ರಾಜರಾಜೇಶ್ವರಿ ದೇವಾಲಯಕ್ಕೆ ಹತ್ತು ವರ್ಷ ತುಂಬಿದ ಹಿನ್ನಲೆ ಚಂಡಿಕಾ ಹೋಮ, ಆಶ್ಲೇಷ ಪೂಜೆ.
(KOLARA): ಕೋಲಾರ: ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿರುವ ರಾಜರಾಜೇಶ್ವರಿ ದೇವಾಲಯ ನಿರ್ಮಾಣವಾಗಿ ಹತ್ತು ವರ್ಷ ತುಂಬಿದ ಹಿನ್ನೆಲೆ ದೇವಾಲಯದಲ್ಲಿ ಚಂಡಿಕ ಹೋಮ ಹಾಗೂ ಆಶ್ಲೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೇವಾಲಯದ ಮುಖ್ಯ ಅರ್ಚಕರಾದ ಮನೋಜಿ ರಾವ್ ನೇತೃತ್ವದಲ್ಲಿ ಚಂಡಿಕಾ ಹೋಮ, ಆಶ್ಲೇಷ ಪೂಜೆ ಕಾರ್ಯಕ್ರಮಗಳು ನೇರವೇರಿದವು. ಆರ್ಚಕರಾದ ಮನೋಜಿ ರಾವ್ ಮಾತನಾಡಿ ದೇವಾಲಯ ನಿರ್ಮಾಣ ವಾಗಿ ಹತ್ತು ವರ್ಷ ತುಂಬಿದ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವು ಅದ್ದೂರಿಯಾಗಿ ದೇವಿಯ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಕ್ಕಲೇರಿ ಗ್ರಾಮದ ಸಮಸ್ತ ಜನತೆ ಹಾಗೂ ದೇವಾಲಯದ ಭಕ್ತರ ನೆರವಿನಿಂದ ಚಂಡಿಕ ಹೋಮ, ಅಶ್ಲೇಷ ಪೂಜೆ ಸೇರಿದಂತೆ ರಾಜರಾಜೇಶ್ವರಿ ದೇವಿಗೆ ಮಹಾ ಮಂಗಳಾರತಿ ಪೂಜೆಗಳು ನಡೆಸಲಾಯಿತು.
ರಾಜ್ಯದಲ್ಲಿ ಬಹುತೇಕ ಕಡೆ ಬರಗಾಲ ವ್ಯಾಪಿಸಿದೆ. ಜಿಲ್ಲೆಯಲ್ಲಿ ಮಳೆ ಇಲ್ಲದೇ ಪ್ರಾಣಿಪಕ್ಷಿಗಳಿಗೆ ಸಂಕಷ್ಟ ಎದುರಾಗಿದೆ. ಮಳೆ ಇಲ್ಲದೆ ರೈತರು ಬೆಳೆ ಬೆಳೆಯಲು ಸಾಧ್ಯವಾಗದೇ ನಷ್ಟ ಅನುಭವಿಸುತ್ತಿದ್ದಾರೆ. ನಾಡು ಹಾಗು ಜಿಲ್ಲೆಯಲ್ಲಿ ಮಳೆ ಬೆಳೆಯಾಗಿ ರೈತರ ಜೀವನ ಸಮೃದ್ಧಿಯಾಗಲೆಂದು ಲೋಕಕಲ್ಯಾಣಕ್ಕಾಗಿ ಚಂಡಿಕ ಹೋಮ ನಡೆಸಲಾಗಿದೆ ಮತ್ತು ಸಂಜೇ ಶ್ರೀದೇವಿ ಭೂದೇವಿ ಸಮೇತ ಶ್ರೀನಿವಾಸ್ ಕಲ್ಯಾಣತ್ಸವ ನಡೆಯಲಿದೆ ಎಂದ್ರು. ನೂರಾರು ಮಹಿಳೆಯರು ಕಳಸ ಹೊತ್ತು ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ: ವಿಷ್ಣು ಕೋಲಾರ