ನವಂಬರ್ 10ರಂದು ಯರಗೋಳ ಡ್ಯಾಮ್ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಪಟ್ಟಣದಲ್ಲಿ ಶಾಸಕ ಎಸ್ಎನ್ ನಾರಾಯಣಸ್ವಾಮಿ
(KOLARA): ಬಂಗಾರಪೇಟೆ : ಕೋಲಾರ ಮತ್ತು ಬಂಗಾರಪೇಟೆ, ಮಾಲೂರು ತಾಲೂಕುಗಳಿಗೆ ಕುಡಿಯುವ ನೀರು ಕೊಡುವ ಮಹತ್ವದ ಯೋಜನೆಯದ ಎರಗೋಳ ಯೋಜನೆ, ಈ ಯೋಜನೆಯನ್ನು ನವಂಬರ್ 10ರಂದು ಲೋಕಾರ್ಪಣೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಯೋಜನೆಯ ಲೋಕಾರ್ಪಣೆಗೆ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹಮಂತ್ರಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಕೃಷ್ಣ ಬೈರೇಗೌಡ, ಹಾಗೂ ಈ ಜಿಲ್ಲೆಯ ಎಲ್ಲಾ ಶಾಸಕರು,ವಿಧಾನಪರಿಷತ್ ಸದಸ್ಯರು ಎಲ್ಲರೂ ಸಹ ಈ ಒಂದು ಉದ್ಘಾಟನೆ ಸಮಾರಂಭಕ್ಕೆ ಭಾಗವಹಿಸಲಿದ್ದಾರೆ.
ವಿಶೇಷವಾಗಿ ಸಿದ್ದರಾಮಯ್ಯನವರು ನವಂಬರ್ 10ರಂದು ಬೆಳಿಗ್ಗೆ 11 ಗಂಟೆಗೆ ಎರಗೋಳ್ ಯೋಜನೆಯನ್ನು ಉದ್ಘಾಟನೆ ಮಾಡಲು ಯರಗೋಳ ಡ್ಯಾಮ್ ಬಳಿನೆ ಬಂದು ಮಾಡಲಿದ್ದಾರೆ. ಹಿಂದೆ ಯಾರೂ ಸಹ ಆ ಸ್ಥಳದಲ್ಲೇ ಬಂದು ಉದ್ಘಾಟನೆ ಮಾಡಿರುವಂತಹ ಉದಾಹರಣೆಗಳು ಇಲ್ಲ, ಗೌರವಾನ್ವಿತ ಸಿದ್ದರಾಮಯ್ಯನವರು ಡ್ಯಾಮ್ ಬಳಿಯೇ ಬಂದು ಉದ್ಘಾಟನೆ ನೆರವೇರಿಸಿ ಅಲ್ಲೇ ಸಾರ್ವಜನಿಕ ಸಭೆಯನ್ನು ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಸುಮಾರು 25,000 ಜನ ತಾಲೂಕಿನಿಂದ ಸೇರಲಿದ್ದಾರೆ. ಇಂದು ಅದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡುವುದಕ್ಕೆ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ ಎಂದು ಹೇಳಿದರು. ಸಿದ್ದರಾಮಯ್ಯನವರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ನ ಎಲ್ಲಾ ಮುಖಂಡರು, ಜನಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮ ಪಂಚಾಯತಿಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಸಿದ್ದರಾಮಯ್ಯನವರು ನೀರು ಕೊಟ್ಟ ಮಹಾನುಭಾವ ಮೊದಲಿಗೆ ಕೆ ಸಿ ವ್ಯಾಲಿ ನೀರನ್ನು ನೀಡಿದರು ಈಗ ಕುಡಿಯುವುದಕ್ಕೆ ಎರಗೋಲ ನೀರನ್ನು ನೀಡುತ್ತಿದ್ದಾರೆ ಇದರಿಂದ ಎಲ್ಲಾ ಜಿಲ್ಲೆಯ ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ನೆಪದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿತ್ತು, ವಿದ್ಯುತ್ ಸರಬರಾಜು ಮಾಡಲು ಆಗುತ್ತಿಲ್ಲ ಅದಕ್ಕೆ ಕಾರಣ ಇಂದಿನ ಸರಕಾರ ವ್ಯವಸ್ಥೆ ತಾವಾಗಿ ಕಾರ್ಯನಿರ್ವಹಿಸದೆ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆಗಳನ್ನು ಮಾಡದೆ ಇರುವ ಕಾರಣ ಈ ರೀತಿ ಸಮಸ್ಯೆ ಆಗಿದೆ. ಹಾಗೂ ಅನೇಕ ಜಲಾಶಯಗಳಲ್ಲಿ ನೀರಿಲ್ಲದೆ, ಅನೇಕ ಭಾಗಗಳಲ್ಲಿ ಮಳೆ ಇಲ್ಲದೆ, ಉತ್ಪಾದನೆಯಲ್ಲೂ ಸಹ ಕುಂಠಿತವಾಗಿದೆ. ಆ ನಿಟ್ಟಿನಲ್ಲಿ ನಾವು ಸರಿಯಾಗಿ ವಿದ್ಯುತ್ ನೀಡಲು ಸಾಧ್ಯವಾಗಲಿಲ್ಲ, ಆದರೂ ಸಹ ಈಗ ಮಾನ್ಯ ಮುಖ್ಯಮಂತ್ರಿಗಳು ಇಂದಿನಿಂದ ರೈತರಿಗೆ ಮೂರು ಫೇಸ್ ನಲ್ಲಿ 5 ಗಂಟೆ ಕಾಲ ನಿರಂತರವಾಗಿ ವಿದ್ಯುತ್ ನೀಡುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ ದಯಮಾಡಿ ರೈತ ಬಾಂಧವರು ಈಗ ನೀಡುವಂತಹ 5 ಗಂಟೆಗಳ ಕಾಲ ವಿದ್ಯುತ್ ಅಲ್ಲಿ ಎಷ್ಟು ಬೆಳೆಗಳು ಬೆಳೆಯಲು ಸಾಧ್ಯವಾಗುತ್ತದೆ ಅಷ್ಟು ಮಾತ್ರ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇಂದಿನ ಸರ್ಕಾರ ಪಟ್ಟಣದ ಕೋದಂಡರಾಮಸ್ವಾಮಿ ದೇವಾಲಯ ನಿರ್ಮಾಣ ಮಾಡಲು ಬಂದಿದ್ದಂತಹ ಹಣವನ್ನು ವಾಪಸ್ ಪಡೆಯಲಾಗಿತ್ತು ಈಗ ಮುಜರಾಯಿ ಇಲಾಖೆಯಿಂದ ಮತ್ತೆ ಎಂಟು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಅತಿ ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ನಗರ ಬ್ಲಾಕ್ ಅಧ್ಯಕ್ಷ ಚಂದು, ಮುಖಂಡರಾದ ಚಿಕ್ಕ ವಲಗಮಾದಿ ಮುನಿರಾಜು, ಬೂದಿಕೋಟೆಯ ಬಾಬು, ಗೋಪಾಲರೆಡ್ಡಿ, ಗೋವಿಂದರಾಜು, ಶಮ್ಸುದ್ದೀನ್ ಬಾಬು, ಎಚ್ ಕೆ ನಾರಾಯಣಸ್ವಾಮಿ, ಮಹದೇವಪ್ಪ, ಸುಹೇಲ್, ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