತು. ಅನೇಕ ಮಕ್ಕಳನ್ನು ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ ಒಲ್ಲದ ಮನಸ್ಸಿನಿಂದ ಹೋದರು.                               ರಕ್ಷಿತ ಮುಂದಿನ ದಿನಗಳಲ್ಲಿ ನಮ್ಮ ಸಾಂದೀಪನಿ ಶಾಲೆಗೆ ಸೇರಿದಳು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಕಡಿಮೆ. ಹಾಗೆ ನೋಡಿದರೆ ಶಾಲಾ ಅವಧಿಯಲ್ಲಿ ಭರತನಾಟ್ಯವನ್ನು ಮಾಡಲೇ ಇಲ್ಲ. ಶಾಲಾವಾರ್ಷಿಕೋತ್ಸವದಲ್ಲಿ ಕಿರುನಾಟಕವನ್ನು ಮಾಡಿದ್ದಳು. ಪ್ರತಿಭಾಕಾರಂಜಿಯ ಭಾಷಣ, ಜನಪದಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಳು. ಪಿಯುಸಿಯನ್ನು ಪೇಸ್ ಕಾಲೇಜ್ ನಲ್ಲಿ ಮುಗಿಸಿ ಡಿಗ್ರಿಗೆ ನಮ್ಮ ಮಾನಸ ಸಂಸ್ಥೆಯ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜ್ ಗೆ ಸೇರಿಕೊಂಡಳು. ಆ ಸಮಯದಲ್ಲೂ ನಮ್ಮ ಶಿಬಿರಕ್ಕೆ ಬಂದು ‘ಅಣ್ಣ ನಾನು ಅದನ್ನು ಹೇಳಿಕೊಡ್ತಿನಿ, ಇದನ್ನು ಹೇಳಿ ಕೊಡ್ತಿನಿ’ ಎಂದು ಖುಷಿಯಿಂದಲೇ ಬರುತ್ತಿದ್ದಳು. ನಮಗೂ ಸಣ್ಣ ಬಿಡುವು ಸಿಗುತ್ತಿದ್ದುದರಿಂದ  ನಾವುಗಳು ಸಹ ಬೇಡವೆನ್ನದೇ ‘ಆಗಲಿ ಅದೇನು ಹೇಳಿಕೊಡ್ತಿಯೋ ಹೇಳಿ ಕೊಡು’ ಎಂದು ಅವಳಿಗೆ ಬಿಟ್ಟು ಸುಮ್ಮನಾಗುತ್ತಿದ್ದೆವು. ಹೀಗೆ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ಈಗ ಕಲಿಸುವ ಹಂತಕ್ಕೆ ಬಂದಿದ್ದಾಳೆ.  ಹಿಂದಿನ ಶಿಬಿರದಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಮಾತ್ರ ಈ ಶಿಬಿರದಲ್ಲೂ ಇದ್ದರು. ಅವರಂತೂ ಉಳಿದವರಿಗೆ ‘ಸೀನಿಯರ್’ ಎನ್ನುವ ರೀತಿಯಲ್ಲಿದ್ದರು. ಎಲ್ಲರೊಂದಿಗೆ ನಿರ್ಭೀತಿಯಿಂದಿದ್ದರು. ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಲವಲವಿಕೆಯಿಂದ ಓಡಾಡುತ್ತಿದ್ದರು.  ಹಲವು ವರ್ಷಗಳು ಹಿಗೆಯೇ ಶಿಬಿರ ಸಾಗಿ ಬಂದಿದೆ. ಬರುತ್ತಲೇ ಇದೆ. ಈ ವರ್ಷವೂ ಶಿಬಿರವನ್ನು ಆಯೋಜಿಸುವ ಸಮಯದಲ್ಲಿ ಅನೇಕ ಎನ್.