ಅರಳುವ ಪ್ರತಿಭೆಗೆ ಅರಿವಿನ ಆಸರೆ.
(SHIVAMOGA): ಕೆಳದಿಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರವಿಂದ ಟ್ರಸ್ಟ್ ನವರು ಅರಳುವ ಪ್ರತಿಭೆಗೆ ಅರಿವಿನ ಆಸರೆ ಎಂಬ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿದರು. ಹಾಗೆ 25 ಶಾಲೆಗಳಿಗೂ ಹೆಚ್ಚಿನ ರೀತಿಯಲ್ಲಿ ನೋಟು ಬುಕ್ಕುಗಳನ್ನು ವಿತರಣೆ ಮಾಡಿ ಯಾರು ಚೆನ್ನಾಗಿ ಓದುತ್ತಿರೋ ಅಂತವರಿಗೆ ನಮ್ಮ ಸಂಸ್ಥೆಯಿಂದ ಮುಂದಿನ ವರ್ಷ ಬಹುಮಾನ ವಿತರಣೆ ಮಾಡುತ್ತೇವೆ ಎಂದು ಮಕ್ಕಳನ್ನು ಉರಿದುಂಬಿಸಿ ಮಾತಾನಾಡಿ ನಾವುಗಳು ಸುಮಾರು 30 ಜನರ ತಂಡ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ನಮ್ಮ ಆದಾಯದಲ್ಲಿ ಶೆಕಡಾ 5% ರಷ್ಟು ಹಣವನ್ನು ಈ ಕೆಲಸಕ್ಕೆ ಮೀಸಲಿಟ್ಟಿದ್ದೇವೆ.
ಕಳೆದ ಮೂರು ವರ್ಷಗಳ ಕಾಲ ಈ ಕೆಲಸ ಮಾಡ್ತಾ ಇದ್ದು ನಾವು ರಕ್ತದಾನದ ಮೂಲಕ ಸೇವೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಮಾಡ್ತಾ ಇದಿವಿ ಎಂದರು ಶಾಲಾ ಆಡಳಿತ ಮಂಡಳಿಯ ಎಸ್ ಟಿ ಎಂ ಸಿ ಅಧ್ಯಕ್ಷರು ಹಾಗೂ ಮುಖ್ಯ ಉಪಾಧ್ಯಾಯರು ಹಾಗೂ ಪೋಷಕರು ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು ಇದೇ ಸಮಯಕ್ಕೆ ಕೆಳದಿ ಗ್ರಾಮ ಪಂಚಾಯಿತಿ ನೀರು ಗಂಟೆ ಉಮೇಶ್ ಅವರು ಆಗಮಿಸಿ ಪೋಷಕರಿಗೂ ಹಾಗೂ ಮಕ್ಕಳಿಗೂ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಹೇಳಿದರು ಹಾಗೂ ನಿಮ್ಮ ಊರಿನಲ್ಲಿ 25ಕ್ಕೂ ಹೆಚ್ಚು ಜನ ದೆಂಗುಪೀಡಿತರಿದ್ದಾರೆ ಆದಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಎಂದು ಮಕ್ಕಳಿಗೂ ಹಾಗೂ ಪೋಷಕರಿಗೂ ವಿವರಿಸಿ ಹೇಳಿದರು.
ವರದಿ: ಅಣ್ಣಪ್ಪ ಕೆಳದಿಪುರ