ಚಿಕ್ಕಮಗಳೂರುನ್ಯೂಸ್

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯವರಿಂದ ಜನ ಸಂಪರ್ಕ ಸಭೆಗೆ ಕರೆ.

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯವರಿಂದ ಜನ ಸಂಪರ್ಕ ಸಭೆಗೆ ಕರೆ.


(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ಶ್ರೀ ಕೆ.ಜೆ.ಜಾರ್ಜ್, ಮಾನ್ಯ ಇಂಧನ ಸಚಿವರು ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಇವರ ನೇತೃತ್ವದಲ್ಲಿ ಜಿಲ್ಲಾ ಜನ ಸಂಪರ್ಕ ಸಭೆಯನ್ನು ನರಸಿಂಹರಾಜಪುರದಲ್ಲಿ ದಿನಾಂಕ 2 -11- 2023 ಗುರುವಾರ ಬೆಳಿಗ್ಗೆ 10:00 ಗಂಟೆಗೆ ನರಸಿಂಹರಾಜಪುರ ಬಿ ಎಚ್ ಕೈಮರದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ನಮ್ಮ ಮಾನ್ಯ ಶಾಸಕರಾದ ಶ್ರೀ ಟಿ ಡಿ ರಾಜೇಗೌಡರು ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದು ಜಿಲ್ಲೆಯ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಇದೊಂದು ವೇದಿಕೆಯಾಗಲಿದೆ.
ಈ ಮಹತ್ವದ ಜಿಲ್ಲಾ ಜನ ಸಂಪರ್ಕ ಸಭೆಯಲ್ಲಿ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಬಾಳೆಹೊನ್ನುರು ಹೋಬಳಿಯ ಎಲ್ಲಾ ಸಾರ್ವಜನಿಕ ಬಂಧುಗಳು ಭಾಗವಹಿಸಬೇಕಾಗಿ ಎಂದು ಮಹಮದ್ ಹನೀಫ್ ಅಧ್ಯಕ್ಷರು ಬಾಳೆಹೊನ್ನೂರು ಹೋಬಳಿ ಕಾಂಗ್ರೆಸ್ ಇವರು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

Scan the code