ದತ್ತಮಾಲೆ, ದತ್ತ ಜಯಂತಿಗೆ ಅಗತ್ಯ ಸಿದ್ಧತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ.
(CHIKKAMAGALURU): ಚಿಕ್ಕಮಳೂರಿನ ದತ್ತ ಜಯಂತಿ ಆಚರಣೆ ವೇಳೆ ಹೆಚ್ಚಿನ ಭದ್ರತೆ ಕಲ್ಪಿಸುವ ಸಲುವಾಗಿ ಚಿಕ್ಕಮಗಳೂರು ಜಿಲ್ಲಾಅಧಿಕಾರಿ ಮೀನಾ ನಾಗರಾಜ ನಗರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ 2023ನೇ ಸಾಲಿನ ದತ್ತ ಮಾಲಾಬಿಯಾನ ಮತ್ತು ದತ್ತ ಜಯಂತಿ ಪೂರ್ವ ಸಿದ್ಧತೆಯ ಅಧ್ಯಕ್ಷತವಹಿಸಿದ ಅವರು ಪೊಲೀಸ್ ಇಲಾಖೆಯಿಂದ ಅಗತ್ಯ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು, ಲೋಕೋಪಯೋಗಿ ಇಲಾಖೆಯ ವತಿಯಿಂದ ಹಾಗೂ ಪಂಚಾಯತ್ ರಾಜ್ ಇಲಾಖೆ ವತಯಿಂದ ರಸ್ತೆಗಳು ದುರಸ್ಥಿ ಕಾರ್ಯ ಮಾಡಬೇಕು. ಅಲ್ಲಂಪುರ ಮತ್ತು ಕೈಮರಗಳಲ್ಲಿ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾಡಬೇಕು ಜವರಾಯಿ ಬಳಿ ಪೊಲೀಸ್ ಚೆಕ್ ಪೋಸ್ಟನ್ನು ನಿರ್ಮಿಸಬೇಕು. ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
2023ನೇ ಸಾಲಿನ ದತ್ತ ಜಯಂತಿಗೆ ಮತ್ತು ದತ್ತಮಾಲ ಅಭಿಯಾನವು ಶಾಂತಿಯುತವಾಗಿ ನಡೆಸುವಂತೆ ಹಾಗೂ ಯವುದೇ ಅಹಿತ ಕಾರ ಘಟನೆ ನಡೆದಂತೆ ಭದ್ರತೆ ಒದಗಿಸುವಂತೆ ಸೂಚನೆ ನೀಡಲಾಗಿದೆ.
ಕಳೆದ ವರ್ಷ ದತ್ತ ಜಯಂತಿಯ ಸಂದರ್ಭದಲ್ಲಿ ರಸ್ತೆಗಳಿಗೆ ಚೆಲ್ಲಿದ್ದ ಮೊಳೆಗಳನ್ನು ಹಾಗೂ ನಾನಾ ತರದ ಕೃತ್ಯಗಳನ್ನು ನಡೆಸಿದ ಕಿಡಿಗೇಡಿಗಳನ್ನು ಬಂಧಿಸಲಾಗಿತ್ತು ಅದೇ ತರ ಈ ಬಾರಿಯೂ ಯಾವುದೇ ರೀತಿಯಲ್ಲಿ ಘಟನೆಗಳು ಸಂಭವಿಸಿದಂತೆ ಪೊಲೀಸರಲ್ಲಿ ಎಚ್ಚರವಹಿಸಲಾಗಿದೆ.