LatestNews & Updatesಚಿಕ್ಕಮಗಳೂರು

ಗಣೇಶನ ಮೂರ್ತಿ ಪ್ರತಿಷ್ಠಪನೆ ಮಾಡಲು ಅನುಮತಿ ಪಡಯಬೇಕಾಗುತ್ತದೆ. (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ)

ಗಣೇಶನ ಮೂರ್ತಿ ಪ್ರತಿಷ್ಠಪನೆ ಮಾಡಲು ಅನುಮತಿ ಪಡಯಬೇಕಾಗುತ್ತದೆ. (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ)

ಚಿಕ್ಕಮಗಳೂರು: ದಿನಾಂಕ: 18.09.2023ರಂದು ನಡೆಯಲಿರುವ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅನುಮತಿಯನ್ನು ಪಡೆಯಬೇಕಾಗಿರುವುದು ಅವಶ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಏಕಗವಾಕ್ಷಿ ಸಮಿತಿಗಳನ್ನು / ತಂಡಗಳನ್ನು ರಚಿಸಲಾಗಿದೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಸಂಘಟಕರು/ಆಯೋಜಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ:08/09/2023 ರಿಂದ 15/09/2023ರವರೆಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನಿಗದಿತ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವುದು. ನಂತರ ಸ್ವೀಕೃತಗೊಂಡ ಅರ್ಜಿಯನ್ನು ಏಕಗವಾಕ್ಷಿ ಸಮಿತಿಯ ಮುಂದೆ ಮಂಡಿಸಿ 3 ದಿನದೊಳಗಾಗಿ ಅನುಮತಿ ನೀಡುವ ಬಗ್ಗೆ ಕ್ರಮವಹಿಸಲಾಗುವುದು ಎಂಬ ಅಂಶವನ್ನು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಿದೆ.

ಗಣೇಶ ಚತುರ್ಥಿ ಹಬ್ಬದ ಆಚರಣೆ ಸಂದರ್ಭದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಏಕಗವಾಕ್ಷಿ ಸಮಿತಿಗೆ ನಿಗದಿತ ನಮೂನೆಯಲ್ಲಿ ವೀರಬೇಕಾದ ಅರ್ಜಿ (ಅರ್ಜಿ ಸಲ್ಲಿಸುವ ಅವಧಿ 08.09.2023 ರಿಂದ 15,09,2023)

ಸಂಘಟಕರು ನೀಡಬೇಕಾದ ಮಾಹಿತಿ,

1. ಆಯೋಜಕರ ಹೆಸರು ಮತ್ತು ವಿಳಾಸ (ಆಧಾರ ಕಾರ್ಡ್ ನೊಂದಿಗೆ)

2. ಮೊಬೈಲ್ ಸಂಖ್ಯೆ

3. ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಿರುವ ಸಂಘಟನೆಯ ಹೆಸರು ಮತ್ತು ವಿಳಾಸ

4. ಈ ಸಂಘಟನೆಯಲ್ಲಿರುವ ಎಲ್ಲಾ ಸದಸ್ಯರುಗಳ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ (ಗುರುತಿನ ಚೀಟಿಯೊಂದಿಗೆ)

5. ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ದಿನಾಂಕ

6. ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳದ
ಹೆಸರು ಮತ್ತು ವಿಳಾಸ

7. ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವ ಸ್ಥಳ ಖಾಸಗಿ ಯಾಗಿದ್ದಲ್ಲಿ ಮಾಲೀಕರ ಒಪ್ಪಿಗೆ ಪತ್ರ ಮತ್ತು ಜಾಗಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು

8. ಪ್ರತಿಷ್ಠಾಪಿಸಲಾಗುವ ಗಣಪತಿ ಮೂರ್ತಿಯನ್ನು ಯಾವ ದಿನಾಂಕದವರೆಗೆ ಇಡಲಾಗುತ್ತದೆ.

9. ಪ್ರತಿ ದಿನವಾರು ನಡೆಯಲಿರುವ ಕಾರ್ಯಕ್ರಮ ಗಳ ವಿವರ

10 . ವಿಸರ್ಜನಾ ದಿನಾಂಕ

11. ವಿಸರ್ಜನಾ ದಿನದಂದು ಮೆರವಣಿಗೆ ಮಾರ್ಗದಿಂದ ವಿಸರ್ಜನಾ ಸ್ಥಳದವರೆಗೆ ರೂಟ್ ಮ್ಯಾಪ್ ತಯಾರಿಸುವುದು (ಉದಾ:- ಹೊರಡುವ ವೇಳೆ, ಮಾರ್ಗ ಮತ್ತು ಮೆರವಣಿಗೆಗೆ ಸೇರುವ ಜನಸಂಖ್ಯೆ ಇತ್ಯಾದಿ ಮಾಹಿತಿ ನೀಡುವುದು).

12. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿರುವ ಬಗ್ಗೆ ವಿವರಣೆ.

ಮೇಲೆ ವಿವರಿಸಿರುವ ಅಂಶಗಳು ಸತ್ಯವಾಗಿದ್ದು, ಪ್ರಸ್ತಾಪಿತ ಜಾಗದಲ್ಲಿ ಪ್ರತಿಷ್ಠಾಪಿಸಲಾಗುವ ಗೌರಿ-ಗಣೇಶ ಮೂರ್ತಿಗಳ ಪ್ರದೇಶದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗದಂತೆ ನಿಗಾವಹಿಸಿ ಸರ್ಕಾರವು ವಿಧಿಸುವ ಷರತ್ತುಗಳಿಗೆ ಒಪ್ಪಿರುತ್ತೇನೆ.

ಗೌರಿ-ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ತಮ್ಮಿಂದ ನಿಗದಿಪಡಿಸಲಾದ ಪ್ರದೇಶದಲ್ಲಿ ಪ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ಗಳನ್ನು ಅಳವಡಿಸಲು ಅನುಮತಿ ನೀಡಿದಲ್ಲಿ ಸದರಿ ಪ್ಲೆಕ್ಸ್ ಬ್ಯಾನರ್ಸ್ ಬಂಟಿಂಗ್ಸ್‌ ಗಳನ್ನು ಕಾರ್ಯಕ್ರಮ ಮುಗಿದ ನಂತರ ತೆರವುಗೊಳಿಸಲು ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ Single Use Plastic ಅನ್ನು ಬಳಸುವುದಿಲ್ಲವೆಂದು ನಾನು ಈ ಮೂಲಕ ಪ್ರಮಾಣೀಕರಿಸುತ್ತೇನೆ. ತಪ್ಪಿದಲ್ಲಿ ಸರ್ಕಾರವು ನನ್ನ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಕ್ರಮವನ್ನು ಜರುಗಿಸಲು ಬದ್ಧನಾಗಿರುತ್ತೇನೆ.

ಈ ಎಲ್ಲಾ ಮಾಹಿತಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣೆ ಅಧಿಕಾರಿಗಳ ಕಾರ್ಯಾಲಯ ಚಿಕ್ಕಮಗಳೂರು. ಆಯೋಜಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ:08/09/2023 ರಿಂದ 15/09/2023 ರವರೆಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನಿಗದಿತ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವುದು. ಮಾಹಿತಿಯನ್ನು ಕೊಟ್ಟು ಅನುಮತಿಯನ್ನು ಪಡೆಯಬೇಕಾಗಿದೆ ಎಂದು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Scan the code