ಜಿ.ಓ ಗಳು ಕೈ ಜೋಡಿಸಿದರು. ಡೂ ಮೈಂಡ್ಸ್ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಗಣಿತದ ತ್ರಿಭುಜ, ಚೌಕ, ಗೋಪುರ ಹೀಗೆ ಹಲವು ಮಾದರಿಗಳನ್ನು ಮಕ್ಕಳಿಂದ ಕ್ರಿಯಾಶೀಲವಾಗಿ ಮಾಡಿಸಿದರು. ಕಲಿಕಾನ್ಯೂನ್ಯತೆ ಇರುವ ಮಕ್ಕಳು ಹೆಚ್ಚಿದ್ದರಿಂದ ಅವರಿಗೆ ನಿಧಾನವಾಗಿ ಹೇಳಿಕೊಡಬೇಕಿತ್ತು. ಮನಸ್ಪೂರ್ತಿ ಕಲಿಕಾ ಕೇಂದ್ರದಲ್ಲಿ ಓದಿದ್ದ, ಹಿಂದಿನ ಶಿಬಿರಗಳಲ್ಲಿ ಭಾಗವಹಿಸಿ ಈಗ ಕಾಲೇಜ್ ಓದುತ್ತಿದ್ದ ಒಂದಿಷ್ಟು ಮಕ್ಕಳು ಸ್ವಯಂಸೇವಕರಂತೆ ಈ ಶಿಬಿರದಲ್ಲಿದ್ದು ವಿವಿಧ ಮಕ್ಕಳ ಗುಂಪುಗಳನ್ನು ಮಾಡಿದ್ದಾಗ ಅವರುಗಳ ಜೊತೆ ಸೇರಿ ಹೇಳಿಕೊಡುತ್ತಿದ್ದರು. ಅಗಸ್ತ್ಯ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಓರೆಗಾಮಿ ಕಲೆಗಳ ಬಗ್ಗೆ ಹೇಳಿಕೊಟ್ಟರು. ಜೊತೆಗೆ ಎಲ್ಲಾ ಮಕ್ಕಳಿಗೂ ಉಚಿತವಾಗಿ ಓರೆಗಾಮಿ ಕಲೆಯ ಮಾದರಿಗಳನ್ನು ಮಾಡುವ ಪುಸ್ತಕವನ್ನು ನೀಡಿದರು. ಕಿಡ್ಸ್ (ಪರಿಸರ ಅಧ್ಯಯನ ಕೇಂದ್ರ)ದ ವತಿಯಿಂದ ಮಕ್ಕಳಿಗೆ ಪರಿಸರದ ಉಪಯೋಗ, ಸಂರಕ್ಷಣೆ, ಪ್ರಾಣಿ-ಪಕ್ಷಿಗಳ ಬಗೆಗೆ ಉತ್ತಮವಾಗಿ ತಿಳಿಸಿಕೊಟ್ಟರು. ಇಂಡಿಯನ್ ಅಮೇರಿಕನ್ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಸುಲಭವಾಗಿ ಗಣಿತ, ವಿಜ್ಞಾನ, ಕ್ರಾಫ್ಟ್ ಬಗ್ಗೆ ತಿಳಿಸಿಕೊಟ್ಟರು. ಹಲವು ಸಂಸ್ಥೆಗಳಿಂದ ಮಕ್ಕಳಿಗೆ ಹೊಸಹೊಸ ವಿಷಯಗಳನ್ನು ಕಲಿಯಲು ಅನುಕೂಲವಾಯಿತು. ಹಲವು ವರ್ಷಗಳ ನಂತರ ಈಗ ಬೆಂಗಳೂರಿನಲ್ಲಿ ಹೆಚ್ಚಿನ ವಿಧ್ಯಾಭ್ಯಾಸ ಮಾಡುತ್ತಿರುವ ರಕ್ಷಿತ ರಜೆಯ ನಿಮಿತ್ತ ಊರಿಗೆ ಬಂದಿದ್ದಳು. ಶಿಬಿರದ ಫೋಟೋಗಳನ್ನು ನೋಡಿ ‘ಅಣ್ಣ ನಾನು ಈಗ ಊರಿಗೆ ಬಂದಿದ್ದೀನಿ, ಶಿಬಿರದಲ್ಲಿ ಮಕ್ಕಳಿಗೆ ನೃತ್ಯ ಏನಾದರು ಹೇಳಿ ಕೊಡಲಾ?’ ಎಂದಳು. ‘ಧಾರಾಳವಾಗಿ ಬಾ ನಮಗೂ ಸ್ವಲ್ಪ ಭಾರ ಕಡಿಮೆ ಆದ ಹಾಗೆ ಆಗುತ್ತದೆ ಎಂದೆ’. ಖುಷಿಯಿಂದ ಶಿಬಿರಕ್ಕೆ ಬಂದಳು. ಆಗ ತಾನು ಭಾಗವಹಿಸಿದ್ದ ಸಂಗತಿಗಳನ್ನು ಹಂಚಿಕೊಂಡಳು. ಆಗ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದವಳು ಈಗ ಅದೇ ಶಿಬಿರದಲ್ಲಿ ಮಕ್ಕಳಿಗೆ ಕಲಿಸಿಕೊಡಲು ಬಂದಿರುವುದು ಹೆಮ್ಮೆಯ ವಿಷಯವಾಗಿತ್ತು. ಶಿಬಿರದಲ್ಲಿ ಬೆಳಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಇತರ ತರಗತಿಗಳು ನಡೆಯುತ್ತಿದ್ದವು. ಮಧ್ಯಾಹ್ನ ನಾಟಕ, ನೃತ್ಯಗಳ ಅಭ್ಯಾಸ ಇದ್ದುದರಿಂದ ಆ ಸಮಯಕ್ಕೆ ಬರುತ್ತಿದ್ದಳು. ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೂ ಶಿಬಿರದಲ್ಲಿರುತ್ತಿದ್ದಳು. ಕೇಳಿದರೆ ‘ಹೇಗಿದ್ದರೂ ರಜೆ ಇದೆಯಲ್ಲ ಅಣ್ಣ. ಸುಮ್ಮನೆ ಮನೇಲಿ ಕೂರೋದಕ್ಕಿಂತ ಇಲ್ಲಿ ಬಂದರೆ ಸಮಯ ಹೋಗೋದೇ ಗೊತ್ತಾಗಲ್ಲ’ ಎನ್ನುತ್ತಿದ್ದಳು. ಕಲಿಯುತ್ತಿದ್ದವಳು ಕಲಿಸುವ ಹಂತಕ್ಕೆ ಬೆಳೆದಿದ್ದು ಸಂತೋಷದ ಸಂಗತಿಯಾಗಿತ್ತು. ಈ ಬಾರಿ ಅಂಬೇಡ್ಕರ್ ಭವನದಲ್ಲಿ ಸಮಾರೋಪ ಕಾರ್ಯಕ್ರಮ ಎಂದು ನಿರ್ಧರಿಸಲಾಯಿತು. ಇನ್ನೇನು ಶಿಬಿರ ಮುಕ್ತಾಯಗೊಳ್ಳಲು ಎರಡು ದಿನ ಇರುವಾಗ ಸಮಾರೋಪದಲ್ಲಿ ಸ್ವಾಗತನೃತ್ಯವನ್ನು ಮಾಡಿಸುವ ಬಗ್ಗೆ ಮಾತನಾಡಿಕೊಂಡಾಗ ಬೇರೆಯವರು ಸಿಗುವುದು ಕಷ್ಟ ಎನಿಸಿತು. ಶಿಬಿರದಲ್ಲಿದ್ದ ಮಕ್ಕಳಲ್ಲಿ ಪೂಜಾ.ಡಿ.ಜಿ ತಾನು ಭರತನಾಟ್ಯ ತರಗತಿಗೆ ಹೋಗುತ್ತಿದ್ದ ಸಂಗತಿಯನ್ನು ತಿಳಿಸಿದಳು. ಅವಳಿಗೆ ಹೇಳಿದೆವು. ಉತ್ಸಾಹದಿಂದ ಒಪ್ಪಿಕೊಂಡು ಅಂತೂಇಂತೂ ಸಿದ್ಧಳಾದಳು. ಅವಳಿಗೆ ಬೇಕಾದ ವಸ್ತ್ರಗಳನ್ನು ಕೊಡಿಸಿದ್ದಾಯಿತು.  ಸಮಾರೋಪದ ಕೆಲಸಗಳಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದೆವು. ಪೂಜಾಳಿಗೆ ಮೇಕಪ್ ಮಾಡುವ ಬಗ್ಗೆ ಯೋಚಿಸಿದಾಗ ರಕ್ಷಿತಳಿಗೆ ತಿಳಿಸಿದಾಗ, ಫೌಂಡೇಶನ್ ಕ್ರೀಮ್, ಕಾಜಲ್… ಹೀಗೇ ಕೆಲವು ಸಾಮಗ್ರಿಗಳು ಬೇಕೆಂದು ತಿಳಿಸಿದಳು. ‘ತಂದುಕೊಡುವೆವು. ಬೇಗ ಬಾ’ ಎಂದು ಹೇಳಿದೆವು. ನಮಗೋ ಭರತನಾಟ್ಯ ನೋಡಿ ಗೊತ್ತಿತ್ತೇ ಹೊರತು ಅದರ ಮೇಕಪ್ ಬಗ್ಗೆ ತಿಳಿದದ್ದು ಕಡಿಮೆ. ಆದರೂ ಅದಕ್ಕೆ ವ್ಯವಸ್ಥೆ ಮಾಡಿದೆವು. ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆ ಆಗುತ್ತಿತ್ತು. ಇತ್ತ ಮೇಕಪ ಕೊಠಡಿಯಲ್ಲಿ ಮಕ್ಕಳು ಸಿದ್ಧರಾಗುತ್ತಿದ್ದರು. ಪೂಜಾಳಿಗೆ ವಸ್ತ್ರವನ್ನು ಹಾಕಿ, ಮೇಕಪ್ ಮಾಡತೊಡಗಿದಳು. ಪೂಜಾ, ‘ಅಕ್ಕ ಅದು ಹಾಗಲ್ಲ, ಹೀಗೆ’ ಎಂದು ಏನೇನೋ ಹೇಳುವಾಗ ಪಕ್ಕದಲ್ಲಿದ್ದ ನಾಗಶಯನ, ‘ನೀನು ಸುಮ್ಮನೆ ಇರಮ್ಮ ಅವಳಿಗೆ ತುಂಬಾ ಚೆನಾಗಿ ಗೊತ್ತಿದೆ. ಈ ತರದ ಸಾವಿರಾರು ಕಾರ್ಯಕ್ರಮ ಮಾಡಿದ್ದಾಳೆ. ಅವಳಿಗೆ ಗೊತ್ತಿದೆ’ ಎಂದನು. ಕೆಲವೊಂದು ವಸ್ತುಗಳು ಇಲ್ಲದಿದ್ದಾಗ, ‘ಅಣ್ಣಾ ಅದು ಬೇಕು, ಇದು ಬೇಕು’ ಎನ್ನುತ್ತಿದ್ದಳು. ತಕ್ಷಣಕ್ಕೆ ಸಿಕ್ಕಿದ್ದನ್ನು ಕೊಟ್ಟೆವು. ಸಿಗದೇ ಇದ್ದಾಗ ಏನಾದರೂ ಮಾಡ್ತಿನಿ ಬಿಡಿ ಎಂದು ಅಂತೂ ಇಂತು ಪೂಜಾಳನ್ನು ಸಿದ್ಧಗೊಳಿಸಿದ್ದಳು. ‘ಹೂವು ಒಂದು ಬಾಕಿ ಉಳಿತು ನೋಡಿ’ ಎಂದಳು. ಅದರ ಬಗ್ಗೆ ಆಮೇಲೆ ನೋಡೋಣ ಬಾ ಎಂದು ಕೊಠಡಿಯಿಂದ ಹೊರ ಬಂದಾಗ ಅಲ್ಲಿ ಮತ್ತೊಂದು ನೃತ್ಯಕ್ಕೆ ಸಿದ್ಧರಾಗಿದ್ದ ಮಕ್ಕಳು ಹೂವು ಮುಡಿದು ನಿಂತಿದ್ದರು. ನಾವಿಬ್ಬರೂ ಒಬ್ಬರಿಗೊಬ್ಬರು ನೋಡಿಕೊಂಡು  ಆ ಹುಡುಗಿಯ ಬಳಿ ಮಾತನಾಡಿ ಹೂವನ್ನು ಪಡೆದುಕೊಂಡು ಪೂಜಾಳಿಗೆ ನೀಡಿದೆವು.                 ವೇದಿಕೆ ಕಾರ್ಯಕ್ರಮ ಆರಂಭವಾಯಿತು. ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಸ್ವಾಗತ ನೃತ್ಯ ಆರಂಭವಾಯಿತು. ರಜನಿಪೈ ಮೇಡಂ ಬಳಿ ‘ಎರಡು ದಿನಗಳಲ್ಲಿ ಕಲಿತು ಪ್ರದರ್ಶನ ನೀಡುತ್ತಿದ್ದಾಳೆ’ ಎಂದಾಗ ಸಂತೋಷಪಟ್ಟರು. ‘ಮೊದಲಬಾರಿಗೆ ರಕ್ಷಿತ ಈ ರೀತಿಯ ನೃತ್ಯ ಮಾಡಿದ್ದಳು ಅಲ್ಲವಾ?’ ಎಂದರು. ‘ಹೌದು ಮೇಡಂ. ಈ ನೃತ್ಯಕ್ಕೆ ಆ ಮಗುವಿಗೆ ವಸ್ತ್ರವನ್ನು ತೊಡಿಸಿ, ಮೇಕಪ್ ಕೂಡ ಅವಳೇ ಮಾಡಿದ್ದಾಳೆ. ಜೊತೆಗೆ ಶಿಬಿರದಲ್ಲಿ ಎರಡು ನೃತ್ಯವನ್ನು ಸಹ ಹೇಳಿಕೊಟ್ಟಿದ್ದಾಳೆ’ ಎಂಬ ಸಂಗತಿಯನ್ನು ತಿಳಿಸಿದೆ. ನೃತ್ಯವು ಚೆನ್ನಾಗಿ ಮೂಡಿಬಂದಿತು. ಕೇವಲ ಎರಡು ದಿನಗಳಲ್ಲಿ ಕಲಿತು ಈ ನೃತ್ಯವನ್ನು ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆಗೆ ಪೂಜಾ ಪಾತ್ರಳಾದಳು. ಶಿಬಿರದಲ್ಲಿ ಸಹಕರಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಯಿತು. ನಂತರ ಕಾರ್ಯಕ್ರಮಗಳನ್ನು ಮಕ್ಕಳು ಪ್ರಸ್ತುತ ಪಡಿಸಿದರು. ಅನೇಕ ಪೋಷಕರು ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷವೂ ತಪ್ಪದೇ ಮಕ್ಕಳನ್ನು ಕಳಿಸುತ್ತೇವೆ ಎಂದರು. ಒಟ್ಟಾರೆಯಾಗಿ ಕಾರ್ಯಕ್ರಮ ಚೆಂದವಾಗಿ ಮೂಡಿಬಂದಿತು. ಸರ್ಕಾರಿ, ಅನುದಾನಿತ ಶಾಲೆಯ ಮಕ್ಕಳು ಜೊತೆಗೆ ಕಲಿಕಾನ್ಯೂನ್ಯತೆ ಇರುವ ವಿಶೇಷ ಚೇತನ ಮಕ್ಕಳು ಈ ಬಾರಿಯ ಶಿಬಿರದಲ್ಲಿದ್ದರು. ಒಂದೆರಡು ಖಾಸಗಿ ಶಾಲೆಯ ಮಕ್ಕಳೂ ಸಹ ಇದ್ದರು. ಎಲ್ಲರೂ ಎಲ್ಲರೊಂದಿಗೆ ಬೆರೆತು. ಹಾಡಿ, ಕುಣಿದು ಕಲಿತು, ಕಾರ್ಯಕ್ರಮ ನೀಡಿದ ಪರಿ ಮಾತ್ರ ಸಂತೋಷ ನೀಡಿತ್ತು. ಎಲ್ಲಾ ಮಕ್ಕಳನ್ನು ಕಳಿಸಿಕೊಟ್ಟು ನಾವುಗಳು ಕೆಲವರೇ ಉಳಿದೆವು. ಅಂಬೇಡ್ಕರ್ ಭವನದ ಮೆಟ್ಟುಲ ಮೇಲೆ ಕುಳಿತು ಎಲ್ಲಾ ಪರಿಕರಗಳನ್ನು ತೆಗೆದುಕೊಂಡು ಹೋಗಲು ಗಾಡಿಗಾಗಿ ಕಾಯುತ್ತ ಕುಳಿತಾಗ ಮೊದಲಬಾರಿಗೆ ಶಿಬಿರಾರ್ಥಿಯಾಗಿ ಬಂದಿದ್ದ ರಕ್ಷಿತ ಈ ಬಾರಿ ಸಂಪನ್ಮೂಲವ್ಯಕ್ತಿಯ ರೂಪದಲ್ಲಿ ಬಂದು ಕಲಿಸಿದ್ದು, ಮಕ್ಕಳೊಂದಿಗೆ ಬೆರೆತಿದ್ದು, ಮಕ್ಕಳಿಗೆ ವಸ್ತ್ರವನ್ನು ತೊಡಿಸಿ, ಮೇಕಪ್ ಮಾಡಿ ಕೈ ಜೋಡಿಸಿದ್ದು ಎಲ್ಲರಿಗೂ ಖುಷಿ ತಂದಿತ್ತು. ‘ಮುಂದಿನ ವರ್ಷವೂ ಸಾಧ್ಯವಾದರೆ ಮತ್ತೊಂದಿಷ್ಟು ಚಟುವಟಿಕೆ ಮಾಡಿಸುತ್ತೇವೆ ಅವಕಾಶ ಕೊಡಿ ಅಣ್ಣ’ ಎಂದು ಕೇಳಿದಾಗ.

