ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯಲ್ಲಿ ಉಚಿತ ಕನ್ನಡಕ ವಿತರಣೆ
(KOLARA): ಕೋಲಾರ : ನಗರದ ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ಟೈಟನ್ ಕಂಪನಿಯ ಸಹಯೋಗದಲ್ಲಿ ನನ್ನ ಕಣ್ಣು ಯೋಜನೆಯಡಿಯಲ್ಲಿ ಗುರುವಾರ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ಟೈಟನ್ ಕಂಪನಿ ಸಹಯೋಗದಲ್ಲಿ ನನ್ನ ಕಣ್ಣು ಯೋಜನೆಯಡಿಯಲ್ಲಿ ಕೋಲಾರ ನಗರದ ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯಲ್ಲಿ ಕೆಲದಿನಗಳ ಹಿಂದೆ ವಿಕಲಚೇತನ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ನೇತ್ರ ತಪಾಸಣೆ ನಡೆಸಲಾಗಿತ್ತು ತಪಾಸಣೆಯಲ್ಲಿ ಕನ್ನಡಕ್ಕೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಯ ಅವಿನಾಶ್ ರವರು ತಿಳಿಸಿದರು
ಕನ್ನಡಕ್ಕೆ ಆಯ್ಕೆಯಾದವರಿಗೆ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ಟೈಟನ್ ಕಂಪನಿ ಸಹಯೋಗದಲ್ಲಿ ನನ್ನ ಕಣ್ಣು ಯೋಜನೆಯಡಿಯಲ್ಲಿ 10 ಜನರಿಗೆ ಗುರುವಾರ ಉಚಿತವಾಗಿ ಅವಿನಾಶ್ ರವರು ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಅಂತರಗಂಗೆ ಬುದ್ದಿಮಾಂದ್ಯ ವಿಕಲಚೇತನ ಶಾಲೆಯ ಕಾರ್ಯದರ್ಶಿ ಕೆ ಎಸ್ ಶಂಕರ್, ಪ್ರಜ್ಞಾ ಶಂಕರ್, ಸಿಬ್ಬಂದಿ ವಿನಯ್, ತಿರುಮಲೇಶ್ ಮತ್ತು ವಿಕಲಚೇತನ ಮಕ್ಕಳು ಮತ್ತು ವಯೋವೃದ್ಧರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