Newsಕೋಲಾರ

ದೇಶದ ಪ್ರಗತಿಯಲ್ಲಿ ನೆಹರು ಕುಟುಂಬದ ಕೊಡುಗೆ ಅಪಾರ ಎಂದು ಆತ್ಮವಿಶ್ವಾಸ ವೇದಿಕೆಯ: ಎಂಎನ್ ಭಾರದ್ವಾಜ್

ದೇಶದ ಪ್ರಗತಿಯಲ್ಲಿ ನೆಹರು ಕುಟುಂಬದ ಕೊಡುಗೆ ಅಪಾರ ಎಂದು ಆತ್ಮವಿಶ್ವಾಸ ವೇದಿಕೆಯ: ಎಂಎನ್ ಭಾರದ್ವಾಜ್

(KOLARA): ಬಂಗಾರಪೇಟೆ: ದೇಶದ ಬಡತನ ನಿರ್ಮೂಲನೆ ಹಾಗೂ ಅರ್ಥಿಕ ಅಭಿವೃದ್ದಿಯಲ್ಲಿ ಮಾಜಿ ಪ್ರಧಾನಿ ಹಾಗೂ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಶ್ರಮ ಬಹಳಷ್ಟಿದ್ದು, ದೇಶದ ಪ್ರಗತಿಯಲ್ಲಿ ನೆಹರು ಕುಟುಂಬದ ಕೊಡುಗೆ ಅಪಾರ ಎಂದು ಆತ್ಮವಿಶ್ವಾಸ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂಎನ್ ಭಾರದ್ವಾಜ್ ಹೇಳಿದರು.

ಪಟ್ಟಣದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಎದುರು ಆತ್ಮವಿಶ್ವಾಸ ವೇದಿಕೆ ಹಾಗೂ ದಲಿತ ಶಕ್ತಿ ಸೇನೆ ವತಿಯಿಂದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,ಇಂದಿರಾ ಗಾಂಧಿ ದೇಶದ ಕಂಡ ಸಮರ್ಥ ಪ್ರಧಾನಿಗಳಲ್ಲಿ ಒಬ್ಬರು. ದೇಶವನ್ನು ಮುನ್ನಡೆಸುವ ಜೊತೆಗೆ ಇತರೆ ದೇಶಗಳೊಂದಿಗೆ ಉತ್ತಮ ಭಾಂಧವ್ಯ ಹೊಂದಿ, ಅಭಿವೃದ್ದಿಗೆ ಆದ್ಯತೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ದೇಶದ ಅಭಿವೃದ್ದಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿದ್ದರು ಎಂದು ಹೇಳಿದರು.

ಅವರು ಜಾರಿ ಮಾಡಿದ್ದ 20 ಅಂಶಗಳ ಕಾರ್ಯಕ್ರಮಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ಬಡತನ ನಿರ್ಮೂಲನೆಗಾಗಿ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿ, ಹಳ್ಳಿ ಹಳ್ಳಿಗಳಲ್ಲಿಯೂ ಪ್ರಚಲಿತದಲ್ಲಿದ್ದರು. ಅವರ ದಕ್ಷ ಆಡಳಿತ, ಪ್ರಾಮಾಣಿಕ ಸೇವೆ,ಬದ್ದತೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದರು.

ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಕೊಟ್ಟವರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಗಾಂಧಿ ಕುಟುಂಬಕ್ಕೆ ನಾವೆಲ್ಲರು ಋಣಿಗಳಾಗಿರೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೆಂಟಪ್ಪ,ಮುನಿರತ್ನಂ,ಮುನಿಯಪ್ಪ, ಶ್ರೀನಿವಾಸ್,ನಾಗರಾಜ್, ಹಾಗು ಇನ್ನು ಮುಂತಾದವರು ಭಾಗವಹಿಸಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code