ಗಣಪತಿ ತರಲು ಹೋಗುವಾಗ ಟಾಟಾ ಎಸ್ ಪಲ್ಟಿ ಇಬ್ಬರ ಯುವಕರ ಸಾವು
(CHIKKAMAGALURU): ಗಣಪತಿ ಮೂರ್ತಿಯನ್ನು ತರಲು ಹೋಗುವಾಗ ಟಾಟಾ ಎಸ್ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೈರಾಪುರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗಾಡಿ ಪಲ್ಟಿಯಾಗಿದೆ. ಟಾಟಾ ಎಸ್ ಬಿದ್ದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಆ ಗಾಡಿಯಲ್ಲೇ ಇದ್ದ ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೇಘನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲೇ ಮೃತಪಟ್ಟ ಯುವಕರು ಲಿಂಗದಹಳ್ಳಿ ನಿವಾಸಿಗಳಾದ ಧನುಷ್( 20) ಮತ್ತು ಶ್ರೀಧರ್ (20) ಎಂದು ಗುರುತಿಸಲಾಗಿದೆ ಭೈರಾಪುರ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ.