ಡೆಂಗ್ಯೂ ಜ್ವರ ಮಾರಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ
(KOLARA): ಬಂಗಾರಪೇಟೆ: ಜಿಲ್ಲೆಯಲ್ಲಿ ಉತ್ತಮ ಪುರಸಭೆ ಎಂದು ಹೆಸರು ಪಡೆದುಕೊಂಡಿರುವ ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಮಾರಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪುರಸಭೆಯ ನೂತನವಾಗಿ ಅಧ್ಯಕ್ಷರಾಗಿರುವ ಗೋವಿಂದ ಹಾಗೂ ಮುಖ್ಯ ಅಧಿಕಾರಿ ಸತ್ಯನಾರಾಯಣ ರವರು ಪಟ್ಟಣದ 27 ವಾರ್ಡ್ಗಳಲ್ಲಿ ಸಹ ಪ್ರತಿದಿನ ಒಂದೊಂದು ವಾರ್ಡ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಚತೆ ಮಾಡುತ್ತಿರುವುದು ಹಾಗೂ ಪಟ್ಟಣದ ಕಾರಹಳ್ಳಿ ವೃತ್ತದಲ್ಲಿ ಐ ಮಸ್ಟ್ ದೀಪ ಕೆಳಗೆ ಬಿದ್ದು ಹೊಡೆದು ಹೋಗಿತ್ತು ತಕ್ಷಣ ನೂತನ ಅಧ್ಯಕ್ಷರು ಮತ್ತು ಅಧಿಕಾರಿಗಳು ಮೂರು ದಿನಗಳಲ್ಲಿ ಸರಿಪಡಿಸಿದ್ದಾರೆ ಇದರಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಜ್ಯದ ಹಲವು ಕಡೆ ಡೆಂಗ್ಯೂ ಜ್ವರ ಕಾಡುತ್ತಿದೆ.ಇದರಿಂದ ಎಚ್ಚೆತ್ತು ಕೊಂಡಿರುವ ಪುರಸಭೆ ಕೊನೆಗೂ ಪ್ರತಿದಿನ ಒಂದೊಂದು ವಾರ್ಡ್ಗಳಲ್ಲಿ ಒಂದು ತಿಂಗಳು ಕಾಲ ಸ್ವಚ್ಛತಾ ಕಾರ್ಯಕ್ಕೆ ಪಟ್ಟಣದ ಶಾಂತಿನಗರದಿಂದ ನೂತನ ಅಧ್ಯಕ್ಷರಾದ ಗೋವಿಂದ ರವರ ನೇತೃತ್ವದಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ನಾಗರಿಕರಲ್ಲಿ ಅರಿವು ಮೂಡಿಸಿದರು.
ಈ ವೇಳೆ ಪುರಸಭೆಯ ಅಧ್ಯಕ್ಷ ಗೋವಿಂದ ಮಾತನಾಡಿ, ನಮ್ಮ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ವಾರ್ಡ್ ಗಳಲ್ಲಿ ಅನೈರ್ಮಲ್ಯದಿಂದ ಕೂಡಿದ ಚರಂಡಿಗಳನ್ನು ಸುಮಾರು ನೂರು ಜನ ಪೌರಕಾರ್ಮಿಕರನ್ನು ಕರೆಸಿ ಇಂದು ಸ್ವಚ್ಛತಾ ಕಾರ್ಯವನ್ನು ಮಾಡುತಿದ್ದೇವೆ ಇದೇ ರೀತಿ ಪ್ರತಿ ವಾರ್ಡ್ ನಲ್ಲಿ ಸಹ ಒಂದು ತಿಂಗಳ ಕಾಲ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ.ಎಲ್ಲೂ ನೀರು ನಿಲ್ಲದಂತೆ ಗಮನಹರಿಸಿಬೇಕು.ಮಾರುಕಟ್ಟೆ,ಬಸ್ನಿಲ್ದಾಣ ಪ್ರದೇಶದಲ್ಲಿರುವ ಅಂಗಡಿಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ತ್ಯಾಜ್ಯ ವಸ್ತುಗಳನ್ನು ಪುರಸಭೆಯ ಕಂಟೈನರ್ಗಳಲ್ಲಿ ಹಾಕಬೇಕು ಎಂದು ತಿಳಿಸಿದರು.
