ಜಿಲ್ಲೆನ್ಯೂಸ್ಶಿವಮೊಗ್ಗ

ಗಣಪತಿಯನ್ನು ವಿಸರ್ಜಿಸಲು ಕೆರೆಗಳ ಸ್ವಚ್ಛತೆ ಕಾರ್ಯ

ಗಣಪತಿಯನ್ನು ವಿಸರ್ಜಿಸಲು ಕೆರೆಗಳ ಸ್ವಚ್ಛತೆ ಕಾರ್ಯ

(SHIVAMOGA): ಶಿವಮೊಗ್ಗ ಜಿಲ್ಲೆಯ ಆನಂದಪುರ ಸುತ್ತಮುತ್ತಲಿನಲ್ಲಿ ಬಹಳ ಅದ್ದೂರಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ. ಇದರ ಸಲುವಾಗಿ ಗಾಣಿಗನ ಕೆರೆಯಲ್ಲಿ ಗಣಪತಿಯನ್ನು ವಿಸರ್ಜಿಸುತ್ತಾರೆ. ಆದರೆ ಕೆರೆಯು ಬರಿ ಪೊದೆ ಗಳಿಂದ ಕೂಡಿದ್ದು ಗಣಪತಿ ವಿಸರ್ಜಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದ್ದನ್ನು  ನೋಡಿದ ಆನಂದಪುರದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೋಹನ್ ಕುಮಾರ್ ಅವರು ಗಣಪತಿ ವಿಸರ್ಜಿಸುವ ಸ್ವಲ್ಪ ಭಾಗವನ್ನು ತೆಪ್ಪ ಗಳಿಂದ ತೆರವುಗೊಳಿಸಿಸಲು ಸಹಕರಿಸಿದ್ದಾರೆ. ಇದರಿಂದ ಗಣಪತಿ ವಿಸರ್ಜಿಸಲು ಜನಸಾಮಾನ್ಯರಿಗೆ ಅನುಕೂಲವಾಗಿದೆ. ಹಾಗೆ ಗಣಪತಿಯನ್ನು ವಿಸರ್ಜಿಸಲು ಇನ್ನು ಹೆಚ್ಚಿನ ಅನುಕೂಲಕ್ಕಾಗಿ ಕೆರೆಯ ಪಕ್ಕದಲ್ಲಿ ವಿದ್ಯುತ್ ದೀಪಗಳ ಕಲ್ಪಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಆನಂದಪುರದ ಪೊಲೀಸ್ ಸಬ್ ಇನ್ಸ್ಪೆಕ್ಟರ್  ಯುವರಾಜ್ ಕಂಬಳಿ,  ನಾಗರಾಜ್, ಉಮೇಶ್ , ಚಂದ್ರಶೇಖರ್ ,ಮನೋಹರ ,ಉಮೇಶ್ ದಾಸಕೊಪ್ಪ ,ಮಂಜ , ಅಟ್ಸ್  ವಿಜಿ , ಸೂರಿ, ವಸಂತ , ವಿಜೇಂದ್ರ , ಗಜು ಮತ್ತಿತರು ಇದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code