ಜಿಲ್ಲೆನ್ಯೂಸ್ಶಿವಮೊಗ್ಗ

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹ

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹ

(SHIVAMOGA): ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಸಾಗರದ ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಗರಅಂದ್ರ ರಾಜಶೇಖರ ರೆಡ್ಡಿ, ಜಗನ್ಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ನಡೆದಿರುವ ಎಲ್ಲ ವ್ಯವಹಾರಗಳ ತನಿಖೆ ನಡೆಸಬೇಕು. ಜತೆಯಲ್ಲಿ ಪವಿತ್ರ ಲಾಡು ಪ್ರಸಾದವನ್ನು ಅಪವಿತ್ರಗೊಳಿಸಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಾಗರ ಶಾಖೆಯಿಂದ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಚ್. ಸುದರ್ಶನ್, ಸನಾತನ ಧರ್ಮವನ್ನು ಹಾಳುಗೆಡವಲು ಸಾಕಷ್ಟು ಜನ ಹೇಳಿಕೆ ನೀಡುತ್ತಾ ಬಂದಿದ್ದು, ಅವರಿಗೆಲ್ಲ ಹಿಂದೂಗಳು ಸಮರ್ಥವಾಗಿ ಉತ್ತರಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ತಿರುಪತಿಯ ಬಾಲಾಜಿ ದೇವಸ್ಥಾನದಲ್ಲಿ ನೀಡುವ ಪವಿತ್ರ ಲಾಡು ಪ್ರಸಾದವನ್ನು ಮಲಿನ ಮಾಡಿ ಅದನ್ನು ಸೇವಿಸುವ ಹಿಂದೂಗಳ ಮನಸ್ಸನ್ನು ಹಾಳು ಮಾಡುವುದು, ಧಾರ್ಮಿಕ ಭಾವನೆ ಕುಗ್ಗಿಸುವುದು ಇದರ ಹಿಂದೆ ಅಡಗಿದೆ. ಲಾಡು ಪ್ರಸಾದದಲ್ಲಿ ದನದ ಕೊಬ್ಬು ಮೀನಿನ ಎಣ್ಣೆ ಬಳಸಿರುವುದು ದುಖದ ಸಂಗತಿ. ಸೆಕ್ಯುಲರ್ ದೇಶದಲ್ಲಿ ಯಾವುದೋ ಒಂದು ಧರ್ಮದವರಿಗೆ ತೊಂದರೆಯಾದರೆ ಬೊಬ್ಬೆ ಹಾಕುವ ಸೋಗಲಾಡಿ ಬುದ್ಧಿಜೀವಿಗಳು ಹಿಂದೂಗಳ ಧಾರ್ಮಿಕ ವಿಚಾರದಲ್ಲಿ ಮೌನವಾಗಿರುವುದು ಯಾಕೆ? ಹಿಂದೂಗಳು ತಮಗಾಗುವ ಎಲ್ಲ ತೊಂದರೆಯನ್ನೂ ಸಹಿಸಿಕೊಂಡಿದ್ದರೆ ಮಾತ್ರ ಸಮಾನತೆಯಾ? ಇಂಥ ಅಘಾತಕಾರಿ ಅಂಶಗಳಿದ್ದರೂ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ! ಈಗಲೂ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಮತ್ತಷ್ಟು ಘಟನೆಗಳು ನಡೆಯುತ್ತವೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಅಂಥವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕೆ.ವಿ.ಪ್ರವೀಣ್ ಮಾತನಾಡಿದರು. ರೇವತಿ, ಕೃಷ್ಣಮೂರ್ತಿ ವಾಮನಾಚಾರ್, ರಘುನಾಥ್, ಅರವಿಂದ ರಾಯ್ಕರ್, ಸೂರ್ಯನಾರಾಯಣ ಶೆಟ್ಟಿ, ಕನ್ನಪ್ಪ, ರಾಘವೇಂದ್ರ, ಗಣಪತಿ ಭಟ್, ಶ್ರೀನಿವಾಸ್ ಮೊದಲಾದವರು ಪಾಲ್ಗೊಂಡಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code