ನ್ಯೂಸ್ಶಿವಮೊಗ್ಗ

ಪತ್ರಕರ್ತರಿಗೆ ಸುದ್ದಿಗೋಷ್ಠಿಗೆ ಕರೆದು ಮಾಯವಾದ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಪ್ಪ.

ಪತ್ರಕರ್ತರಿಗೆ ಸುದ್ದಿಗೋಷ್ಠಿಗೆ ಕರೆದು ಮಾಯವಾದ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಪ್ಪ.

(SHIVAMOGA): ಸಾಗರದ ಬ್ಲಾಕ್ ಕಾಂಗ್ರೆಸ್ ಪಕ್ಷದ ನೂತನ ಅದ್ಯಕ್ಷರಾಗಿ ಕಲಸೆ ಚಂದ್ರಪ್ಪ ಇತ್ತೀಚೆಗೆ ಅಷ್ಟೇ ನೇಮಕವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸುದ್ದಿ ಸಹ್ಯಾದ್ರಿ ಪತ್ರಿಕೆಯು ಕಲಸೆ ಚಂದ್ರಪ್ಪರವರನ್ನು ಮಾರ್ಚ್ 18 ರಂದು ಸಂದರ್ಶನ ನೀಡಿದ ನಂತರ ಮಾರ್ಚ್ 19 ಬೆಳಿಗ್ಗೆ 11 ಘಂಟೆಗೆ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿ ಗೋಷ್ಠಿ ಏರ್ಪಡಿಸಿದ್ದೆನೆ ಮಾದ್ಯಮ ಮಿತ್ರರು ಆಗಮಿಸಬೇಕೆಂದು ವಿನಂತಿಸಿದ್ದರು. ಈ ಹಿನ್ನಲೆಯಲ್ಲಿ ಸಾಗರದ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಎಲ್ಲಾ ಪತ್ರಕರ್ತರು 11 ಗಂಟೆಗೆ ಸರಿಯಾಗಿ ಕಾಂಗ್ರೆಸ್ ಕಛೇರಿಯಲ್ಲಿ ಹಾಜರಿದ್ದರು.

ಆದರೆ ಕಲಸೆ ಚಂದ್ರಪ್ಪರವರು ಸುದ್ದಿ ಗೋಷ್ಠಿ ಸ್ಥಳವನ್ನು ಬದಲಾಯಿಸಿದ್ದರು, ಕನಿಷ್ಠ ಪಕ್ಷ ಸುದ್ದಿಗೋಷ್ಠಿ ಸ್ಥಳವನ್ನು ಬದಲಾಯಿಸಿದ್ದೆವೆ ಎಂದು ಮಾಹಿತಿ ಕೊಡುವ ಕನಿಷ್ಠ ವ್ಯವದಾನ ನೂತನವಾಗಿ ನೇಮಕಗೊಂಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲಸೆ ಚಂದ್ರಪ್ಪ ಅವರಿಗೆ ಯಾಕೆ ಇಲ್ಲವಾಯಿತು. ಪತ್ರಕರ್ತರನ್ನು ಸುದ್ದಿ ಗೋಷ್ಠಿಗೆ ಆಹ್ವಾನಿಸಿ ಗೈರಾಗಿರುವುದು ಪತ್ರಕರ್ತರಿಗೆ ಮಾಡಿದ ಅವಮಾನ. ಅಧ್ಯಕ್ಷ ಸ್ಥಾನ ಸ್ವೀಕರಿಸಿದ  ಆರಂಭದಲ್ಲಿ ಈ ರೀತಿಯ ಬೇಜಾವಬ್ದಾರಿತನ ಮಾಡುತ್ತಾರೆ ಅಂದರೆ ಬ್ಲಾಕ್ ಕಾಂಗ್ರೆಸ್ ನಂತಹ ದೊಡ್ಡ ಹುದ್ದೆಯನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಆರಂಭದಲ್ಲಿ ಗೊತ್ತಾಗುತ್ತಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಮ್ಮ ತಪ್ಪನ್ನು ತಿದ್ದುಕೊಳ್ಳುತ್ತಾರೊ ಇಲ್ಲವೋ ಎನ್ನುವುದನ್ನು ಕಾದು ನೊಡಬೇಕಾಗಿದೆ.

ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code