ರೈಲು ಭೋಗಿಗಳನ್ನು ಕಡಿತಗೊಳಿಸಿರುವುದನ್ನು ಖಂಡಿಸಿ, ರೈಲ್ವೆ ಇಲಾಖೆಯ ವಿರುದ್ಧ ಪ್ರಯಾಣಿಕರು ರೈಲು ತಡೆದು ಪ್ರತಿಭಟನೆ.
(KOLARA): ಬಂಗಾರಪೇಟೆ : ಕೋಲಾರ ಜಿಲ್ಲೆ ಮೂಲತಹ ಬರಪೀಡಿತ ಪ್ರದೇಶವಾಗಿದ್ದು, ಪೂರ್ಣವಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿದೆ. ಹಾಗೂ ಕೆಜಿಎಫ್ ಮತ್ತು ಬಂಗಾರಪೇಟೆ ಕ್ಷೇತ್ರದಾದ್ಯಂತ ಯಾವುದೇ ಕೈಗಾರಿಕೆಗಳು ಇಲ್ಲದ ಕಾರಣ ಬಹುತೇಕರು ಅನ್ಯ ರಾಜ್ಯಗಳಿಗೆ ವಲಸೆ ಹೋಗಿರುವುದು ಕರಾಳ ಸತ್ಯವಾಗಿದೆ.
ಕೆಜಿಎಫ್ ಮತ್ತು ಬಂಗಾರಪೇಟೆ ಒಳಗೊಂಡಂತೆ ಸುತ್ತು ಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಯಾರ ನತದೃಷ್ಟ ಕಣ್ಣು ಕುಕ್ಕಿತು ತಿಳಿಯದಂತಾಗಿದ್ದು. ರೈಲ್ವೆ ಇಲಾಖೆ ಭೋಗಿಗಳನ್ನು ಕಡಿತಗೊಳಿಸಿದೆ.ಇದರ ಪರಿಣಾಮ ಪ್ರಯಾಣಿಕರು ನಿಗದಿತ ಸಮಯಕ್ಕೆ ಉದ್ಯೋಗಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈಲಿನಲ್ಲಿ ನಿಂತುಕೊಂಡು ಪ್ರಯಾಣ ಮಾಡಲು ಅಸಾಧ್ಯವಾಗಿದೆ ಇದರ ನಡುವೆ ಮಹಿಳೆಯರ ಪಾಡಂತೂ ಹೇಳುತಿರದು.ರೈಲಿನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು. ಪ್ರಯಾಣಿಕರು ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಪ್ರಯಾಣಿಕರು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಪ್ರಯಾಣಿಕರು ಇಂದು ಮುಂಜಾನೆ ರೈಲ್ವೆ ಇಲಾಖೆಯ ವಿರುದ್ಧ ರೈಲು ತಡೆದು ಪ್ರತಿಭಟನೆ ನಡೆಸಿ ಹೆಚ್ಚುವರಿ ಭೋಗಿಗಳನ್ನು ಹಾಕಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಪತ್ರ ನೀಡಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶದ ಪ್ರಯಾಗ್ ನಲ್ಲಿ ಕುಂಭಮೇಳ ನಡೆಯುತ್ತಿರುವ ಕಾರಣ ಕೇಂದ್ರ ರೈಲ್ವೆ ಇಲಾಖೆ ಹೆಚ್ಚುವರಿ ರೈಲುಗಳನ್ನು ಒದಗಿಸಿದ ಕಾರಣ ಬಂಗಾರಪೇಟೆ ಮತ್ತು ಕೆಜಿಎಫ್ ಭಾಗದಲ್ಲಿ ಸಂಚರಿಸುವ ರೈಲುಗಳ ಬೋಗಿಗಳನ್ನು ಕಡಿತಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಮತ್ತು ಈಗಿರುವ ಅಲ್ಪ ಬೋಗಿಗಳಿಗೆ ಹೊಂದಾಣಿಕೆಯಾಗದೆ. ಉದ್ಯೋಗಕ್ಕೆ ಹೋಗಲು ಸಾಧ್ಯವಾಗದೇ ಪರಾದಾಡುತ್ತಿದ್ದೇವೆ. ಈ ಕೂಡಲೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ಹೆಚ್ಚುವರಿ ಬೋಗಿಗಳನ್ನು ಹಾಕಬೇಕೆಂದು ಪ್ರಯಾಣಿಕ ಮಂಜುನಾಥ್ ಮನವಿ ಮಾಡಿದರು.
ಬಂಗಾರಪೇಟೆ ಮತ್ತು ಕೆಜಿಎಫ್ ಭಾಗದಲ್ಲಿ ಸಂಚರಿಸುವ ಮಾರಿಕುಪ್ಪಂ ರೈಲಿನ ಭೋಗಿಗಳನ್ನು ಕಡಿಮೆ ಮಾಡಿರುವುದರಿಂದ ಮಹಿಳೆಯರು ರೈಲಿನಲ್ಲಿ ಪ್ರಯಾಣಿಸಲು ಬಹಳ ಕಷ್ಟಕರವಾಗಿದೆ.ಎಲ್ಲಾ ಭೋಗಿಗಳಲ್ಲೂ ಸಹ ಪುರುಷರೆ ತುಂಬಿ ತುಳುಕುತ್ತಿದ್ದಾರೆ.ಮಹಿಳೆಯರು ಎಲ್ಲಿ ನಿಂತು ಪ್ರಯಾಣಿಸಬೇಕು ಎಂದು ಪ್ರಶ್ನೆ ಮಾಡಿದರು.ಪ್ರತಿನಿತ್ಯ ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಬೆಂಗಳೂರಿಗೆ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದಾರೆ.ಆದರೆ ರೈಲ್ವೆ ಇಲಾಖೆ ಏಕಾಏಕಿಯಾಗಿ ಭೋಗಿಗಳನ್ನು ಕಡಿತಗೊಳಿಸಿದೆ ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರಯಾಣಿಕರಾದ ಮಂಜುಳಾ ಆಕ್ರೋಶವನ್ನು ವ್ಯಕ್ತಪಡಿಸಿದರು.
ವರದಿ: ವಿಷ್ಣು ಕೋಲಾರ