ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ್ – 2024
(SHIVAMOGA): ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಸುಮಾರು 5೦ ಸಾವಿರ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಈ ತಂತ್ರಾಂಶ ಆಧರಿಸಿ ಆಯುರ್ವೇದದ ಮಹತ್ವ, ವಿದ್ಯಾರ್ಥಿಗಳ ದೇಹ ಪ್ರಕೃತಿ ಪರೀಕ್ಷೆ, ಜೀವ ಪದ್ದತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ ಕೊಪ್ಪದ ಸಹಪ್ರಾಧ್ಯಾಪಕ ಡಾ. ಅಲೋಕನಾಥ್ ಹೇಳಿದರು.
ಇವರು ಸಾಗರದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್ಲಾ ಅಂಗಸಂಸ್ಥೆಗಳಿಗೆ ನಡೆದ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರದ ಆಯುಷ್ ಇಲಾಖೆ ನವೆಂಬರ್ 26 ಸಂವಿಧಾನ ದಿನಾಚರಣೆಯ ದಿನದಿಂದ ಮಾಜಿ ಪ್ರದಾನಿ ವಾಜಪೇಯಿ ಇವರ ಹುಟ್ಟುಹಬ್ಬದ ಡಿಸೆಂಬರ್ 25ರ ವರೆಗೆ ದೇಶಾದ್ಯಂತ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ್ ಪ್ರಾರಂಭಗೊಂಡಿದ್ದು ಇದರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅಭಿಯಾನದ ಕುರಿತು ಮಾಹಿತಿ, ಪ್ರಕೃತಿ ಪರೀಕ್ಷಾ ತಂತ್ರಾಂಶ ಉಪಯೋಗಿಸಿ ನಡೆಸಲಾಗುತ್ತಿದೆ ಎಂದರು.
ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್., ಎಂ.ಡಿ.ಎಫ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿಲ್ಪ ವಿ.ಎನ್., ಮತ್ತು ಸಂಸ್ಥೆಯ ಕೋಶಾಧ್ಯಕ್ಷರಾದ ಕವಲಕೋಡು ವೆಂಕಟೇಶ್ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ಮಹಾವಿದ್ಯಾಲಯ ಕೊಪ್ಪದ ಸಹಪ್ರಾಧ್ಯಾಪಕಿ ಡಾ. ರಕ್ಷಿತಾ ಮತ್ತು 26 ಜನ ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡು ಎಲ್ಲಾ ವಿದ್ಯಾರ್ಥಿಗಳ ತಪಾಸಣೆ ನಡೆಸಿದರು.
ವರದಿ: ಮಧು ರಾಮ್ ಸೊರಬ