ಪದ್ದು ಮಹರಾಜ್ ವಿರುದ್ಧ ಜಾತಿ ನಿಂದನೆ ದೂರು ದಾಖಲು ಮಾಡಲು ಆಗ್ರಹ:
(KOLARA): ಬಂಗಾರಪೇಟೆ : ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ದಲಿತರ ಏಳ್ಗೆ ಸಹಿಸದ ಸವರ್ಣಿಯರಿಂದ ಅಸ್ಪೃಶ್ಯರ ಮೇಲಿನ ದೌರ್ಜನ್ಯ ಕಡಿಮೆಯಾಗಲಿಲ್ಲ, ಇತ್ತೀಚೆಗೆ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಸಂದೇಶ್ ರವರು ಪ್ರಸ್ಥುತ ಘಟನೆಗಳನ್ನು ಆಧರಿಸಿ ದಿ ರೂಲರ್ಸ್ ಎಂಬ ಚಿತ್ರದಲ್ಲಿ ನಟಿಸಿದರು ಇದರ ಯಶಸ್ಸು ಸಹಿಸದ ಪದ್ದು ಮಹಾರಾಜ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ದಲಿತ ಸಮುದಾಯವನ್ನು ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ, ಆದಕಾರಣ ಪದ್ದು ಮಹರಾಜ್ ವಿರುದ್ಧ ಜಾತಿ ನಿಂದನೆ ದೂರು ದಾಖಲು ಮಾಡಿಕೊಳ್ಳಬೇಕು ಹಾಗೂ ಗಡಿಪಾರು ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕುಪೇಂದ್ರ ಉಪ ತಹಶೀಲ್ದಾರ್ ರವರಿಗೆ ಮನವಿ ಮಾಡಿಕೊಂಡರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಪದ್ದು ಮಹರಾಜ್ ರವರ ವಿರುದ್ಧ ಜಾತಿ ನಿಂದನೆ ದೂರು ದಾಖಲು ಮಾಡುವಂತೆ ಆಗ್ರಹಿಸಿ ಮಾತನಾಡಿದ ಅವರು, ದಿನಾಂಕ 2/9/24 ರಂದು ಪದ್ದು ಮಹರಾಜ್ ಎಂಬ ವ್ಯಕ್ತಿ ಫೇಸ್ ಬುಕ್ ಖಾತೆಯಲ್ಲಿ ಲೈವ್ ಬಂದು ಸಂವಿಧಾನ ಶಿಲ್ಪಿ ಬಾಬ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಾಗೂ ಚಿತ್ರ ನಟ ಸಂದೇಶ್ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಮೂಲಕ ಅವಹೇಳನಕಾರಿಯಾಗಿ ಮಾತನಾಡಿರುತ್ತಾರೆ, ಮತ್ತು ಇವರ ವಿಡಿಯೋ ವೈರಲ್ ಆಗಿದ್ದು ಕೆಲವು ಕಿಡಿಗೇಡಿಗಳು ಬೆಂಬಲ ಸೂಚಿಸಿದ್ದಾರೆ, ಇಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಂತ ಜಾತಿವಾದಿ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ.
ದಲಿತರ ಪರವಾಗಿ ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರು ಅಧಿಕಾರಿಗಳು ನಿರ್ಲಕ್ಷ್ಯತನದಿಂದಾಗಿ ಅವು ನಿಷ್ಕ್ರಿಯವಾಗಿವೆ ಆದಕಾರಣ ಇಂತ ಜಾತಿವಾದಿ ವಿಕೃತ ಮನೋಭಾವದವರು ಬೆಳೆಯುತ್ತಿದ್ದಾರೆ ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಂದ್ರ ಕುಮಾರ್, ಕೆಸರಿನ ಹಳ್ಳಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್, ಅಂಬರೀಶ್, ಸಕ್ಕನಹಳ್ಳಿ ಶ್ರೀನಿವಾಸ್, ಮಾರುತಿ ಪ್ರಸಾದ್, ರಘು, ಶಂಕರ್, ಸೈಬರ್ ನಾಗರಾಜು, ಮುನಿರಾಜು ಇತರರಿದ್ದರು.
ವರದಿ: ವಿಷ್ಣು ಕೋಲಾರ