ಕೋಲಾರನ್ಯೂಸ್

ಕರ್ನಾಟಕ ರಿಪಬ್ಲಿಕನ್ ಸಂಘಟನೆಯ 2ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಮಾವೇಶವನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಮಾರ್ಚ್ 27 ರಂದು ಆಚರಣೆ.

ಕರ್ನಾಟಕ ರಿಪಬ್ಲಿಕನ್ ಸಂಘಟನೆಯ 2ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಮಾವೇಶವನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಮಾರ್ಚ್ 27 ರಂದು ಆಚರಣೆ.

(KOLARA): ಬಂಗಾರಪೇಟೆ: ಬಡವರ,ದಲಿತರ, ಮಹಿಳೆಯರ, ಕಾರ್ಮಿಕ ಪರವಾಗಿ ವ್ಯವಸ್ಥಿತವಾಗಿ ನಿರಂತರವಾಗಿ ಹೋರಾಟ ಗಳನ್ನು ಮಾಡುವ ಮೂಲಕ ನೊಂದವರಿಗೆ ನ್ಯಾಯ ಒದಗಿಸುವುದೇ ಸಂಘಟನೆಯ ಗುರಿಯನ್ನು ಹೊಂದಿರುವುದಾಗಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ರಾಜ್ಯಾಧ್ಯಕ್ಷ ಬೆಳ್ತೂರು ವೆಂಕಟೇಶ್ ತಿಳಿಸಿದರು.

ಪಟ್ಟಣದ ಅಂಬೇಡ್ಕರವರ ಸಮುದಾಯ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಘಟನೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸುವ ಮತ್ತು ರಾಜ್ಯಾದ್ಯಂತ ಸಂಘಟನೆಯನ್ನು ಮಾಡುವುದೇ ವಾರ್ಷಿಕೋತ್ಸವ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಮತ್ತು ಕರ್ನಾಟಕ ರಿಪಬ್ಲಿಕನ್ ಸಂಘಟನೆಯು ರಾಜ್ಯಾದ್ಯಂತ ಅನೇಕ ಹೋರಾಟಗಳ ಮೂಲಕ ಜನ ಸಾಮಾನ್ಯರ ಗಮನವನ್ನು ಸೆಳೆಯುವ ಮೂಲಕ ತನ್ನದೇ ಆದ ಸಿದ್ದಾಂತ ಮತ್ತು‌ ಅಸ್ತಿತ್ವವನ್ನು ಹೊಂದಿದ್ದು, ಜನರ ಧ್ವನಿಯಾಗಿ ಹೋರಾಟ ಗಳನ್ನು ಮಾಡುವ ಮೂಲಕ ಎರಡು ವರ್ಷಗಳನ್ನು ಪೂರೈಸಿದೆ.

ಬಾಬಾ ಸಾಹೇಬ್ ಅಂಬೇಡ್ಕ‌ರರವರ ವಿಚಾರಧಾರೆಗಳ ಆಧಾರದವಾಗಿ ಅನ್ಯಾಯ ವಿರುದ್ಧ ಹೋರಾಟ ಮಾಡುವುದೇ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಮತ್ತು ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ತತ್ವ ಸಿದ್ದಾಂತ ಗಳ ಬಗ್ಗೆ ಜನರಿಗೆ ಇನ್ನಷ್ಟು ತಿಳಿಸುವ ಕಾರ್ಯವನ್ನು ಮಾಡುತ್ತೇವೆ ಎಂದರು

ಜಿಲ್ಲಾಧ್ಯಕ್ಷ ನವರ ನೇತೃತ್ವದಲ್ಲಿ ಈ ಭಾಗದಲ್ಲಿ ಸಂಘಟನೆಯನ್ನು ಶಕ್ತಿಯನ್ನು ಹೆಚ್ಚಿಸುವ ಮತ್ತು ಬೆಂಗಳೂರಿನಲ್ಲಿ ನಡೆಯುವ ಸಮಾವೇಶವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ರೂಪುರೇಷೆಗಳ ಕುರಿತು ಚರ್ಚಿಸಿದ್ದವೆ ಎಂದು ತಿಳಿಸಿದರು.

ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ ಮಾತನಾಡಿ
ಹಲವಾರು ವರ್ಷಗಳಿಂದ ಜನಪರ ಹೋರಾಟಗಳನ್ನು ಮಾಡಿದ್ದು, ಅವುಗಳಲ್ಲಿ ಜಯ, ಅಪಜಯಕ್ಕೆಬ ಕಂಡಿದ್ದು , ಕರ್ನಾಟಕ ರಿಪಬ್ಲಿಕನ್ ಸೇನೆಯ ಸಂಸ್ಥಾಪಕರಾಗಿದ್ದ ನನ್ನ ಗುರುಗಳಾದ ಜಿಗಣಿ ಶಂಕರ್ ರವರು ದೈವಾಧೀನರಾಗಿ ಎರಡು ವರ್ಷಗಳು ಕಳೆದಿದ್ದು ,ನಮ್ಮ ಎಲ್ಲಾ ಹಾರಾಟಗಳಿಗೆ ಇಂದಿಗೂ ಸಹ ಅವರು ಸ್ಪೂರ್ತಿ ಯಾಗಿದ್ದಾರೆ.

ಜಿಗಣಿ ಶಂಕರ್ ರವರು ನಂತರ ಕರ್ನಾಟಕ ರಿಪಬ್ಲಿಕ್ ಸೇನೆಯು ಸದಸ್ಯರ ಕೆಲವು ಧೋರಣೆಗಳಿಂದ ಬೇಸತ್ತು ಸಮಾನ ಮನಸ್ಕರು ಒಟ್ಟಾಗಿ ಸೇರಿ ಅವರ ಮಾರ್ಗದರ್ಶನದ ಆದಿಯಲ್ಲಿ ಸಾಗಲು ಕರ್ನಾಟಕ ರಿಪಬ್ಲಿಕನ್ ಸಂಘಟನೆಯನ್ನು ಪ್ರಾರಂಭವನ್ನು ಮಾಡಲಾಗಿತ್ತು ,ಸಂಘಟನೆಯು ಎರಡು ವರ್ಷಗಳು ಕಳೆದಿರುವ ಕಳೆದಿರುವ ಅಂಗವಾಗಿ ಎರಡನೆಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಮಾವೇಶವನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಮಾರ್ಚ್ 27 ರಂದು ಅರ್ಥ ಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ಬಗ್ಗೆ ಕೆಲವರು ಲಘುವಾಗಿ ಮಾತನಾಡುತ್ತಿದ್ದ,ಅವರಿಗೆ ನಮ್ಮ ಸಂಘಟನೆಯ ಬಗ್ಗೆ ಮಾಹಿತಿಯ ಕೊರತೆಯಿಂದ ಆ ರೀತಿಯ ಮಾತ ನಾಡುತ್ತಿದ್ದು ,ಅಂತಹ ಅವರಿಗೆ ನಮ್ಮ ಹೋರಾಟ ಮೂಲಕ ತಿರುಗೇಟು ನೀಡುವುದಾಗಿ ಮತ್ತು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಯನ್ನು ಬಲ ಪಡಿಸತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಂಟು ಆರ್ಟ್ಸ್ ರಾಮಚಂದ್ರ, ಜಿಲ್ಲಾಧ್ಯಕ್ಷ ಅಮರೇಶ್, ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಚಾನ್ ಪಾಷಾ , ಇಮ್ತಿಯಾಜ್, ಸಂಘಟನೆಯ ಸದಸ್ಯರಾದ ಮೂರ್ತಿ, ರಂಜಿತ್, ಪ್ರಜಾ ವಿಮೋಚನಾ ಚಳುವಳಿಯ ಜಿಲ್ಲಾಅಧ್ಯಕ್ಷ ಮಣಿ, ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code