ಕೋಲಾರನ್ಯೂಸ್

ಮಾದರಿ ಆಸ್ಪತ್ರೆಯ ನಿರ್ಲಕ್ಷತನಕ್ಕೆ ಮಗು ಮೃತ, ಪೋಷಕರ ಆಕ್ರಂದನ

ಮಾದರಿ ಆಸ್ಪತ್ರೆಯ ನಿರ್ಲಕ್ಷತನಕ್ಕೆ ಮಗು ಮೃತ, ಪೋಷಕರ ಆಕ್ರಂದನ

(KOLARA): ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬ ನಾನ್ನುಡಿ ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸೂಕ್ತವಾಗಿದೆ. ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಕೋಟ್ಯಾಂತರ ರೂಪಾಯಿ ಅನುದಾನವನ್ನು ತಂದು ಜಿಲ್ಲೆಯಲ್ಲಿ ಸುಸರ್ಜ್ಜಿತ ಮಾದರಿ ಆಸ್ಪತ್ರೆಯನ್ನಾಗಿ ಮಾಡಿ ಸಕಲ ಸೌಲಭ್ಯಗಳನ್ನು ಒದಗಿಸಿಕೊಟ್ಟರು. ವಿಪರ್ಯಾಸ ಸ್ಥಳೀಯ ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷತನದಿಂದಾಗಿ ಪದೇ ಪದೇ ಚಿಕಿತ್ಸೆಗೆಂದು ಬರುವ ರೋಗಿಗಳು ಮರಣ ಹೊಂದುತ್ತಿರುವುದು ಅವರ ಕರ್ತವ್ಯ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬಂಗಾರಪೇಟೆ: ತಾಲ್ಲೂಕಿನ ಚಿಕ್ಕವಲಗಮಾದಿ ಗ್ರಾಮದ ನಿವಾಸಿಯಾದ ಮುರಳಿ ಹಾಗೂ ಪೂಜಾ ರವರ ೯ತಿಂಗಳ ವೋಮಿಕ ಎಂಬ ಮಗುವನ್ನು ಲಸಿಕೆ ಕೊಡಿಸಲು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಲಸಿಕೆ ಪಡೆದು ಮನೆಗೆ ಹೋಗಿ ಹಾಲು ಕುಡಿಸಿ, ಮಲಗಿಸಲಾಗಿರುತ್ತದೆ. ಮಲಗಿದ ಮಗು ಮತ್ತೆ ಎಚ್ಚರಗೊಳ್ಳದ ಕಾರಣ ಭಯಭೀತರಾದ ತಾಯಿ ಪೂಜಾ ಅವರು ಖಾಸಗಿ ಓಸ್ವಾಲ್ ಆಸ್ಪತ್ರೆಗೆ ಮಗುವನ್ನು ಕರೆತಂದು ತೋರಿಸಲಾಗಿ ಅಲ್ಲಿನ ವೈದ್ಯರು ಮಗು ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಇದರಿಂದ ಕಂಗಾಲಾದ ಪೋಷಕರು ಸರ್ಕಾರಿ ಆಸ್ಪತ್ರೆಗೆ ಬಂದು ನಿಮ್ಮ ನಿರ್ಲಕ್ಷತನದಿಂದಾಗಿ ಮಗು ಮೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಚೌಡಪ್ಪ ಮಾತನಾಡಿ, ಆರೋಗ್ಯಕರವಾಗಿದ್ದ ಮಗುವಿಗೆ ವೈದ್ಯರು ಸಮರ್ಪಕವಾದ ಲಸಿಕೆ ನೀಡದ ಕಾರಣ ಮಗು ಕೇವಲ ಒಂದು ಗಂಟೆಯ ಅವಧಿಯೊಳಗೆ ಮೃತಪಟ್ಟಿರುವುದಾಗಿ ಸಂಶಯವ್ಯಕ್ತಪಡಿಸಿದರು. ಇದರೊಟ್ಟಿಗೆ ಅಧಿಕಾರಿಗಳನ್ನು ವಿಚಾರಿಸಲಾಗಿ, ನಮಗೆ ಈ ಘಟನೆಗೆ ಸಂಬoಧವಿಲ್ಲದoತೆ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಈ ಹಿಂದೆಯೂ ಸಹ ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕಾರಿಗಳ ನಿರ್ಲಕ್ಷತನಕ್ಕೆ ಹಲವು ಸಾವುಗಳು ಸಂಭವಿಸಿದ ಉದಾಹರಣೆಗಳಿವೆ. ಇಲ್ಲಿನ ಸಿಬ್ಬಂದಿಯ ವಿಚಾರದಲ್ಲಿ ಸಾರ್ವಜನಿಕರ ಅಸಮಧಾನವಿದೆ.

ಈ ಘಟನೆಗೆ ಸಂಬoಧಪಟ್ಟoತೆ ಡಿಎಚ್‌ಓ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದಾಗ “ನಾನು ಯಾವುದೋ ಸಭೆಯಲ್ಲಿರುವುದಾಗಿ ಸ್ಥಳಕ್ಕೆ ಬರಲು ಆಗುವುದಿಲ್ಲ. ಟಿಎಚ್‌ಓ ಅಥವಾ ಆರ್‌ಸಿಎಚ್ ಅವರನ್ನು ಸ್ಥಳಕ್ಕೆ ಕಳುಹಿಸುವುದಾಗಿ ಹಾರಿಕೆ ಉತ್ತರ ನೀಡಿದ್ದಾರೆ. ಎರಡು ಗಂಟೆಗಳು ಕಳೆದರೂ ಯಾವೊಬ್ಬ ಅಧಿಕಾರಿಯೂ ಸಹ ಸ್ಥಳಕ್ಕೆ ದಾವಿಸಿ, ಸಾಂತ್ವಾನ ಹೇಳಲು ಗೋಜಿಗೆ ಹೋಗಲಿಲ್ಲ.

ಆಸ್ಪತ್ರೆ ಸಿಬ್ಬಂದಿ ವಿರುದ್ದ ದೂರು ದಾಖಲು:
ವೈದ್ಯರು ಮತ್ತು ನರ್ಸ್ಗಳನ್ನು ಮೃತಪಟ್ಟ ಮಗುವಿನ ತಾತನವರು ವಿಚಾರಿಸಿದಾಗ ನರ್ಸ್ಗಳು “ನೀವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿ” ಎಂದು ಉದ್ದಟತನದ ಉತ್ತರ ನೀಡಿರುತ್ತಾರೆ. ಇವರ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನದಿಂದ ಏನು ಅರಿಯದ ಹಸುಗೂಸು ಮೃತಪಟ್ಟಿರುವುದು ಹೇಯಕೃತವಾಗಿದೆ. ಈ ಹಿನ್ನಲೆಯಲ್ಲಿ ಬಂಗಾರಪೇಟೆ ಪೊಲೀಸ್‌ಠಾಣೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ದ ದೂರು ದಾಖಲಿಸಿ ನ್ಯಾಯಾಂಗ ಹೋರಾಟ ನಡೆಸಲಾಗುವುದು, ಒಂದು ವೇಳೆ ನ್ಯಾಯ ಸಿಗದೇ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code