ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಗರ ಇವರ ವತಿಯಿಂದ 3 ಕೋಟಿ 27 ಲಕ್ಷ ರೂ ಗಳ ಲಾಭಾಂಶ ವಿತರಣೆ.
(SHIVAMOGA): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರತಿ ಸಂಘದ ಉಳಿತಾಯ ಹಣದಲ್ಲಿ ಅವರಿಗೆ ಲಾಭಾಂಶ ವಿತರಣೆಯನ್ನು ಮಾಡಲಾಯಿತು ಸರಿಸುಮಾರು 1738 ಸಂಘಕ್ಕೆ ಮೂರು ಕೋಟಿ 27 ಲಕ್ಷ ರೂಗಳ ಲಾಭಾಂಶ ವಿತರಣೆಯನ್ನು ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆಯ ನಿರ್ದೇಶಕರಾದ ಬಾಬು ನಾಯಕ್ ರವರು ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು. ಸಂಘದಿಂದ ಉಳಿತಾಯ ಮಾಡಿದ ಹಣವನ್ನು ಒಟ್ಟು ಗೊಡಿಸಿ ಅದರಲ್ಲಿ ಬರುವ ಲಾಭದ ಹಣವನ್ನು ನಾವು ಲಾಭಾಂಶ ರೂಪದಲ್ಲಿ ಸಂಘಕ್ಕೆ ನೀಡುತ್ತಿದ್ದೇವೆ ಪ್ರತಿ ಸಂಘದ ಸದಸ್ಯರಿಗೆ ಈಗ 5 ಲಕ್ಷಗಳ ವರೆಗೆ ಸಾಲವನ್ನು ನೀಡುತ್ತಾ ಬಂದಿದ್ದೇವೆ ಪ್ರತಿ ಸಂಘವೂ ಲಾಭಾಂಶ ಅತ್ಯಂತ ಹೆಚ್ಚಾಗಿ ಪಡೆಯಲು ಅವರು ಸಂಘದ ಕಾರ್ಯಕ್ಷಮತೆ. ಸಾಲ ಮರುಪಾವತಿ. ಸಂಘದಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಹೀಗೆ ಅನೇಕ ತರದ ಗ್ರೇಡ್ಗಳನ್ನ ನೀಡುವುದರ ಮೂಲಕ ಅವರಿಗೆ ಲಾಭಾಂಶ ವಿತರಣೆ ಅತ್ಯಂತ ಹೆಚ್ಚಾಗಿ ಆಗುತ್ತದೆ ಸಂಘದ ಕಾರ್ಯವೇನು ಎಂಬುದನ್ನು ಸಂಘದ ಸದಸ್ಯರಿಗೆ ಬಾಬು ನಾಯಕ್ ರವರು ಮನವರಿಕೆ ಮಾಡಿದರು ಪ್ರತಿ ಸಂಘಕ್ಕೆ 5 ಲಕ್ಷ ವರೆಗಿನ ಸಾಲವನ್ನು ನೀಡುತ್ತಿರುವುದು ನಮ್ಮ ಧರ್ಮಸ್ಥಳವಲ್ಲ ಅದು ಬ್ಯಾಂಕ್ ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆಯು ಅದರ ಕೆಲಸವನ್ನ ಮಾತ್ರ ನಿರ್ವಹಣೆ ಮಾಡುತ್ತಾ ಇದೆ ಹಾಗಾಗಿ ಹಣಕಾಸಿನ ಯಾವುದೇ ವಿಚಾರಕ್ಕೆ ಸಂಸ್ಥೆಯು ಮದ್ಯ ಪ್ರವೇಶಿಸುವುದಿಲ್ಲ ಎಂದರು ಬ್ಯಾಂಕಿನಿಂದ ಮಧ್ಯಸ್ಥಿಕೆಯನ್ನ ವಹಿಸಿ ನಿಮಗೆ ಸಾಲ ಕೊಡಿಸುವುದು ನಿಮ್ಮತ್ರ ಸಾಲವನ್ನ ಮರುಪಾವತಿಸಿ ಬ್ಯಾಂಕಿಗೆ ತುಂಬುವುದು ಇದಕ್ಕೆ ನೇರವಾಗಿ ನಿಮ್ಮೆಲ್ಲರ ಪರವಾಗಿ ಜಾಮೀನನ್ನು ಪೂಜ್ಯ ಖಾವಂದರು ಹಾಕಿರುತ್ತಾರೆ.
ಸಂಘದ ಪ್ರತಿಯೊಬ್ಬ ಸದಸ್ಯರು ತೆಗೆದುಕೊಂಡಿರುವ ಸಾಲವನ್ನು ಸದ್ಬಳಕೆ ಮಾಡ್ಕೋಬೇಕು ಸಾಲ ಮರುಪಾವತಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶಾಂತನಾಯ್ಕ, ಜಿಲ್ಲಾ ಜನಜಾಗೃತಿಯ ಸದಸ್ಯರಾಗಿರುವ ಕಸ್ತೂರಿ ಸಾಗರ್, ಪತ್ರಕರ್ತ ರಾಘವೇಂದ್ರ ತಾಳಗುಪ್ಪ, ಮೇಲ್ವಿಚಾರಕರು ನವೀನ್ ಕುಮಾರ್, ಸೇವಾಪ್ರತಿನಿಧಿ ಗಳಾದ ಲಲಿತಾ ಮತ್ತು ಗೋಪಿಕಾ ಮುಕ್ರಿ ಹಾಜರಿದ್ದರು.