ಚಿಕ್ಕಮಗಳೂರುನ್ಯೂಸ್

ನೀರಿನ ಬಾಟಲಿ ತುಂಬಿದ ಲಾರಿ: ಚಾರ್ಮುಡಿ ಘಾಟ್ ಪ್ರಪಾತಕ್ಕೆ ಉರುಳಿದೆ.

ನೀರಿನ ಬಾಟಲಿ ತುಂಬಿದ ಲಾರಿ: ಚಾರ್ಮುಡಿ ಘಾಟ್ ಪ್ರಪಾತಕ್ಕೆ ಉರುಳಿದೆ.


(ಮೂಡಿಗೆರೆ) ಚಾರ್ಮುಡಿ ಘಾಟ್ ನಲ್ಲಿ ಮಂಜು ಕವಿದ ವಾತಾವರಣ ಮಳೆ ಸುರಿಯುತ್ತಿದ್ದು ಸಂಚಾರಕ್ಕೆ ತಡೆಯಾಗಿದೆ. ಲಾರಿ ಚರ್ಮುಡಿ ಘಟ್ ರಸ್ತೆಯ ತಡೆ ಗೋಡೆಗೆ ಗುದ್ದಿ ಲಾರಿ ಪ್ರಪಾತಕ್ಕೆ ಬಿದ್ದಿದೆ ಲಾರಿ 100 ಅಡಿಗಳಷ್ಟು ಕೆಳಗೆ ಬೀಳುತ್ತಿದ್ದಂತೆ ಒಂದು ಮರಕ್ಕೆ ಸಿಲುಕಿದ್ದು
ಲಾರಿ ಚಾಲಕ ಮತ್ತು ಕ್ಲೀನರ್ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.


ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿ ತುಂಬಿಕೊಂಡು ಲಾರಿ ಹೊರಟಿತ್ತು. ಈ ಸಂದರ್ಭದಲ್ಲಿ ಲಾರಿಯು ಪ್ರಪಾತಕ್ಕೆ ಉರುಳಿದ್ದು ಸ್ಥಳೀಯರು ಚಾಲಕ ಮತ್ತು ಕ್ಲೀನರ್‌ ರಕ್ಷಣೆ ಮಾಡಿದ್ದಾರೆ. ಬಣಕಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

Scan the code