ಕಾಫಿ ನಾಡಿಗೂ ವಿಮಾನ ನಿಲ್ದಾಣ ಬರಲಿದೆ ಎಂದ: ಎಂ. ಆರ್. ರವಿ
( ಚಿಕ್ಕಮಗಳೂರ – ಸೆ – 10 ) ಚಿಕ್ಕಮಗಳೂರಿನಲ್ಲಿ ಕಿರು ವಿಮಾನ ನಿಲ್ದಾಣ ಮತ್ತು ಹೆಲಿಪೋರ್ಟ್ ಒಂದೇ ಜಾಗದಲ್ಲಿ ನಿರ್ಮಿಸಲಾಗುತ್ತದೆ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸುವ ಜಾಗ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ವಿಮಾನ ನಿಲ್ದಾಣಕ್ಕೆ 120 ಎಕರೆ ಜಾಗ ಮೀಸಲಿದ್ದು 19 ಎಕರೆ ಜಾಗ ಭೂಸ್ವಾಧೀನ ಆಗಬೇಕಾಗಿದೆ ಈ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ 15 ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ವಿಮಾನ ಇಳಿಯಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ( K.S.I.I.D.C ) ವ್ಯವಸ್ಥಾಪಕ ನಿರ್ದೇಶಕ ಎಂಆರ್ ರವಿ ತಿಳಿಸಿದರು. ಒಂದೇ ಜಾಗದಲ್ಲಿ ಹೆಲಿಪೋರ್ಟ್ ಕೂಡ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದರ. ಹೆಲಿಪೋರ್ಟ್ ನಿರ್ಮಾಣಕ್ಕೆ 5 ಎಕರೆ ಜಾಗ ಸಾಕಾಗಲಿದೆ ಕಿರು ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ್ದರೆ ವೆಚ್ಚ ಕಡಿಮೆಯಾಗಲಿದೆ ಪ್ರಯಾಣಿಕರಿಗೂ ಅನುಕೂಲ ಆಗಲಿದೆ ಎಂದು ಒಂದೆಡೆ ಇರುವ ಮೊದಲ ಜಿಲ್ಲೆ ಚಿಕ್ಕಮಗಳೂರು ಎಂಬ ಹೆಗ್ಗಳಿಕೆಯು ಬರಲಿದೆ ಎಂದರು
12 ಹಾಸನ ಸಾಮರ್ಥ್ಯದ ವಿಮಾನ
ಕಿರು ವಿಮಾನ ನಿಲ್ದಾಣದಲ್ಲಿ 12 ಆಸನ ಸಾಮರ್ಥ್ಯದ ಸಣ್ಣ ವಿಮಾನಗಳನ್ನು ಇಳಿಸಲು ಮಾತ್ರ ಸಾಧ್ಯವಾಗಲಿದೆ ಎಂದು ಎಂಆರ್ ರವಿ ತಿಳಿಸಿದರು ಜಾಗದಲ್ಲಿ 1200 ಮೀಟರ್ ಉದ್ದದ ರನ್ ವೇ ನಿರ್ಮಿಸಲಷ್ಟೇ ಸಾಧ್ಯ 20 ಆಸನ ಅಥವಾ ಅದಕ್ಕಿಂತ ದೊಡ್ಡ ವಿಮಾನ ಇಳಿಸಲು ಕನಿಷ್ಠ 400 ಎಕರೆ ಜಾಗಬೇಕು ಅದರಿಂದ 12 ಆಸನ ಸಾಮರ್ಥ್ಯದ ವಿಮಾನ ನಿಲ್ಲಿಸಲು ಸಾಧ್ಯವಾಗುವ ನಿರ್ಮಿಸಲಾಗುವುದು ಎಂದರ. ಮಾದರಿ ವೇಳಾಪಟ್ಟಿಯಂತೆ ವಿಮಾನಗಳು ಕಾರ್ಯಾಚರಣೆ ಮಾಡುವುದಿಲ್ಲ, 12 ಹಾಸನ ಸಾಮರ್ಥ್ಯದ ವಿಮಾನ ಇದ್ದವರು ಅಥವಾ ಬಾಡಿಗೆಗೆ ಪಡೆದವರು ವಿಮಾನ ನಿಲ್ಲಿಸಬಹುದು ವಿಮಾನ ಇಳಿಸಿ ನಿಲ್ಲಿಸಲು ಬಾಡಿಗೆ ನೀಡಬೇಕಾಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕೈಗಾರಿಕೆಗೆ ಅನುಕೂಲ ಆಗಲಿದೆ ಎಂದು ವಿವರಿಸಿದರು.