ಸರ್ಕಾರದ ಧೋರಣೆಯನ್ನು ಖಂಡಿಸಿ ಫೆ :16ರಂದು ವಿಕಾಸಸೌಧ ಮುತ್ತಿಗೆ: ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ
(KOLARA): ಬಂಗಾರಪೇಟೆ: ಪಶು ವೈದ್ಯ ಇಲಾಖೆಯ ಕೋಟ್ಯಾಂತರ ರೂ ಹಗರಣಗಳ ಬಗ್ಗೆ ಸತತ ಎರಡು ವರ್ಷ ತಿಂಗಳಿoದ ಹೋರಾಟ ಮಾಡುತ್ತಿದ್ದರೂ ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳದ ಸರ್ಕಾರದ ಧೋರಣೆಯನ್ನು ಖಂಡಿಸಿ ಫೆ.16 ರಂದು ವಿಕಾಸಸೌಧ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಿಪಬ್ಲಿಕನ್ ಸೇನೆ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ ತಿಳಿಸಿದ್ದಾರೆ.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಪಶು ಪಾಲನೆ ಇಲಾಖೆಗೆ ಬಂದoತಹ ಕೋಟ್ಯಾಂತರ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಐಶಾರಾಮಿ ಜೀವನ ನಡೆಸುತ್ತಿರುವ ಅಧಿಕಾರಿಗಳಾದ ಸ್ನೇಹಪದ್ಮ, ವಕ್ಲೇರಿಯ ವಿಜಯ್ ಪಾಟೀಲ್, ಗಂಗಾ ತುಳಸಿರಾಮ್, ರವಿ, ಅನುರಾಧ, ವಾಣಿ, ಸುಭಾನ್, ಅಪ್ಬಲ್ಪಾಷ ಅವರುಗಳು ಭ್ರಹ್ಮಾಂಡ ಭ್ರಷ್ಠಾಚಾರ ನಡೆಸಿದ್ದು, ಇವರ ಹಗರಣಗಳಿಗೆ ಸಂಬoಧಪಟ್ಟ ದಾಖಲೆ, ಸಾಕ್ಷಿ ಪುರಾವೆಗಳೊಂದಿಗೆ ಜಿಲ್ಲಾಧಿಕಾರಿ ಅಕ್ರಂಪಾಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಹಾಗೂ ಸಂಬಂಧಪಟ ಇಲಾಖೆ ಯವರಿಗೆ ಹಲವು ಭಾರಿ ತನಿಖೆ ನಡೆಸಲು ಮನವಿಗಳು ಸಲ್ಲಿಸಿದರೂ, ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಇವರ ಮೌನವನ್ನು ಅವಲೋಕಿಸಿದರೆ, ಭ್ರಷ್ಠರ ಜೊತೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಉಂಟಾಗುತ್ತದೆ. ಆದಕಾರಣ ನ್ಯಾಯ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಿಪಬ್ಲಿಕನ್ಸೇನೆಯ ರಾಜ್ಯ ಉಪಾಧ್ಯಕ್ಷ ಬೆಳ್ತಂರು ವೆಂಕಟೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯ ಮೂಲಕ ವಿಕಾಸಸೌಧ ಮುತ್ತಿಗೆ ಹಾಕುತ್ತೇವೆಂದರು.
ಆದಾಯಕ್ಕಿಂತ ಹೆಚ್ಚು ಆಸ್ತಿ:
ಅಧಿಕಾರಿಗಳಾದ ಅನುರಾಧ ಮತ್ತು ವೀಣಾ ರವರ ಸಹಕಾರದೊಂದಿಗೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದು ಐಷರಾಮಿ ಬಂಗಲೆ, ವಾಹನಗಳನ್ನು ಹೊಂದಿರುತ್ತಾರೆ. ಇವರ ಆದಾಯದ ಮೂಲವೆಷ್ಟು ಎಂಬುದು ನಿಗೂಡವಾಗಿದೆ, ಇದರ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಚಿಂಟು ರಾಮಚಂದ್ರ, ಕೋಲಾರ ಜಿಲ್ಲಾಧ್ಯಕ್ಷ ಕಾರ್ಮಿಕ ಘಟಕದ ಶ್ರೀನಾಥ್, ಕಾರ್ಮಿಕ ಘಟಕದ ಕಾರ್ಯದರ್ಶಿ ಅಂಬರೀಶ್, ಜಿಲ್ಲಾ ಗೌರವಾಧ್ಯಕ್ಷ ಎ ಮಂಜುನಾಥ್ , ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