Read more
Entertainmentಮನರಂಜನೆ

‘ಏನ್ರಮ್ಮಾ ಪರೀಕ್ಷೆ ಮುಗಿಸಿ ಇನ್ನೂ ದೇವರೇ ಕಾಪಾಡಬೇಕು ಅಂತ ದೇವಸ್ಥಾನಕ್ಕೆ ಬಂದ್ರಾ!?’

(ARTICAL): ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಸಮವಸ್ತ್ರದಲ್ಲಿ ಕಡೆಯದಿನ ಎಂದರೆ ಅದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಕಡೆಯ ದಿನವೇ ಆಗಿರುತ್ತದೆ. ಪ್ರತೀಬಾರಿಯೂ ವಿದ್ಯಾರ್ಥಿಗಳು ಕಡೆಯ ಪರೀಕ್ಷೆಗಿಂತ, ಪರೀಕ್ಷೆಯ ನಂತರ ಪಾರ್ಟಿ

Read more
Entertainmentಮನರಂಜನೆ

‘ಇಷ್ಟು ದೊಡ್ಡ ಬಹುಮಾನ ಪಡೆದಿದ್ದೀರಿ ಸ್ವೀಟ್ ಕೊಡಬೇಕು’

(ARTICAL): ‘ರಸಪ್ರಶ್ನೆ’ ನನಗಂತೂ ಬಹಳ ಇಷ್ಟದ ಸ್ಪರ್ಧೆ. ನಾನು ಶಾಲಾ ದಿನಗಳಲ್ಲಿ ಇದ್ದಾಗ ಬೇರೆಬೇರೆ ಸ್ಪರ್ಧೆಗಳಿದ್ದರೂ ಹೆಚ್ಚಿನ ಗಮನ ಇರ್ತಾ ಇದ್ದದ್ದು ರಸಪ್ರಶ್ನೆಯಲ್ಲಿ. ಯಾಕೆಂದರೆ ಬೇರೆ ಸ್ಪರ್ಧೆಗಳಲ್ಲಿ

