ಶಾಸಕ ಮುನಿರತ್ನ ಬಂಧಿಸಲು ದಲಿತ ಸಮಾಜ ಸೇನೆಯ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯ
(KOLARA): ಬಂಗಾರಪೇಟೆ: ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ದಲಿತರ ಸ್ವಾಭಿಮಾನವನ್ನು ಕೆಣಕಿರುವ ಬೆಂಗಳೂರಿನ ಶಾಸಕ ಮುನಿರತ್ನ ಅವರ ವಿರುದ್ದ ಕೂಡಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಮಾಜಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಶಾಸಕ ಮುನಿರತ್ನ ರವರು ತಾವು ಶಾಸಕರು ಎನ್ನುವುದನ್ನು ಮರೆತುದಲಿತರ ಬಗ್ಗೆ ಕೆಟ್ಟದಾಗಿ ಮಾತನಾಡಿ ದಲಿತ ವಿರೋಧಿತನ ಪ್ರದರ್ಶಿಸಿದ್ದಾರೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ತೀವ್ರವಾಗಿ ಖಂಡಿಸಿದರು.
ದೌರ್ಜನ್ಯ ಪ್ರಕರಣ ದಾಖಲಿಸಿ: ಶಾಸಕರು ಬಿಬಿಎಂಪಿಯಲ್ಲಿ ಗುತ್ತಿಗೆದಾರರ ಜೊತೆ ಮಾತನಾಡುವಾದದಲಿತರ ಬಗ್ಗೆ ಕೀಳಾಗಿ
ಮಾತನಾಡಿ ದಲಿತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಶಾಸಕರು ದಲಿತರನ್ನು ಕ್ಷಮೆ ಕೋರಬೇಕು ಮತ್ತು ಪೊಲೀಸರು ಸ್ವಯಂ ಪ್ರೇರಿತವಾಗಿಮುನಿರತ್ನವಿರುದ್ದ ಅಟ್ರಾಸಿಟಿ ಪ್ರಕರಣದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಶಾಸಕರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾದರೆ
ರಾಜ್ಯಾದ್ಯಂತ ಮುನಿರತ್ನ ವಿರುದ್ದ ದಲಿತರ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಶಾಸಕ ಮುನಿರತ್ನ ವಿರುದ್ದ ಘೋಷಣೆಗಳನ್ನು ಕೂಗಿ ಸ್ಥಳಿಯ ಪೊಲೀಸರ ಮೂಲಕ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ರಾಜ, ಅಯ್ಯಪ್ಪ, ಅರ್ಜುನ್, ನಾಗರಾಜ್, ಮುನಿ ಯಪ್ಪ, ಗೋವಿಂದ, ರವಿ, ಸುಭ್ರಮಣಿ ಇದ್ದರು.
ವರದಿ: ವಿಷ್ಣು ಕೋಲಾರ