ಜಿಲ್ಲೆನ್ಯೂಸ್

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ವಾಕ್ಯ ತಿರುಚಿದ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ವಾಕ್ಯ ತಿರುಚಿದ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ.

(RAYACHURAU): ರಾಯಚೂರು: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎನ್ನುವ ಕುವೆಂಪು ಅವರ ಅರ್ಥ ಪೂರ್ಣ ವಾಕ್ಯವನ್ನು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಆಧೀನದಲ್ಲಿ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದ ಸರಸ್ವತಿ, ಗಣಪತಿ ಮೊದಲಾದ ರೀತಿಯ ಧಾರ್ಮಿಕ ಪೂಜೆಗಳನ್ನ ಮಾಡುವುದನ್ನು ನಿಷೇಧ ಮಾಡಿ ಗೊಂದಲವನ್ನ ಸೃಷ್ಟಿ ಮಾಡಿತ್ತು. ಆ ಆದೇಶವನ್ನು ಹಿಂತೆಗೆದುಕೊಂಡಿದ್ದ ಸರ್ಕಾರ ಈಗ ಮತ್ತೆ ವಸತಿ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ವಾಕ್ಯ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎನ್ನುವ ಘೋಷಣೆಯನ್ನ ಬದಲಾವಣೆ ಮಾಡಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎನ್ನುವ ವಾಕ್ಯವನ್ನು ಹಾಕಿರುವ ಸರ್ಕಾರದ ನಡೆಯನ್ನು ಖಂಡಿಸಿದರು.


ಎಲ್ಲಾ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣಾದಾ ಯಕವಾಗಿರುವ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ವಾಕ್ಯಗಳನ್ನ ತಿರುಚಿ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಯಾವ ಸಂದೇಶವನ್ನ ಕೊಡಲು ಹೊರಟಿದೆ ಎಂಬುದು ರಾಜ್ಯದ ವಿದ್ಯಾರ್ಥಿ ಸಮುದಾಯದ ಪ್ರಶ್ನೆಯಾಗಿದೆ.
ವಿದ್ಯೆಯನ್ನು ಕಲಿಯಲು ಬರುವ ವಿದ್ಯಾರ್ಥಿ ಗಳಲ್ಲಿ ಇರಬೇಕಾದುದು ಶ್ರದ್ದೆ, ಜ್ಞಾನಕ್ಕೆ ಶರಣಾಗುವ ಗುಣ, ಇದು ಗುಲಾಮಿತನವಲ್ಲ, ವಿನಯ ಪ್ರಶ್ನಿಸುವ ಮನೋಭಾವನೆ ಹುಟ್ಟಬೇಕಾದುದು ಕಲಿಕೆ ಪೂರ್ಣಗೊಳ್ಳುವಾಗ, ಶಾಲೆಗೆ ಪ್ರವೇಶ ಪಡೆದಾಗಲೇ ಪ್ರಶ್ನಿಸುವುದು ಎಂದರೆ ಅಸಂಬದ್ಧ, ಗೊಂದಲಗಳನ್ನು ಹುಟ್ಟುಹಾಕುವುದೇ ಆಗಿದೆ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಿದ್ಧಾಂತದ ರಾಜಕಾರಣವನ್ನ ಸೇರ್ಪಡೆ ಮಾಡಲು ಹೊರಟಿರುವ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಮುದಾಯ ಶಿಕ್ಷಣ,ದೇಶ, ರಾಷ್ಟ್ರೀ ಯತೆ, ಭಾರತೀಯ ಸಂಸ್ಕಾರ, ಭಾರತೀಯ ರಾಷ್ಟ್ರ ಪುರುಷರ, ಈ ವಿಚಾರದಡಿಯಲ್ಲಿ ಮುಂದುವರೆಯಬೇಕೆ ಹೊರತು ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಹೊರಟಿರುವುದು ಶೋಚನೀಯ ಸಂಗತಿಯಾಗಿದೆ.


ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ವಿಚಾರದ, ಓಲೈಕೆಯ ಕೇಂದ್ರವಾಗಿಸಲು ಪ್ರಯತ್ನಿಸಿದರೆ ವಿದ್ಯಾರ್ಥಿ ವೃಂದ ತೀವ್ರವಾಗಿ ಪ್ರತಿಭತಟಿಸಲಿದೆ. ಕೂಡಲೇ ಸರ್ಕಾರ ಆದೇಶವನ್ನು ಹಿಂಪಡೆದು ಈ ಮೊದಲಿನ ವಾಕ್ಯವನ್ನೇ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಭೀಮೇಶ ಸಾಗರ, ಶಶಿವರ್ಧನ, ಪ್ರಶಾಂತ, ಗಣೇಶ, ಶಿವು ಕುಮಾರ್, ಮುಸ್ತಫಾ, ಗಂಗಾಧರ, ರಾಜೇಶ, ರವಿ ಕುಮಾರ್, ನವೀನ್, ಶಾಂತ ಕುಮಾರ್, ಪ್ರಸಾದ್, ಹುಲಿಗೆಮ್ಮ , ದಿವ್ಯಾ ಸೇರಿದಂತೆ ಅನೇಕರಿದ್ದರು.

ವರದಿ: ಶಂಕರ್ ರಾಯಚೂರು

Leave a Reply

Your email address will not be published. Required fields are marked *

Scan the code