ಕೋಲಾರನ್ಯೂಸ್

ಪಟ್ಟಣದಲ್ಲಿ ಆತ್ಮವಿಶ್ವಾಸ ವೇದಿಕೆ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಾಟೀಲ್ ರವರ ಜಯಂತಿ ಆಚರಣೆ

ಪಟ್ಟಣದಲ್ಲಿ ಆತ್ಮವಿಶ್ವಾಸ ವೇದಿಕೆ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಾಟೀಲ್ ರವರ ಜಯಂತಿ ಆಚರಣೆ

(KOLAR): ಪಟ್ಟಣದಲ್ಲಿ ಆತ್ಮವಿಶ್ವಾಸ ವೇದಿಕೆ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ವೇಳೆ ಆತ್ಮವಿಶ್ವಾಸ ವೇದಿಕೆಯ ರಾಜ್ಯ ಅಧ್ಯಕ್ಷ ಭಾರದ್ವಾಜ್ ಮಾತನಾಡಿ, ಅಕ್ಟೋಬರ್ 31 ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ. ಪ್ರತಿ ವರ್ಷ ಅವರ ಜನ್ಮದಿನವನ್ನು ದೇಶದಾದ್ಯಂತ ಬಹಳ ವಿಜೃಂಬಣೆಯಿಂದ ಆಚರಣೆ ಮಾಡಲಾಗುತ್ತದೆ. ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿ ಪಡೆದಿರುವ ವಲ್ಲಭಾಯಿ ಪಟೇಲ್‌ ಅವರು, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.



ಭಾರತದಾದ್ಯಂತ ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 148ನೇ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. ಎಂದು ತಿಳಿಸಿದರು. 1947ರ ಆಗಸ್ಟ್‌ 5ರಂದು ದಾಖಲೆಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಆದರೆ ದೇಶದಾದ್ಯಂತ ಹಬ್ಬಿದ್ದ ನೂರಾರು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವುದು ಸವಾಲೇ ಆಗಿತ್ತು. ಈ ಕೆಲಸವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ರೈತ ಚಳವಳಿಯ ರೂವಾರಿ, ಗೃಹಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸಮರ್ಥವಾಗಿ ಮಾಡಿದರು.



ಪ್ರೀತಿ ಬಳಸುವಲ್ಲಿ ಪ್ರೀತಿಯಿಂದ, ದಂಡಪ್ರಯೋಗ ಮಾಡಬೇಕಾದಲ್ಲಿ ಅದರಿಂದ ಕೆಲಸ ಸಾಧಿಸಿದರು, ಒಕ್ಕೂಟ ಭಾರತವನ್ನು ಕಟ್ಟಿದರು. ಇಂದು ಭಾರತವೊಂದು ಒಕ್ಕೂಟವಾಗಿ ಉಳಿದಿದ್ದರೆ ಅದು ಅವರಿಂದಲೇ ಎಂದರು. ಈ ಕಾರ್ಯಕ್ರಮದಲ್ಲಿ ಆತ್ಮವಿಶ್ವಾಸ ವೇದಿಕೆ ಹಾಗು ದಲಿತ ಶಕ್ತಿ ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಭಾವರಹಳ್ಳಿ ಮುನಿಯಪ್ಪ, ರಾಜು ಉಪಾಧ್ಯಕ್ಷರಾದ ಶ್ರೀನಿವಾಸ್, ತಾಲೂಕು ಮುಖಂಡರಾದ ವೆಂಕಟಪ್ಪ, ಮುನಿರತ್ನಂ, ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.

ವರದಿ ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code