ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅವಾಂತರ: ಡಿಪಿ ಹಳ್ಳಿ ಬಳಿ ದಲಿತ ರೈತ ಸೇನೆಯ ರಾಜ್ಯಾಧ್ಯಕ್ಷ ವೆಂಕಟೇಶ್ ಖಂಡನೆ
(KOLARA): ಬoಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿ ದೊಡ್ಡಪೊನ್ನಂಡಹಳ್ಳಿ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಕರ್ನಾಟಕ ದಲಿತ ರೈತಸೇನೆ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ನ.27ರಂದು ನಡೆದ ಘಟನೆಯನ್ನು ಕುಲಂಕುಶವಾಗಿ ತಿಳಿದುಕೊಂಡು ಮಾತನಾಡಿದರು.
ಕುಡಿಯುವ ನೀರಿನಲ್ಲಿ ವಿಷಕಾರಿ ಇಲಿ ಪಾಶಾಣವನ್ನು ಹಾಕಿರುವುದನ್ನು ತೀರ್ವವಾಗಿ ಖಂಡಿಸುತ್ತೇವೆ. ಕುಡಿಯುವ ನೀರಿನ ಫಿಲ್ಟರ್ನಲ್ಲಿ ಯಾರೋ ಇಲಿ ಪಾಶಾಣವನ್ನು ಹಾಕಿದ್ದು, ಇದನ್ನು ತಿಳಿಯದೇ ಮೂರು ವಿದ್ಯಾರ್ಥಿಗಳು ನೀರನ್ನು ಕುಡಿದ ಹಿನ್ನೆಲೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ ಎಂದರು.
ಆದರೆ ನೆನ್ನೆ ನಡೆದಂತಹ ಘಟನೆಗೆ ಕಾಮಸಮುದ್ರ ಪೊಲೀಸ್ ಉಪ ನಿರೀಕ್ಷಕರು ಹಾಗೂ ವೃತ್ತ ನಿರೀಕ್ಷಕರ ಸಮಯ ಪ್ರಜ್ಞೆಯಿಂದ ಮತ್ತು ಅಹಿತಕರ ಘಟನೆ ನಡೆಯದಂತೆ ಕಾನೂನಿನ ಚೌಕಟ್ಟಿನಲ್ಲಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ, ಅಲ್ಲಿನ ವಿದ್ಯಾರ್ಥಿಯೇ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿರುತ್ತದೆ. ಆದರೆ ಈ ವಿದ್ಯಾರ್ಥಿಗೆ ಇಲಿ ಪಾಶಾಣವನ್ನು ನೀಡಿದರ್ಯಾರು?, ಇವನಿಗೆ ನೀರಿನಲ್ಲಿ ಹಾಕಲು ತಿಳಿಸಿದರ್ಯಾರು? ಎಂಬುದು ನಿಗೂಡವಾಗಿದ್ದು, ಪೊಲೀಸರು ಇನ್ನು ಹೆಚ್ಚಿನ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು, ಹಾಗೂ ತೋಟಪ್ಪ, ವೆಂಕಟರಾಮಪ್ಪ, ನರೇಂದ್ರ ಬಾಬು ರವರನ್ನು ಈ ಕೂಡಲೇ ಅಮಾನತ್ತು ಮಾಡಿ ಹೆಚ್ಚಿನ ವಿಚಾರಣೆಗೊಳಪಡಿಸಿ
ಈ ವಸತಿ ನಿಲಯಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿ, ಇನ್ನುಂದೆ ಈ ರೀತಿಯಾಗದಂತೆ ಸೂಕ್ತ ವಹಿಸಲು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ವಸತಿ ಶಾಲೆ ಮುಂಭಾಗದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಹುಳದೇನಹಳ್ಳಿ ವೆಂಕಟೇಶ್, ರಾಜ್ಯ ಸಮಿತಿ ಸದಸ್ಯ ಸೇಟ್ ಕಾಂಪೌoಡ್ ಮಾರಿ, ತಾಲ್ಲೂಕು ಅಧ್ಯಕ್ಷ ಹಿರೇಕರಪನಹಳ್ಳಿ ಮುನಿರಾಜು, ಇದರು.
ವರದಿ: ವಿಷ್ಣು ಕೋಲಾರ