ಕೋಲಾರನ್ಯೂಸ್

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಇಲ್ಲದೆ. ಸಾಲ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಇಲ್ಲದೆ. ಸಾಲ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ.

(KOLARA): ಬಂಗಾರಪೇಟೆ: ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಇಲ್ಲದೆ ಇರುವ ಕಾರಣ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಲ್ಲಿ ಯಾವುದೇ ಸಾಲ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಸಬಾ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣೇಗೌಡ ತಿಳಿಸಿದರು.

ತಾಲೂಕಿನ ಚಿನ್ನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಸ್.ಜಿ ಕೋಟೆ ಗ್ರಾಮದಲ್ಲಿ ಕಸಬಾ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಸಂಘದ ಮಹಿಳೆಯರಿಗೆ, ರೈತರಿಗೆ, ಸೀಮೆ ಹಸುಗಳ ಸಾಲ, ಕುರಿ ಸಾಲಗಳು, ಸಂಘದಿಂದ ಯಾವುದೇ ಸೌಲತ್ತುಗಳು ಕೊಡಲು ಆಗುತ್ತಿಲ್ಲ, ಡಿಸಿಸಿ ಬ್ಯಾಂಕ್ ನಲ್ಲಿ ದ್ವೇಷದ ರಾಜಕೀಯ ಮಾಡಿಕೊಂಡು ಬ್ಯಾಂಕ್ ಅನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಒಂದುವರೆ ವರ್ಷವಾಗಿದೆ ಇದುವರೆಗೂ ಆಡಳಿತ ಮಂಡಳಿಯ ಚುನಾವಣೆ ನಡೆಸಿಲ್ಲ, ಈಗಾಗಲೇ ಕೋರ್ಟ್ ಸಹ ಆದೇಶ ಮಾಡಿದ್ದರೂ ಸಹ ಕೋರ್ಟ್ ಆದೇಶವನ್ನು ಪಾಲಿಸದೆ ಇದ್ದಾರೆ. ಇದರಿಂದ ಮಹಿಳಾ ಸಂಘಗಳು ಬಲಿಪಶವಾಗಿದ್ದಾರೆ ದಯವಿಟ್ಟು ತಮ್ಮೆಲ್ಲರ ಪರವಾಗಿ ನಾನು ಕೇಳಿಕೊಳ್ಳುವುದೊಂದೇ ದ್ವೇಷ ರಾಜಕೀಯವನ್ನು ಬಿಟ್ಟು ಚುನಾವಣೆ ನಡೆಸಿ ಬ್ಯಾಂಕಿನ ಅಭಿವೃದ್ಧಿಗಾಗಿ ದುಡಿಯೋಣ ಎಂದು ಕಿವಿಮಾತು ಹೇಳಿದರು.

ಈಗಾಗಲೇ ಹೆಣ್ಣುಮಕ್ಕಳ ಶಾಪಗಳು ನಮಗೆ ತಟ್ಟುತ್ತಿದೆ, ಡಿಸಿಸಿ ಬ್ಯಾಂಕ್ ನ ಸಾಲದಿಂದ ಸುಮಾರು ಕುಟುಂಬಗಳು ಜೀವನ ಮಾಡುತ್ತಿದ್ದರು. ಈಗ ಯಾವುದೇ ಸಾಲ ಸೌಲಭ್ಯಗಳಿಲ್ಲದೆ ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ತೊಂದರೆಯಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಂಗಪ್ಪ, ನಿರ್ದೇಶಕರಾದ ಗುಂಡಪ್ಪ, ಗೋವಿಂದರಾಜು, ಚಂದ್ರಕುಮಾರ್, ನಾರಾಯಣಸ್ವಾಮಿ, ಗೋಪಾಲ ಗೌಡ, ವೆಂಕಟೇಶಪ್ಪ, ನಂದಗೋಪಾಲ್,ಗಿರಿಜಮ್ಮ,ಶಾರದಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code