ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಗೆಲುವಿನ ಹಿನ್ನೆಲೆ ವಿಜ್ರಂಭಣೆಯಿಂದ ಸಂಭ್ರಮಾಚರಣೆ.
(KOLARA): ಬೇತಮಂಗಲ : ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಗೆಲುವಿನ ಹಿನ್ನೆಲೆ ವಿಜ್ರಂಭಣೆಯಿಂದ ಸಂಭ್ರಮಿಸಿದರು..
ಗ್ರಾಮದ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಜೈಕಾರ ಹಾಕಿ ಸಂಭ್ರಮಾಚರಣೆ ಮಾಡಿದರು..
ಇದೇ ಸಂದರ್ಭದಲ್ಲಿ ಗ್ರಾಮಾಂತರ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ. ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಲ್ಲಿ ಕಡಿಮೆ ಅಂತರದಲ್ಲಿ ಎರಡು ಬಾರಿ ಸೋತರು ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿತು. ಕೋಲಾರ ಲೋಕಸಭಾ ಕ್ಷೇತ್ರದ ಜನತೆಯೂ ಮಲ್ಲೇಶ್ ಬಾಬು ಅವರಿಗೆ ಆಶೀರ್ವಾದ ಮಾಡುವ ಮೂಲಕ ಲೋಕಸಭೆಗೆ ಕಳುಹಿಸಿದ್ದಾರೆ ಎಂದರು.
ಸಂಭ್ರಮಾಚರಣೆಯಲ್ಲಿ ಮುಖಂಡರಾದ ಲಕ್ಷ್ಮೀನಾರಾಯಣ, ಮಮತ ಗಣೇಶ್, ರಾಧಮ್ಮ, ಲಕ್ಷ್ಮೀಪತಿ, ಕೃಷ್ಣ ಮೂರ್ತಿ, ಕಮ್ಮಸಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಾಮೋದರ್ ರೆಡ್ಡಿ, ಯೋಗೇಶ್, ಸಿ.ಶ್ರೀನಿವಾಸ್, ಅಲುವೇಲಮ್ಮ, ಮೋತಕಪಳ್ಳಿ ಪರದಮಗೌಡ, ಸುಧಾಕರ್ ರೆಡ್ಡಿ,ಸುಬ್ರಮಣಿ, ಅಂಬರೀಷ್, ಓಂ ಸುರೇಶ್, ಗಂಗಮ್ಮ ಕೊಂಡಪ್ಪ , ರಮೇಶ್, ಮುರಳಿ, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