ಚಿಕ್ಕಮಗಳೂರುನ್ಯೂಸ್

ಕೋಣೆಮನೆ: ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ

ಕೋಣೆಮನೆ: ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ


(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದ ಕೋಣೆಮನೆಯ ಶ್ರೀ ಪರಿವಾರ ಸಮೇತ ಪಂಜುರ್ಲಿ ದೈವಗಳ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ಶನಿವಾರ, ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಪುಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಅಂಗವಾಗಿ ದೇವಾಲಯದಲ್ಲಿ ಶನಿವಾರ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಗಣಹೋಮ, ಬಿಂಬ ಶುದ್ಧಿ, ಜಲಾಧಿವಾಸ, ರಾಕ್ಷೆಯಘ್ನ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಅಧಿವಾಸ ಹೋಮ, ದಿಕ್ಬಲಿ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಿತು.


ಭಾನುವಾರ ದೈವಗಳ ಪ್ರತಿಷ್ಠಾಪನೆ, ಪೂಜಾ ಹೋಮ, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ದರ್ಶನ ಪಾತ್ರಿಯಿಂದ ದರ್ಶನ, ಹೇಳಿಕೆ ಕೇಳಿಕೆ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ಎಸ್.ಪಿ.ಶ್ರೀನಿವಾಸಮೂರ್ತಿ ಸಂಗಡಿಗರು ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
ಶಾಸಕ ಟಿ.ಡಿ.ರಾಜೇಗೌಡ, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ, ಪಂಜುರ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ.ಸಿ.ರಾಮಸ್ವಾಮಿ, ಗೌರವಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಸತೀಶ್, ಸದಸ್ಯರಾದ ಕೆ.ಸಿ.ಲಕ್ಷ್ಮಣ, ಚಂದ್ರಪ್ಪ, ರಾಘವೇಂದ್ರ, ವೆಂಕಟೇಶ್, ಶಿವರಾಜು, ಕೆ.ಎನ್.ಆದರ್ಶ, ಶೇಖರ, ಮಹೇಶ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code