ಪುರಸಭೆ ಮುಖ್ಯ ಅಧಿಕಾರಿ ಸತ್ಯನಾರಾಯಣ ಮಾತನಾಡಿ, ಪಟ್ಟಣದ 27ವಾರ್ಡ್ಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಿದ್ದು ಎಲ್ಲ ಕಡೆ ಬ್ಲೀಚಿಂಗ್ ಹಾಕಿಸಿ ಸೊಳ್ಳೆಗಳು ಇನ್ನೀತರೆ ಬ್ಯಾಕ್ಟಿರಿಯಗಳನ್ನು ನಾಶಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ ಈಗ ಗಾಳಿ ಜಾಸ್ತಿ ಇರುವುದರಿಂದ ಪಾಗಿಂಗ್ ಮಾಡಲು ಆಗುತ್ತಿಲ್ಲ ಮುಂದಿನ ದಿನಗಳಲ್ಲಿ ಪಾಗಿಂಗ್ ಮಾಡಿಸಲಾಗುವುದು ಎಂದರು.
ಪುರಸಭೆ ಸದಸ್ಯ ಎಸ್.ವೆಂಕಟೇಶ್ ಮಾತನಾಡಿ, ಪುರಸಭೆಯ ಸದಸ್ಯರು ಎಲ್ಲರೂ ಸೇರಿ ಚರ್ಚೆ ನಡೆಸಿ ನೂತನ ಅಧ್ಯಕ್ಷರ ಸಲಹೆ ಮೇರೆಗೆ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಈ ರೀತಿ ಪ್ರತಿದಿನ ಒಂದು ವಾರ್ಡ್ನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಒಂದು ತಿಂಗಳ ಒಳಗೆ ಎಲ್ಲಾ ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲು ಮುಂದಾಗಿದ್ದಾರೆ. ಶಾಂತಿನಗರದ ವಾರ್ಡ್ನ ಪುರಸಭೆ ಸದಸ್ಯರಾದ ರತ್ನಮ್ಮ ತಿಮ್ಮಯ್ಯ ಅವರನ್ನು ಕರೆಸಿಕೊಂಡು ಮುಂಜಾನೆ ಎಂಟು ಗಂಟೆಯಿಂದ ಸ್ವಚ್ಛತಾ ಕಾರ್ಯವನ್ನು ಸಭೆಯ ಎಲ್ಲಾ ಅಧಿಕಾರಿಗಳು ಸೇರಿಕೊಂಡು ಪ್ರಾರಂಭಿಸಿದ್ದೇವೆ. ಯಾವುದೇ ವಾರ್ಡ್ನಲ್ಲಿ ಯಾವುದೇ ಸಮಸ್ಯೆ ಬರದಂತೆ ನಮ್ಮ ಮುಖ್ಯ ಅಧಿಕಾರಿ ಬಹಳ ಶ್ರಮವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಂತಿನಗರದ ಪುರಸಭೆ ಸದಸ್ಯರಾದ ರತ್ನಮ್ಮ ತಿಮ್ಮಯ್ಯ, ಮುಖಂಡರಾದ ಕಿಟ್ಟಣ್ಣ ಪುರಸಭೆ ಅಧಿಕಾರಿಗಳಾದ ಸಂತೋಷ್, ಗೋವಿಂದರಾಜು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೌರಕಾರ್ಮಿಕರು ಇದ್ದರು.
ವರದಿ: ವಿಷ್ಣು ಕೋಲಾರ