ನಿಗಮ ಮಂಡಳಿಗಳಿ ಭೋವಿ ಸಮಾಜದ ಶಾಸಕರಿಗೆ, ಕಾರ್ಯಕರ್ತರಿಗೆ ಅನ್ಯಾಯ – ಈರಣ್ಣ ಸೀನನ್ನಾ ಪಲ್ಲೆ ಅಸಮಾಧಾನ
(RAYACHURU): ರಾಯಚೂರು : ಸದ್ಯ 2ನೇ ಪಟ್ಟಿಯಲ್ಲಿ ನಾನಾ ನಿಗಮ – ಮಂಡಳಿಗಳಿಗೆ 44 ಮಂದಿ ಅಧ್ಯಕ್ಷರ ನೇಮಕವನ್ನು ಸಿಎಂ ಸಿದ್ದರಾಮಯ್ಯ ಅನುಮೋದಿಸಿದ್ದಾರೆ.
ಈ ಮೊದಲು 34 ಶಾಸಕರಿಗೆ ಅಧ್ಯಕ್ಷ ಸ್ಥಾನದ ಜತೆಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಸ್ಥಾನ ನೀಡಲಾಗಿದೆ.
ಆದರೆ ಭೋವಿ ಸಮಾಜದ ಶಾಸಕರಿಗೆ, ಕಾರ್ಯಕರ್ತರಿಗೆ ಯಾವುದೇ ನಿಗಮ ಮಂಡಳಿಗಳಿಗೆ ಯಾರನ್ನು ನೇಮಕ ಮಾಡುವುದಿಲ್ಲ ಕಾಂಗ್ರೆಸ್ ಸರಕಾರ ಭೋವಿ ಸಮಾಜವನ್ನು ಕಡೆಗಣಿಸುತ್ತದೆ.
ನಿಗಮ-ಮಂಡಳಿಗಳಿಗೆ ನೇಮಕ ಪಟ್ಟಿಯಲ್ಲಿ ಭೋವಿ ಸಮಾಜದವರನ್ನು ಕೈಬಿಟ್ಟಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಭೋವಿ ವಡ್ಡರ್ ಯುವ ವೇದಿಕೆ ಜಿಲ್ಲಾ ಅಧ್ಯಕ್ಷರು ಈರಣ್ಣ ಸೀನನ್ನಾ ಪಲ್ಲೆ ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯಲ್ಲಿ ಕನಿಷ್ಠ ನಾಮನಿರ್ದೇಶನ ಸದಸ್ಯರುಗಳನ್ನಾಗಿ ಮಾಡಿಲ್ಲ. ಭೋವಿ ಸಮಾಜದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗ ರಾಯಚೂರು ಜಿಲ್ಲಾದ್ಯಕ್ಷರು ವಿ.ಎಸ್. ಯಲ್ಲಪ್ಪ ಮತ್ತು ಹನುಮಂತು ಜುಕೂರ್.ಗ್ರಾಮೀಣ ಭಾಗದಲ್ಲಿ ಶಶಿಕಲಾ ಭೀಮರಾಯ, ಅಂಜನಯ್ಯ ಗಣದಾಳ ಇನ್ನು ಅನೇಕರು ಕಾರ್ಯಕರ್ತರು ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದಾರೆ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಭೋವಿ ಸಮಾಜ ಜನರನ್ನು ಹಗಲು ರಾತ್ರಿ ಎನ್ನದೆ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವಂತ ಕಾರ್ಯಕರ್ತರಿಗೆ ಇದ್ದಾರೆ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ.ಸಾಮಾಜಿಕ, ಶಿಕ್ಷಣಕ್ಕವಾಗಿ ಹಾಗೂ ಆರ್ಥಿಕವಾಗಿ ಭೋವಿ ಸಮಾಜ ಹಿಂದುಳಿದಿದೆ.ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡವಲ್ಲಿ ವಿಳಂಬವಾಗುತ್ತಿದೆ. ಭೋವಿ ಅಭಿವೃದ್ಧಿ ನಿಗಮ ಮತ್ತಷ್ಟು ಸಂಕಷ್ಟದಲ್ಲಿ ಇದೆ. ಕೂಡಲೇ ಮುಖ್ಯಮಂತ್ರಿಗಳು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ವರದಿ: ಶಂಕರ್ ರಾಯಚೂರು