ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ
(KOLARA): ಬಂಗಾರಪೇಟೆ: ತಾಲ್ಲೂಕಿನ ಹುನುಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಮುತ್ತನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಅಮರಾವತಿ ನಗರ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಅಮರಾವತಿ ನಗರ ವಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾಕ್ಟರ್ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ 2023-24ನೇ ಸಾಲಿನ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವನ್ನು ಆನಂದ್ ರವರು ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆನಂದ್ ರವರು ಮಾತನಾಡಿ ಧಾರ್ಮಿಕವಾಗಿ ಹೇಳುವುದಾದರೆ ನಾವು ಮಾಡಿಕೊಂಡಿರುವ ಧಾರ್ಮಿಕ ಆಚರಣೆ ಅಲ್ಲ, ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ಮಾಡಿರುವ ಆಚರಣೆ, ದೇವಾನು ದೇವತೆಗಳು ಆಚರಣೆ ಮಾಡಿಕೊಂಡು ಬಂದಿರುವ ಆಚರಣೆ, ಅಲ್ಪ ಮತ್ತು ಪೂರ್ಣಾವಧಿ ಆಚರಣೆ ಹೇಗೆಂದರೆ ಬಹಳ ವರ್ಷಗಳ ಹಿಂದೆ ಶ್ರೀ ವರಮಹಾಲಕ್ಷ್ಮಿ ಪೂಜೆ ಸಣ್ಣ ಪ್ರಮಾಣದಲ್ಲಿ ಆಚರಣೆ ಮಾಡುತ್ತಿದ್ದರು ಈಗ ಪ್ರತಿಯೊಂದು ಮನೆಯಲ್ಲಿ ಸಹ ದೊಡ್ಡ ಪ್ರಮಾಣದಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡುವುದು ಸರ್ವೇಸಾಮಾನ್ಯ, ಕೆಲವರು ಶ್ರದ್ಧೆ ಭಕ್ತಿಯಿಂದ ಪೂಜೆ ಆಚರಣೆ ಮಾಡುತ್ತಾರೆ ಇನ್ನೂ ಕೆಲವರು ಕಾಟಾಚಾರಕ್ಕೆ ಆಡಂಬರಕ್ಕೆ ಜನರ ಮುಂದೆ ತೋರ್ಪಡಿಕೆಗೆ ಆಚರಣೆ ಮಾಡುತ್ತಾರೆ ಇವರಿಗೆ ದೇವರ ಭಕ್ತಿ ಬಗ್ಗೆ ಕಿಂಚಿತ್ತು ಕಾಳಜಿ ಇರುವುದಿಲ್ಲ, ದೇವರಿಗೆ ಜಾತಿ, ಭೇದ, ವರ್ಗಇಲ್ಲ ಪ್ರತಿಯೊಬ್ಬರೂ ಜಾತಿಗಳನ್ನು ನೋಡದೆ ದೇವರನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಬೇಕು ಆಗ ಮಾತ್ರ ದೇವರು ನಮಗೆ ಒಲಿಯುತ್ತಾರೆ ನಮ್ಮ ಕಷ್ಟಗಳು ದೂರವಾಗುತ್ತದೆ ಹಾಗೂ ನಮ್ಮ ಭಾರತ ದೇಶ ಬಿಟ್ಟು ವಿಶ್ವದ ಅನೇಕ ದೇಶಗಳಲ್ಲಿ ಸಹ ನಮ್ಮ ಧಾರ್ಮಿಕ ಸಂಪ್ರದಾಯವನ್ನು ಮನೆಗಳಲ್ಲಿ ಆಚರಣೆ ಮಾಡುತ್ತಾರೆ ಈ ಆಚರಣೆಯಲ್ಲಿ ಆನಂದವಿದೆ, ಸಂತೋಷವಿದೆ, ಪ್ರೀತಿ ಇದೆ ,ವಿಶ್ವಾಸವಿದೆ, ನಾವು ಪೂಜೆ ಮಾಡುವಾಗ ಭಕ್ತಿ ಶ್ರದ್ಧೆ ಇದ್ದು ಅರ್ಧತಾಸು ದೇವರ ಪೂಜೆಗಾಗಿ ಮೀಸಲಿಟ್ಟು ಪೂಜಿಸಬೇಕು, ನಾವು ನಮಗಾಗಿ, ನಮ್ಮ ಜೀವನಕ್ಕಾಗಿ, ನಮ್ಮ ಆರೋಗ್ಯಕ್ಕಾಗಿ, ನಮ್ಮ ಕುಟುಂಬದ ಶ್ರೇಯಸಿಗಾಗಿ, ದೇವರ ಜ್ಞಾನದಲ್ಲಿ ಮಗ್ನರಾಗಬೇಕು ಆಗ ಮಾತ್ರ ದೇವರ ಕೃಪೆ ಅನುಗ್ರಹ ಇದ್ದರೆ ನಮ್ಮ ವ್ಯಾಪಾರ, ವ್ಯವಸಾಯ, ಆರೋಗ್ಯ, ವಿದ್ಯಾಭ್ಯಾಸ, ಎಲ್ಲವೂ ಚೆನ್ನಾಗಿರುತ್ತದೆ, ಆದ್ದರಿಂದ ಪ್ರತಿಯೊಬ್ಬ ಮಹಿಳೆ, ಪುರುಷ, ಬೆಳಗ್ಗೆ ನಿದ್ರೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ ದೇವರ ಪೂಜೆ ಮಾಡಬೇಕು ಆಗ ಮಾತ್ರ ನಿಮಗೆ ಆರೋಗ್ಯ, ಐಶ್ವರ್ಯ, ಆಯುಷ್ ಎಲ್ಲವೂ ದೇವರ ಕೃಪೆ ಅನುಗ್ರಹದಿಂದ ನಿಮಗೆ ಲಭಿಸುತ್ತದೆ ನೀವು ತಪ್ಪದೇ ಧಾರ್ಮಿಕ ಆಚರಣೆ ಮಾಡಬೇಕೆಂದರು.
ಗ್ರಾಮಗಳ ಅಭಿವೃದ್ಧಿಗೆ ಸದಾ ನಮ್ಮ ಸಹಕಾರ: ಚೇತನ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಚೇತನ್ ರವರು ಮಾತನಾಡಿ,ಪರಮಪೂಜ್ಯ ಡಾಕ್ಟರ್ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತುಶ್ರೀ ಡಾಕ್ಟರ್ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಪ್ರತಿವರ್ಷ ಗ್ರಾಮಗಳಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ, ಗ್ರಾಮಗಳ ಅಭಿವೃದ್ಧಿ ಪರವಾಗಿ ನಿಮ್ಮ ಜೊತೆ ನಮ್ಮ ಧರ್ಮಸ್ಥಳ ಸಂಘವು ಸದಾ ಕೈ ಜೋಡಿಸಲಿದೆ ಅದೇ ರೀತಿ ನೀವು ಸಹ ನಮಗೆ ಸಹಕಾರ ಕೊಡಬೇಕು ಆಗ ಮಾತ್ರ ಗ್ರಾಮಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದರು ನಂತರ ಸಂಘದ ಮೇಲ್ವಿಚಾರಕರಾದ ಟಿ. ಎನ್.ಜನಾರ್ಧನ್ ಮಾತನಾಡಿ ಈ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಮಹಿಳೆಯರು ಎಲ್ಲರಿಗೂ ಧರ್ಮಸ್ಥಳದ ಸಂಘದ ವತಿಯಿಂದ ತುಂಬಾ ಧನ್ಯವಾದಗಳು ತಿಳಿಸಿದರು, ಈ ವೇಳೆಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಎಂ ಕೆ ಮಂಜುನಾಥ್, ರುಕ್ಮಿಣಿ ವೆಂಕಟೇಶ್, ಪದ್ಮ ರೆಡ್ಡಿಪ್ಪ, ಭಾಗ್ಯಮ್ಮ ಚಲಪತಿ, ಅನಿತಾ ಎಚ್ ಸಿ, ಮುನಿವೆಂಕಟಸ್ವಾಮಿ, ಧರ್ಮಸ್ಥಳ ಸಂಘದ ಜನಾರ್ದನ್ ಹಾಗೂ ಮೊದಲಾದವರು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