ಚಿಕ್ಕಮಗಳೂರು ಗಾಂಜಾ ಪ್ರಕರಣ : ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಗಾಂಜಾ ಸಾಗಾಟ ಓರ್ವ ವ್ಯಕ್ತಿಯ ಬಂಧನ….!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಕಸ್ಕೆಬೈಲು ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಗಾಂಜ ಸಾಗಿಸುತಿದ್ದು, ಒರ್ವ ಆರೋಪಿಯನ್ನು ಬಂದಿಸಲಾಗಿದೆ. ಹಾಗು ಬಂಧಿತ ಆರೋಪಿಯನ್ನು ಕೇರಳದ ಕಾಸರಗೋಡು ಮಹೇಶ್ವರ ತಾಲೂಕಿನ ಉಪ್ಪಳ ಮೂಲದ ಮುನೀರ್ (31) ಎಂದು ಗುರುತಿಸಲಾಗಿದೆ.
ಆರೋಪಿ ಮುನೀರ್ 51.2 ಕೆ ಜಿ ಗಾಂಜವನ್ನು ಸಾಗಿಸುತಿದ್ದ ಯೆಂಬ ಮಾಹಿತಿ ತಿಳಿದು ಬಂದಿದೆ.ಹಾಗು ಈತ ಗಾಂಜವನ್ನು ಮಹೇಶ್ವರಕ್ಕೆ ಸಾಗಿಸುತಿದ್ದ ವೇಳೆ ಮೂಡಿಗೆರೆ ತಾಲೂಕಿನ ಕಸ್ಕೆಬೈಲು ಚೆಕ್ ಪೋಸ್ಟ್ ಬಳಿ ಪೊಲೀಸರ ಕೈವಶವಾಗಿದ್ದಾನೆ. ಪೋಲಿಸರು ಗಾಂಜ ಹಾಗು ಒಂದು ಓಮಿನಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಗೋಣಿಬೀಡು ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ .