News & Updatesಉಡುಪಿ

ಧರ್ಮದ ಹೆಸರಿನಲ್ಲಿ ನಡೆಯುತ್ತಿದೆಯೇ ಧಂಧೆ…!?

ಧರ್ಮದ ಹೆಸರಿನಲ್ಲಿ ನಡೆಯುತ್ತಿದೆಯೇ ಧಂಧೆ…!?


ಹೌದು ಪ್ರಪಂಚದಲ್ಲೇ ಮಾನವ ಕುಲಕ್ಕೀಗ ಆಘಾತ ತರುವಂತಹ‌ ಸುದ್ಧಿಗಳು ದಿನನಿತ್ಯ ಗಮನಿಸುತ್ತಲೇ ಇದ್ದೇವೆ…ಇಸ್ಲಾಮಿನ ಹೆಸರಿನಲ್ಲೊಂದು ವರ್ಗ ಭಯೋತ್ಪಾದನೆ ಸಂಘಟನೆಗಳನ್ನು ಹುಟ್ಟು ಹಾಕಿದರೆ, ಧರ್ಮ ರಕ್ಷಣೆ ಎಂಬ ಹೆಸರಿನಲ್ಲಿ ಮತ್ತೊಂದು ವರ್ಗ ಅಮಾಯಕರನ್ನು ಬಲಿಕೊಡುತ್ತಾ ತಮ್ಮ ಮನೆಯ ಬೇಳೆಯನ್ನು ಬೇಯಿಸಿಕೊಂಡು ಆರಾಮವಾಗಿ ಸಿರಿತನವನ್ನು ಅನುಭವಿಸುತ್ತಿದ್ದಾರೆ.‌‌..ಅದರಲ್ಲೊಂದು ಭಾಗವೇ ಈ ಚಿಂತಕಿ ಎಂಬ ಹೆಸರಿನಲ್ಲಿ ವೇದಿಕೆಗಳಲ್ಲಿ ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುತ್ತಿರುಚ ಚೈತ್ರಾ ಕುಂದಾಪುರ ಇದೀಗ ಉದ್ಯಮಿಗೆ ಬೈಂದೂರು ವಿಧಾನಸಭಾ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಏಳು ಕೋಟಿಗೂ ಅಧಿಕ ಹಣವನ್ನು ಧರ್ಮ ಹಾಗೂ ಸಂಘಟನೆಯ ಹೆಸರಿನಲ್ಲಿ ವಂಚಿಸಿದ್ದಾರೆ…ಈಕೆಯ ಮೋಸದಾಟಕ್ಕೆ ಬಲಿಯಾದ ಗೋವಿಂದಬಾಬು ಪೂಜಾರಿ ಎಂಬ ಉದ್ಯಮಿ ಹಾಗೂ ಟಿಕೆಟ್ ಆಕಾಂಕ್ಷಿ ಇದೀಗ ಪೋಲೀಸ್ ಠಾಣೆಯ ಮೆಟ್ಟಿಲೇರಿ FIR ದಾಖಲಿಸಿದ್ದಾರೆ…ಅಷ್ಟಕ್ಕೂ ಈ ಚೈತ್ರಾ ಕುಂದಾಪುರ ಯಾರೆಂದು ಕೇಳುತ್ತೀರಾ…? ಅಮಾಯಕ ಹೆಣ್ಣು ಮಕ್ಕಳನ್ನು ಹಾಗೂ ವಿದ್ಯಾರ್ಥಿಗಳನ್ನು ಅನ್ಯ ಧರ್ಮದ ವಿರುದ್ಧ ಎತ್ತಿ ಕಟ್ಟಿ ಗಣ್ಯ ಶ್ರೀಮಂತ ವ್ಯಕ್ತಿಗಳಿಂದ ಹಣ ಪಡೆದುಕೊಂಡು ಸಿಕ್ಕ ವೇದಿಕೆಗಳಲ್ಲೆಲ್ಲಾ ಅನ್ಯ ಧರ್ಮದ ವಿರುದ್ಧ ಅವಹೇಳನ ಹಾಗೂ ಧರ್ಮನಿಂದನೆಯನ್ನು ಮಾಡುತ್ತಾ ಇದನ್ನೇ ತನ್ನ ಕಾಯಕವನ್ನಾಗಿಸಿದ ಖತರ್ನಾಕ್ ವಂಚಕಿ…ರಸ್ತೆ ಬದಿಯಲ್ಲಿ ಕಬಾಬ್ ಮಾರುವ ಗೆಳೆಯರನ್ನು ಕರೆತಂದು ದಕ್ಷಿಣ ಭಾರತದ ಬಿಜೆಪಿಯ ಘಟಾನುಘಟಿ ನಾಯಕರೆಂದು ಈ ಉದ್ಯಮಿಗೆ ಪರಿಚಯಿಸಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಇದೀಗ ಕೋಟ್ಯಾಂತರ ರೂಪಾಯಿಗಳನ್ನು ಗೆಳೆಯರೊಂದಿಗೆ ಹಂಚಿಕೊಂಡು ಮಜಾ‌ ಮಾಡುತ್ತಿದ್ದಳು…ಟಿಕೆಟ್‌ನ ಬಗ್ಗೆ ಯಾವುದೇ ಸುಳಿವು‌‌ ಸಿಗದ ಹಿನ್ನೆಲೆ ಖುದ್ದಾಗಿ ತಾನೇ ಮಾಹಿತಿ ಕಲೆ ಹಾಕಿದಾಗ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಅಚ್ಚರಿ ಕಾದಿತ್ತು…ಕಬಾಬ್ ಮಾರುವವರನ್ನು ಸಲೂನ್‌ಗೆ ಕರೆದುಕೊಂಡು ಹೋಗಿ ಮೇಕಪ್ ಮಾಡಿಸಿ ಬಿಜೆಪಿ ನಾಯಕರೆಂದು ಪರಿಚಯಿಸಿದಾಗಿ‌‌ ಗೊತ್ತಾದ ಕ್ಷಣ ಒಮ್ಮೆಲೆ ಬೆಚ್ಚಿ ಬಿದ್ದಿದ್ದಾರೆ…ಕೊನೆಗೆ ವಾರಕ್ಕೂ ಹೆಚ್ಚಿನ ದಿನಗಳ ಕಾಲ ತಲೆಮರಿಸಿಕೊಂಡಿದ್ದ ಈಕೆ ಹಾಗೂ ಈಕೆಯ ಸಹಚರರು ಸಿಕ್ಕಿಬಿದ್ದರು…

