ಮಧ್ಯಮುಕ್ತ ಗ್ರಾಮ ವಾಗಿಸಲು ಶಾಂತಿಯುತ ಹೋರಾಟ.
(VIJAYANAGARA): ಹಂಪಾಪಟ್ಟಣದಲ್ಲಿರುವ ಕರುಣ ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಹಂಪಾಪಟ್ಟಣ ಗ್ರಾಮಸ್ಥರು ಸೇರಿ ಪಂಚಾಯಿತಿ ಹಾಗೂ ಅಬಕಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಯಿತು.
ಹಂಪಾಪಟ್ಟಣ ಗ್ರಾಮದಲ್ಲಿ 4-5 ವರ್ಷದಿಂದ ಕರುಣ ಬಾರ್ (ಮದ್ಯದ ಅಂಗಡಿ) ಇದ್ದು, ಇದರಿಂದ ಹಲವಾರು ತೊಂದರೆಗಳಿದ್ದು ಅವುಗಳೆಂದರೆ, ಅಲ್ಲಿನ ಮದ್ಯವನ್ನು ಸೇವನೆ ಮಾಡಿ ಹಲವಾರು ಯುವಕರು, ಹಿರಿಯರು ಮನೆಯಲ್ಲಿ ಹೋಗಿ ಜಗಳ ಕಚ್ಚಾಟ, ಗುದ್ದಾಟ ಆಗಿ ಪೊಲೀಸ್ ಠಾಣೆಗೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಅವರು ತಂದು ಮಾರುವ ಮದ್ಯದ ದರ ಸರ್ಕಾರಿ ದರಕ್ಕಿಂತ ದುಪ್ಪಟ್ಟು ಇದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಲ್ಲದೆ ಅಲ್ಲಿನ ಮದ್ಯವು (ಸರಾಯಿ) ಕೂಡ ಎರಡನೇ ಕ್ವಾಲಿಟಿ (ಸೆಕೆಂಡ್ಸ್) ಮಾಲ್ ಎಂದು ಮಾಹಿತಿ ಇದೆ. ಅದನ್ನು ಸೇವಿಸಿದವರ ಆರೋಗ್ಯ ತುಂಬಾ ತೊಂದರೆಯಾಗಿ ಎಷ್ಟೋ ಸಾವು, ನೋವುಗಳು ಸಂಭವಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು ನೀವು ಸಾಧ್ಯವಾದರೆ ಅದನ್ನು ಪರೀಕ್ಷೆಗೆ ಒಳಪಡಿಸಬಹುದು. ಹಾಗೂ ಈ ಅಂಗಡಿಯ ಮಾಲೀಕರು ಬಾರ್ & ರೆಸ್ಟೋರೆಂಟ್ ಎಂದು ಹಾಕಿದ್ದಾರೆ. ಆದರೆ ಸಾರ್ವಜನಿಕರು ಮದ್ಯವನ್ನು ತೆಗೆದುಕೊಂಡು ಹೊರಗಡೆ ರೈತರು ಉಳುಮೆ ಮಾಡುವ ಹೊಲದಲ್ಲಿ ಮದ್ಯವನ್ನು ಸೇವನೆ ಮಾಡಿ, ಬಾಟಲಿ, ನೀರಿನ ಲೋಟ, ಪ್ಲಾಸ್ಟಿಕ್ ಕವರ್ಗಳು ಇನ್ನಿತರ ಹಲವಾರು ವಿಷಪೂರಿತ ತ್ಯಾಜ್ಯಗಳನ್ನು ಹಾಗೂ ಗಾಜುಗಳನ್ನು ಹೊಲದಲ್ಲಿ ಬಿಡುವುದರಿಂದ ರೈತರಿಗೆ ತೊಂದರೆಯಾಗಿದೆ. ಅಲ್ಲದೇ ಕರುಣ ಬಾರ್ ಗ್ರಾಮದ ಹೊರಗಡೆ ಹಾಕಿರುವ ಇವರು ಗ್ರಾಮದ ಒಳಗೆ ಮಾರುವ ಕಿರಾಣಿ ಅಂಗಡಿಗೆ ಹಾಗೂ ಸಣ್ಣ ಬೀಡಿ ಅಂಗಡಿಗಳಿಗೆ ಹೋಗಿ ಇವರೇ ಕೊಟ್ಟು ಬರುವುದರಿಂದ ಸಾರ್ವಜನಿಕರಿಗೆ ಮದ್ಯ ಸೇವಿಸಲು ಉತ್ತೇಜನ ಕೊಟ್ಟಂತೆ ಆಗುತ್ತದೆ. ಮದ್ಯವನ್ನು ಬಾರ್ನಲ್ಲಿ ಸೇವನೆ ಮಾಡಿದ ಯುವಕರು ಅಥವಾ ಸಾರ್ವಜನಿಕರು ಮದ್ಯದ ನಶೆಯಲ್ಲಿ ಅಲ್ಲಿಯೇ ಎಷ್ಟೋ ಬಾರಿ ಜಗಳ ಆಗಿವೆ. ಅಲ್ಲದೆ ಒಬ್ಬರಿಗೊಬ್ಬರು ಕಿತ್ತಾಡಿ ಅಲ್ಲಿ ಆದ ಕಿತ್ತಾಟದಿಂದ ಎಷ್ಟೋ ಸಂಸಾರಗಳು ತೊಂದರೆಗೆ ಈಡಾಗಿವೆ. ಈ ಹಿಂದೆ 8 ರಿಂದ 10 ತಿಂಗಳ ಹಿಂದೆ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಎಂಬ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಅವರು ಉಪಸ್ಥಿತಿಯಲ್ಲಿ ಮಾನ್ಯ ತಹಶೀಲ್ದಾರರು ನಮ್ಮ ಗ್ರಾಮಕ್ಕೆ ಬಂದಾಗ “ಬಾರ್ ಮುಕ್ತ ಗ್ರಾಮ ಹಂಪಾಪಟ್ಟಣ” ಮಾಡಲು ಮನವಿ ನೀಡಿತ್ತು. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಕೂಡ ಇದ್ದು, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಂಟ್ರ ಕುಬೇರ, ಟಿ ಕೊಟ್ರೇಶ್ ಗೋಮಾತಾ, ಖಾಜಾಸಾಬ್, ಕೊಟ್ರೇಶ್, ಸಿಗೆನಹಳ್ಳಿ ಬಸವರಾಜ್, ಸೋಮು ತಳವಾರ್ , ಕೆಎಸ್ ಹುಲುಗಪ್ಪ , ಮಧು , ಪ್ರವೀಣ್, ಎಚ್ ಹಾಲೇಶ್ , ಎಚ್ ಡಿ ತೀರ್ಥ ಪ್ರಸಾದ್, ಎಸ್ ರಮೇಶ್, ಗೋಂದಳ್ಳಿ ಪ್ರವೀಣ್ ಕುಮಾರ್, ಕೆ.ಟಿ ಮಂಜುನಾಥ್ , ಮಲ್ಲಿಕಾರ್ಜುನ, ಆಶಾ ಕಾರ್ಯಕರ್ತರು, ಭೂಮಿಕಾ, ಅನಿತಾ, ಶಿಲ್ಪ ಇತರರು ಇದ್ದರು.