ವೆಂಗ್ಯವಾಡಿದವರಿಗೆ ಅಭಿವೃದ್ಧಿ ಮೂಲಕ ತಕ್ಕ ಉತ್ತರ: ಶಾಸಕ ಎಸ್ ಎನ್ ನಾರಾಯಣಸ್ವಾಮಿ.
(KOLARA): ಬಂಗಾರಪೇಟೆ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆ ಮಾಡಿಕೊಂಡ ಕಾರಣ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವ್ಯಂಗ್ಯವಾಡಿದ ವಿರೋಧ ಪಕ್ಷದ ನಾಯಕರಿಗೆ ಸೆಡ್ಡು ಹೊಡೆದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ತಕ್ಕ ಉತ್ತರ ನೀಡುತ್ತೇನೆ ಎಂದು ಕೆಯುಐಡಿಎಫ್ಸಿ ಅಧ್ಯಕ್ಷ ಮತ್ತು ಶಾಸಕ ಎಸ್ ಎನ್ ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಕಾಮಸಮುದ್ರ ಹೋಬಳಿಯ ಜಾನುಗುಟ್ಟೆ ಗ್ರಾಮದ ಬಳಿ ಕೆ ಎಸ್ ಎಚ್ ಪಿ ಯೋಜನೆಯ ಅಡಿಯಲ್ಲಿ ಬಂಗಾರಪೇಟೆಯಿಂದ ಕಾಮಸಮುದ್ರ ಗ್ರಾಮದವರಿಗೆ 20 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಸಮುದ್ರ ಹೋಬಳಿಯ ವ್ಯಾಪ್ತಿಯ ಜನರು ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳನ್ನು ನೀಡದಿದ್ದರೂ ದ್ವೇಷ ರಾಜಕಾರಣ ಮಾಡುವುದಿಲ್ಲ ಪಕ್ಷ ,ಧರ್ಮ, ಜಾತಿ ,ಭೇದ -ಭಾವ ಮರೆತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಉಂಡ ಮನೆಗೆ ದ್ರೋಹ ಬಗೆದ ಗ್ರಾಮ ಪಂಚಾಯಿತಿ ಅಧ್ಯಕ್ಷ:
ನನ್ನ ಮತ್ತು ಕಾಂಗ್ರೆಸ್ ಪಕ್ಷದ ಕೃಪೆಯಿಂದ ಎರಡು ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದವರು ಕಳೆದ ಬಾರಿ ಮಲ್ಲೇಶ್ ಬಾಬು ಪರವಾಗಿ ಕೆಲಸ ಮಾಡಿ ಪಕ್ಷದ್ರೋಹ ಎಸಗಿದ್ದಾರೆ, ಹಾಗೂ ಪ್ರಸ್ತುತ ಈ ಕಾರ್ಯಕ್ರಮಕ್ಕೆ ಹೋಗದಂತೆ ಜನರಿಗೆ ತಾಕೀತು ಮಾಡಿದ್ದಾರೆ ನನ್ನನ್ನು ಎಷ್ಟೇ ತುಳಿಯಲು ಪ್ರಯತ್ನಿಸಿದರು ಜನರ ಆಶೀರ್ವಾದ ಮತ್ತು ವಿಶ್ವಾಸ ಇರುವವರೆಗೂ ಫೆನೆಕ್ಸ್ ನಂತೆ ಎದ್ದು ಬರುತ್ತೇನೆ, ನಿಮಗೇನಾದರೂ ಬದ್ಧತೆ ಇದ್ದರೆ ಸಂಸದ ಮಲ್ಲೇಶ್ ಬಾಬುರವರ ಅನುದಾನದಲ್ಲಿ 50 ಲಕ್ಷ ರೂಗಳ ಕಾಮಗಾರಿಗಳನ್ನು ಮಾಡಿಸಿ ನೊಡೋಣ ಎಂದು ಪರೋಕ್ಷವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಧಿನಾರಾಯಣ ಕುಟ್ಟಿರವರಿಗೆ ಸವಾಲ್ ಹಾಕಿದರು.
ಖರ್ಗೆ ತಂಟೆಗೆ ಬಂದರೆ ಎಚ್ಚರ:
ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ರವರಿಗೆ ರಾಜಕೀಯ ಭಿಕ್ಷೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ , ನಮ್ಮ ಪಕ್ಷದಲ್ಲಿದ್ದಾಗ ರಾಷ್ಟ್ರೀಯ ರೈಲ್ವೆ ಸಮಿತಿ ಸದಸ್ಯರನ್ನಾಗಿ, ಅರಣ್ಯ ಸಮಿತಿ ಸದಸ್ಯರನ್ನಾಗಿ ಅಧಿಕಾರವನ್ನು ಅನುಭವಿಸಿದ್ದರು, ಇಂದು ಬಿಜೆಪಿ ಪಕ್ಷದಲ್ಲಿ ಸೇರಿ ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ಹವಹೇಳನಕಾರಿ ಮಾತುಗಳನ್ನಾಡುತ್ತಿರುವುದು ಸಮಂಜಸವಲ್ಲ ತಾವು ಹೀಗೆ ಮುಂದುವರೆಸಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ನಾನೇ ನಿಮ್ಮ ವಿರುದ್ಧ ಮಾತನಾಡಿ ಬೇಕಾಗುತ್ತದೆ ಎಚ್ಚರ ಎಂದರು.
ವಿಜಯ ದಶಮಿಯಂದು ಬರಪೂರ ಅಭಿವೃದ್ಧಿಗೆ ಚಾಲನೆ:
ಲೆಕ್ಕ ತೀರ್ಷಿಕೆ 50 ಮತ್ತು 54 ರಲ್ಲಿ ಕಾಮಸಮುದ್ರದಿಂದ ಕೆ ಜಿ ಎಫ್ ರವರಿಗೆ ಡಾಂಬರು ರಸ್ತೆ ಚಿಕ್ಕ ಕಳವಂಚಿ ಗ್ರಾಮದಲ್ಲಿ 60ಲಕ್ಷ ಮತ್ತು ಕಾಳಮ್ಮ ಗುಡಿಯ ಬಳಿ45ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ಸಿ.ಸಿ.ರಸ್ತಿಗಳ ನಿರ್ಮಾಣಕ್ಕೆ ವಿಜಯದಶಮಿಯಂದು ಗುದ್ದಲಿ ಪೂಜೆ ನೆರವೇರಿಸಲಾಗುವುದು, ಹಾಗೂ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಹೈಮಾಸ್ ಲೈಟ್ ಒದಗಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಣ್ಣ, ಲಕ್ಷ್ಮಮ್ಮ ,ನಾಗಮಣಿ ಲಕ್ಷ್ಮಿನಾರಾಯಣ, ರಾಮ್ ಶೆಟ್ಟಿ, ಮುಖಂಡರಾದ ಕೆಟಿಅರ್ ರಂಘನಾಥ್ ನಾಯ್ಡು, ಪ್ರಭಾಕರ್ ರೆಡ್ಡಿ, ಮಹಾಲಕ್ಷ್ಮಿ, ಬೆಸ್ಕಾಂ ಅಧಿಕಾರಿ ಸುಕುಮಾರ್, ಪಿಡಬ್ಲ್ಯೂಡಿ ಅಭ್ಯಾಂತರ ರವಿ, ಪೊಲೀಸ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಸಬ್ ಇನ್ಸ್ಪೆಕ್ಟರ್ ಸುನೀಲ್, ಕಿರಣ್, ರಂಘಾಚಾರಿ ಇತರರಿದ್ದರು.
ವರದಿ: ವಿಷ್ಣು ಕೋಲಾರ