ಈಕೆ ಇದ್ದ ಸ್ಥಳ ಯಾವುದೆಂದು ತಿಳಿದರೆ ತಾವೇ ಒಮ್ಮೆ ಅಚ್ಚರಿಪಡಬಹುದು…ಇನ್ನೆಲ್ಲೂ ಅಲ್ಲ…ಸದಾ ಮುಸಲ್ಮಾನರ ವಿರುದ್ಧ ಕಿಡಿಕಾರುವ ಈಕೆ ಸಿಕ್ಕಿ ಬಿದ್ದದ್ದು ಆಕೆಯ ಗೆಳತಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ವಕ್ತಾರೆಯಾಗಿರುವ ಸುರೈಯಾ ಅಂಜುಮ್‌ನ ಮನೆಯಲ್ಲಿ ಎಂಬುವುದೇ ಹಾಸ್ಯಾಸ್ಪದ… ಅಮಾಯಕ ಯುವಕರನ್ನು ಧರ್ಮ,ಸಂಘಟನೆ‌ ಎಂಬ ಅಮಲನ್ನು‌ ತಲೆಗೇರಿಸಿ ಈ ನಾಲಾಯಕರು ಮಾಡುತ್ತಿದ್ದದ್ದು ಮಾತ್ರ ಅವರೊಂದಿಗಿನ‌‌ ಗೆಳೆತನ…ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇವರ ರಾಜಕೀಯ ದಾಹಕ್ಕಾಗಿ ನಮ್ಮನ್ನಗಲಿದ ಅದೆಷ್ಟೋ ಬಡ ಅಮಾಯಕ ಜೀವಗಳನ್ನು ಕೊಂದು ಎಷ್ಟೊಂದು ಉತ್ತಮ ಜೀವನವನ್ನು ಸಾಗಿಸುತ್ತಾರೆಂಬುದೇ ಅಚ್ಚರಿಯ ವಿಷಯ…ಇದು ಕೇವಲ ಒಬ್ಬಳ ಕಥೆಯಲ್ಲ…ಇಂತಹ ಅದೆಷ್ಟೋ ನಾಯಕರೆಂದೆನಿಸಿಕೊಂಡವರ ಕಥೆಯು ಕೂಡಾ‌‌‌‌…ಚಿಂತಿಸುವವರಿಗೆ ದೃಷ್ಟಾಂತವಿದೆಯೆಂಬ ಮಾತು ಸುಳ್ಳಲ್ಲ…ಯಾರದ್ದೋ ರಾಜಕೀಯ ದಾಹಕ್ಕಾಗಿ ಸೌಹಾರ್ದಯುತವಾತ ಹಿಂದುಸ್ಥಾನದಲ್ಲಿ ಧರ್ಮ ಧರ್ಮಗಳ ಮಧ್ಯೆ ಗಲಭೆ ಎಬ್ಬಿಸಿ ಬೀದಿ ಹೆಣವಾದರೆ ಕೇಳುವವರಾರು? ನಷ್ಟ ಹೆತ್ತವರಿಗೆ ವಿನಃ ಈ ಪಾಪಿಗಳಿಗಲ್ಲ…ಭೂಮಿ ಫಲವತ್ತಾಗಿದೆಯೆಂದು ಹೆಣದಲ್ಲೂ ತಮ್ಮ ರಾಜಕೀಯದ ಬೇಳೆ ಬೇಯಿಸುತ್ತಾರೆ ಎಂಬುವುದು ಕಣ್ಣ ಮುಂದೆಯೇ ಕಂಡ ನಗ್ನ ಸತ್ಯಗಳು…ಮರೆಮಾಚಲು ಸಾಧ್ಯವಿಲ್ಲ…ಜೈ ಹಿಂದ್…

Leave a Reply

Your email address will not be published. Required fields are marked *

Scan the code