Read more
ನ್ಯೂಸ್ಮನರಂಜನೆಶಿವಮೊಗ್ಗ

ಕೆರೆಗೆ ಹಾರ ರೂಪಕ:
ಸುರಭಿ ಮಹಿಳಾ ಯಕ್ಷ ತಂಡದ ಯಶಸ್ವಿ ಪ್ರಯೋಗ

(SHIVAMOGA): ಸೊರಬ: ಸಂದರ್ಭೋಚಿತ ನೀರಿನ ಮಹತ್ವ, ನೀರಿಗಾಗಿ, ಜನತೆಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಭಾಗೀರತಿ ಕತೆಯನ್ನು ಮನೋಜ್ಞವಾಗಿ ಪ್ರದರ್ಶಿಸಿ ಪರಿಸರ ಕಾಳಜಿಯನ್ನು ನೆನಪಿಸಿದ ಜನಪದ ನಾಟಕ ಕೆರೆಗೆ

Read more
Entertainmentಮನರಂಜನೆ

‘ಇದೇ ನನಗೆ ಅನ್ನ ಕೊಟ್ಟ ಸಂಸ್ಥೆ, ನನ್ನ ಬದುಕನ್ನು ಕಟ್ಟಿಕೊಟ್ಟ ಶಾಲೆ’

(ARTICLE): ‘ಟ್ರಿಪ್’ ಅಂತ ಏನಾದರೂ ಪ್ಲಾನ್ ಮಾಡಿದರೆ ಆರಂಭದಲ್ಲಿ ಅದರ ಬಗ್ಗೆ ಬಹಳಷ್ಟು ಚರ್ಚೆ ನಡೆದೇ ನಡೆಯತ್ತೆ. ಬರುವವರು, ಬರದೇ ಇರುವವರು ಎಲ್ಲರೂ ಸೇರಿ ಆ ಸ್ಥಳಕ್ಕೆ

Read more
ನ್ಯೂಸ್ಮನರಂಜನೆಶಿವಮೊಗ್ಗ

ರಂಗಭೂಮಿ ಕಲಾವಿದ, ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ ಏಸು ಪ್ರಕಾಶ್ ಇನ್ನಿಲ್ಲ.

(SHIVAMOGA: ಕನ್ನಡದ ಹಲವು ಸಿನಿಮಾಗಳಲ್ಲಿ ತನ್ನ ವಿಶಿಷ್ಟ ನಟನೆಯ ಮೂಲಕ ಗುರ್ತಿಸಿಕೊಂಡಿದ್ದಂತ ಸ್ಯಾಂಡಲ್ ವುಡ್ ನಟ ಪ್ರಕಾಶ್ ಹೆಗ್ಗೋಡು ಇಂದು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ. ರಂಗಭೂಮಿ ಕಲಾವಿದ,

Read more
Entertainmentಮನರಂಜನೆ

‘ಈ ಫೋಟೋದಲ್ಲಿರೋದು ನಾವು ಅಂತ ಯಾರಿಗೂ ಗೊತ್ತಾಗಲ್ಲ ಬಿಡಿ’

(ARTICAL) : ‘ಹೋಳಿ’ ಬಣ್ಣಬಣ್ಣಗಳಲ್ಲಿ ಮಿಂದೇಳುವ ಸಮಯ. ಶಾಲಾ ಮಕ್ಕಳಿಗೆ ಬಣ್ಣಗಳಲ್ಲಿ ಆಡುವುದೆಂದರೆ ಹೆಚ್ಚು ಆಸಕ್ತಿ. ಅದರಲ್ಲೂ ರಜಾದಿನದಲ್ಲಿ ಹಬ್ಬ ಬಂದರoತೂ ಖುಷಿಯೋ ಖುಷಿ. ಆದರೆ ಅಪ್ಪೀತಪ್ಪೀ

Read more
Entertainmentಮನರಂಜನೆ

‘ನಾವು ಹುಡುಗಿಯರೆಲ್ಲರೂ ಒಟ್ಟಿಗೆ ಕೂತು ಊಟ ಮಾಡಬೇಕಿದೆ ಅದಷ್ಟೇ ನಮ್ಮ ಆಸೆ’

(ARTICLE): ಮಕ್ಕಳ ಬದುಕಲ್ಲಿ ಶಾಲಾ ಜೀವನದ ಕೊನೆಯ ದಿನಗಳು ಎಂದರೆ ಅವು ಮರೆಯದಂತ ಕ್ಷಣಗಳಾಗಿರುತ್ತವೆ. ಅಂತಿಮ ಪರೀಕ್ಷೆಗಳು ಹತ್ತಿರವಾಗುವ ಸಮಯದಲ್ಲಿ ಪ್ರೌಢಶಾಲೆಯಲ್ಲಿ ಕಳೆದ ಮೂರು ವರ್ಷಗಳ ಎಲ್ಲಾ

Read more
Entertainmentಮನರಂಜನೆ

ನಮ್ಮನ್ನ ನೋಡೋಕೆ ನಿಮ್ಮ ಟಿ.ವಿ ಕ್ಯಾಮರಾ ಹಿಡ್ಕೊಂಡು ಬಂದಿದೀರಲ್ಲ, ಈಗ ಖುಷಿ ಆಯ್ತು!!.

(ARTICAL): ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಹತ್ತಿರವಾಗುತ್ತಿರುವ ಸಮಯ. ಕಳೆದ ಬಾರಿ ನಮ್ಮ ಶಾಲೆಯ ಮಕ್ಕಳು ಶಿವಮೊಗ್ಗ ನಗರದ ಮೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಕಸ್ತೂರಬಾ ಶಾಲೆ, ಬಸವೇಶ್ವರ ಶಾಲೆ

Read more
Fashionಮನರಂಜನೆ

‘ಮೇಷ್ಟ್ರೇ ಅಂತ ಧೈರ್ಯವಾಗಿ ನನ್ನನ್ನು ಕರೆಯುವವನು ಇವನೊಬ್ಬನೇ ಅನ್ಸತ್ತೆ…’

(ARTICLE): ಒಂದಿಷ್ಟು ತಿಂಗಳುಗಳ ಕೆಳಗೆ ನಮ್ಮ ಮನೆ ಎದುರಿಗೆ ಖಾಲಿ ಇದ್ದ ‘ಸಂಪಿಗೆ’ ಮನೆಗೆ ಒಂದು ಪುಟ್ಟ ಕುಟುಂಬವೊoದು ಬಂದಿತು. ಮಗಳು ನನ್ನ ಹಳೆಯ ವಿದ್ಯಾರ್ಥಿನಿ ಸ್ಟೆವಿಜೋಸ್

Read more
ನ್ಯೂಸ್ಮನರಂಜನೆ

ಕಲಬುರಗಿಯ “ಪಾಶ” ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಗಳ ಮಹಾಪೂರ

(FILM NEWS): “ಪಾಶ” ಕಿರುಚಿತ್ರ ಗಧಾಗ್ರಜ ಫಿಲಂಸ್ ನ ಅಡಿಯಲ್ಲಿ ನಿರ್ಮಾಣಗೊಂಡಿದ್ದು. ಈ ಕಿರುಚಿತ್ರ ಸರಾಸರಿ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಲಬುರಗಿಯವರೇ ಆದ ನಿರ್ದೇಶಕ “ಲಕ್ಷ್ಮೀಕಾಂತ ಜೋಶಿ”ಯವರು

Read more
ಮನರಂಜನೆ

‘ಶಾಲೆಯಲ್ಲಿ ಮಾಡೋ ಹಾಗೇ ಇಲ್ಲೂ ಮಾರ್ಕ್ಸ್ ಕಟ್ ಮಾಡಿದಿರಾ! ಹೇಗೆ ಸರ್?’

(ARTICAL): ಶಾಲೆಯಲ್ಲಿ ಎಲ್ಲಾ ಮಕ್ಕಳು ಪರೀಕ್ಷೆ ಮುಗಿಸಿ ಒಂದಿಷ್ಟು ಸಮಯ ರಜೆ ಎಂದು ಅದರಲ್ಲಿ ಮುಳುಗಿಹೋಗಿರುತ್ತಾರೆ. ಅಜ್ಜಿ ಮನೆ, ಟೂರ್, ಟ್ರಿಪ್, ಶಿಬಿರ ಹೀಗೇ ಒಂದಲ್ಲಾ ಒಂದು

Read more
Scan the code